fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಮಾರ್ಚ್ 31, 2017

ಇಳಿದು ಬಾ ತಾಯಿ

 
ಕವಿ : - ವರಕವಿ ಡಾ.ದ.ರಾ.ಬೇಂದ್ರೆ ( ಅಂಬಿಕಾತನಯದತ್ತ )
ಸಂಗೀತ / ಗಾಯನ – ಪಿ.ಕಾಳಿಂಗ ರಾವ್

ಇಳಿದು ಬಾ ।।
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ।।

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ ।।

ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ ।।
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ ।।

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ ।।

ನಿನ್ನ ಕಂದನ್ನ ಹುಡುಕಿ ಬಾ ।।
ಹುಡುಕಿ ಬಾ ತಾಯಿ
ದುಡುಕಿ ಬಾ.
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ.।।

ಭಾನುವಾರ, ಮಾರ್ಚ್ 26, 2017

ಕನ್ನಡ ಗೀತೆಯ QR ಕೋಡ

ಹಂಪಿಯ ಗುಡಿಇಇಇಇಇ,
ಕಲ್ಲಿನ ನುಡಿಇಇಇಇಇ,
ಕನ್ನಡದ ಗುಡಿಇಇಇಇ,
ಇತಿಹಾಸ ಹೇಳಲೆಂದೆ ಇರುವ ಗುಡಿಇಇಇ...


ತಾನಾಗಿಯೇ ಅರಳಿತುಉಉಉಉ
 ಕನ್ನಡದ ಮಲ್ಲಿಗೆಎಎಎಎ

ಕನ್ನಡ ಗೀತೆ QR ಕೋಡ ಸ್ಕ್ಯಾನ್ ಮಾಡಿ ಹಾಡು ಕೇಳಿ






ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ

ಅಂಕಿತ ನಾಮಶುದ್ಧಸಿದ್ಧಪ್ರಸಿದ್ಧ ಕುರುಂಗೇಶ್ವರಲಿಂಗ 
ಕಾಲ೧೧೬೦ 
ದೊರಕಿರುವ ವಚನಗಳು11 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯಕಾಲಸು. 1160. ಮುತ್ತಣ್ಣ ಎಂಬ ಹೆಸರೂ ಇವನಿಗಿದೆರಾತ್ರಿಯ ಹೊತ್ತಿನಲ್ಲಿ ಪ್ರಹರಿ ಕೆಲಸ ಮಾಡುತ್ತಿದ್ದಈತನ 11 ವಚನಗಳು ದೊರೆತಿವೆತನ್ನ ಕಸುಬಿನ ವಿವರಗಳನ್ನು ರೂಪಕಗಳನ್ನಾಗಿ ಬಳಸಿಕೊಂಡಿದ್ದಾನೆ.


ಅಂಗವಿಕಾರ ಸಾಕೇಳಿಬಹುವಿಡಂಗದ ಪ್ರಕೃತಿಯ ಮರದೇಳಿ.
ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ.
ನಿಮ್ಮ ಗುರುವಾಜ್ಞೆಯ
ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ.
ಸಾರಿದೆಎವೆ ಹಳಚಿದಡಿಲ್ಲ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

ಬುಧವಾರ, ಮಾರ್ಚ್ 22, 2017

ಅಮ್ಮನ ನೆನಪು ಕಾಡುತ್ತಿದೆ...



ಎಂಥಾ ಚೆಂದ ನನ್ನ ಅಮ್ಮ
ನೀವು ಇವಳ ಬಲ್ಲಿರೆ...
ಇವಳ ಮಾತು ಇವಳ ಮಮತೆ
ಮಧುರ ನೆನಪ ಚೆಲ್ಲಿರೆ...

ನಾನಿಹೆನು ಬಲುದೂರ
ಮರಳಿಬರಲು ಕಾತರ...
ಅಮ್ಮ ನಿನಗೆ ಹೇಳಲೇನು
ಮನದಲೆಷ್ಟು ಬೇಸರ...

ಅಮ್ಮ ನಿನ್ನ ಮಾತೇ ಮುತ್ತು
ನನ್ನ ಮನದ ತುಂಬೆಲ್ಲಾ...
ಕಾಡಿದೆ ನಿನ್ನ ಕೈತುತ್ತು
ನೀ ತುಂಬಿರುವೆ ಮನದಲೆಲ್ಲಾ...

ಅಮ್ಮ ನಿನ್ನ ನೆನಪು ನನ್ನ
ಪದೇ ಪದೇ ಕಾಡಿದೆ...
ಕಣ್ಣಂಚಿನಲಿ ಜಿನುಗುತಿದೆ
ನೆನಪ ಬಿಂದು ನಿನ್ನದೇ...
                                                                                                         Posted by Prashanth Urala. G

ಸೋಮವಾರ, ಮಾರ್ಚ್ 20, 2017

ಕುದುರೆ ಸವಾರಿ



ಚಡ್ಡಿ ಗಿಡ್ಡಿ ಹಾಕಿಕೊಂಡು
 
ಕುದುರೆ ಮೇಲೆ ಕುಳಿತುಕೊಂಡು
 
ಲಗಾಮು ಹಿಡಿದುಕೊಂಡು
 
ಹೈ! ಹೈ! ಹೈ!


ಲಂಗ ಗಿಂಗ ಹಾಕಿಕೊಂಡು
 
ಕುದುರೆ ಮೇಲೆ ಕುಳಿತುಕೊಂಡು
 
ಅಣ್ಣನ ಸೊಂಟ ಹಿಡಿದುಕೊಂಡು
 
ಹೈ! ಹೈ! ಹೈ!


ಕಂದು ಬಣ್ಣ ನಮ್ಮ ಕುದುರೆ
 
ಗಾಳಿ ಹಾಗೆ ಓಡೊ ಕುದುರೆ
 
ನಮ್ಮ ಕುದುರೆ! ನಮ್ಮ ಕುದುರೆ!

ಹೈ! ಹೈ! ಹೈ!


ಕುದುರೆ ಮೇಲೆ ಕುಳಿತುಕೊಂಡು
 
ಅದರ ಬೆನ್ನ ತಟಕೊಂಡು
 
ಅಲ್ಲಿ ಇಲ್ಲಿ ಸುತ್ತಿಕೊಂಡು
 
ಹೈ! ಹೈ! ಹೈ!


ಕುದುರೆ ಮೇಲೆ ಕುಳಿತುಕೊಂಡು
 
ಹಳ್ಳ ಗಿಳ್ಳ ಹಾರಿಕೊಂಡು
 
ಮನೆಗೆ ಬಂದು ಸೇರಿಕೊಂಡು
 
ಹೈ! ಹೈ! ಹೈ!


ಕುದುರೆ ಮೈಯ ಸವರಿ ತಟ್ಟಿ
 
ಹುರುಳಿ ಗಿರಳಿ ತಂದು ಕೊಟ್ಟು
 
ಸಾಕುವೆವು ನಮ್ಮ ತಟ್ಟು
 
ಹೈ! ಹೈ! ಹೈ!


--
ಜೆ. ಪಿ. ರಾಜರತ್ನಂ ಅವರಕಡ್ಲೆಪುರಿಸಂಕಲನದಿಂದ.