ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ನಿಮಗೆ ಗೋತ್ತೆ ? ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಿಮಗೆ ಗೋತ್ತೆ ? ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಅಕ್ಟೋಬರ್ 08, 2025

ವಾಟ್ಸಾಪ್ 🆚 ಅರಟ್ಟೈ

                                           vs     
    ಭಾರತದಲ್ಲಿ ವಾಟ್ಸಾಪ್‌ಗಾಗಿ ಹೊಸ ಸ್ಪರ್ಧೆ ಇದೆ. ಅಥವಾ ಕನಿಷ್ಠ ಪಕ್ಷ ಈಗ ಹಾಗೆ ಕಾಣುತ್ತಿದೆ. ಈ ಪ್ರತಿಸ್ಪರ್ಧಿ ಜೋಹೊ ರಚಿಸಿದ ಅರಟ್ಟೈ ಅಪ್ಲಿಕೇಶನ್. ಈ ಅಪ್ಲಿಕೇಶನ್ ಮೊದಲು 2021 ರಲ್ಲಿ ಆಪ್ ಸ್ಟೋರ್‌ಗಳಿಗೆ ಪ್ರವೇಶಿಸಿದರೂ, ಅದು ಈಗ ಭಾರತ ಸರ್ಕಾರದ ಅನುಮೋದನೆಯಿಂದ ಹಾಗೂ ಸಾಮಾಜಿಕ ಮಾಧ್ಯಮದ ಪ್ರಚಾರ ಮತ್ತು ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಎಂಬ ಸ್ಥಾನಮಾನ ಕಾರಣ. ಇದು ಇತ್ತೀಚೆಗೆ ಜನಪ್ರಿಯತೆಯಲ್ಲಿ ಭಾರಿ ಏರಿಕೆ ಕಂಡಿದೆ. ವಾಸ್ತವವಾಗಿ ಬಳಕೆದಾರರ ಸೈನ್-ಅಪ್‌ಗಳು, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಟ್ರಾಫಿಕ್‌ನಲ್ಲಿ 100 ಪಟ್ಟು ಏರಿಕೆಯೊಂದಿಗೆ, ಇದು ಮೆಟಾದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ಗೆ ಸವಾಲು ಹಾಕಬಹುದು ಎಂದು ತೋರುತ್ತದೆ. ಜೊಹೊದ ಮೇಡ್ - ಇನ್ - ಇಂಡಿಯಾ Google (Noto Color Emoji 16.0) (ಇದರ ಹಿಂದೆ ಜೊಹೊ ಕಾರ್ಪೊರೇಷನ್‌ನ ಸಂಸ್ಥಾಪಕ ಶ್ರೀಧರ್ ವೆಂಬು ಇದ್ದಾರೆ. ಅವರು ತಮಿಳುನಾಡಿನ ತಂಜಾವೂರಿನವರು. ಜನನ 1968 ಇವರು ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಫೋರ್ಬ್ಸ್ ಪ್ರಕಾರ , ಅವರು 2024 ರ ಹೊತ್ತಿಗೆ $5.85 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ 39 ನೇ ಶ್ರೀಮಂತ ವ್ಯಕ್ತಿ. ಅವರಿಗೆ 2021 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು).

ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟೈ
ಬಹುಸಾಧನ ಬೆಂಬಲ, ಪಾಕೆಟ್ ಮತ್ತು ಜಾಹೀರಾತು ಮುಕ್ತ ಬಳಕೆಯಂತಹ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್‌ಗೆ ಸವಾಲಾಗಿ ವೇಗವಾಗಿ ಹೊರ ಹೊಮ್ಮುತ್ತಿದೆ. ಎರಡು ಮೆಸೇಜಿಂಗ್ ಅಪ್ಲಿಕೇಶನ್ ಪ್ರತಿಸ್ಪರ್ಧಿಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳು ಇಲ್ಲಿವೆ.

ಚಾನೆಲ್‌ಗಳು ಮತ್ತು ಕಥೆಗಳು: ಅರಟ್ಟೈ & ವಾಟ್ಸಾಪ್: ಕಥೆಗಳು ಮತ್ತು ಪ್ರಸಾರ ಶೈಲಿಯ ಚಾನಲ್‌ಗಳನ್ನು ಒದಗಿಸುತ್ತದೆ. ಸಂದೇಶ ಕಳುಹಿಸುವಿಕೆಯನ್ನು ಸಾಮಾಜಿಕ ಮಾಧ್ಯಮ ಅಂಶಗಳೊಂದಿಗೆ ವಿಲೀನಗೊಳಿಸುತ್ತದೆ.

ಬಹುಸಾಧನ ಪ್ರವೇಶ: ಅರಟ್ಟೈ ಆಂಡ್ರಾಯ್ಡ್ ಟಿವಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಾಧನಗಳಲ್ಲಿ ಪ್ರವೇಶವನ್ನು ನೀಡುತ್ತದೆ, ಇವುಗಳನ್ನು ವಾಟ್ಸಾಪ್ ಪ್ರಸ್ತುತ ಬೆಂಬಲಿಸುವುದಿಲ್ಲ. ಬಳಕೆದಾರರು ತಮ್ಮ ಅರಟ್ಟೈ & ವಾಟ್ಸಾಪ್ ಖಾತೆಯನ್ನು ಏಕಕಾಲದಲ್ಲಿ ಐದು ಸಾಧನಗಳಲ್ಲಿ ಬಳಸಬಹುದು.

ಪ್ರವೇಶ ಸಾಧ್ಯತೆ : ಅರಟ್ಟೈ ಅನ್ನು ಹಗುರವಾಗಿರಲು ಮತ್ತು ಕಡಿಮೆ ಮೆಮೊರಿ ಸ್ಮಾರ್ಟ್‌ಫೋನ್‌ಗಳು ಮತ್ತು ಹಳೆಯ 2G/3G ನೆಟ್‌ವರ್ಕ್‌ಗಳಲ್ಲಿಯೂ ಸಹ ಸರಾಗವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಬಳಕೆದಾರರಿಗೆ ಮತ್ತು ಬಜೆಟ್ ಸಾಧನಗಳನ್ನು ಹೊಂದಿರುವವರಿಗೆ ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ. ವಾಟ್ಸಾಪ್ ಹೋಲಿಸಿದರೆ, ಹೆಚ್ಚಿನ ಡೇಟಾ ಮತ್ತು ಸಿಸ್ಟಮ್ ಸಂಪನ್ಮೂಲಗಳನ್ನು ಬಳಸುತ್ತದೆ.

ಪಾಕೆಟ್ ವೈಶಿಷ್ಟ್ಯ: ಅರಟ್ಟೈ ಪಾಕೆಟ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಬಳಕೆದಾರರು ವೈಯಕ್ತಿಕ ಸಂಘಟನೆಗಾಗಿ ಫೋಟೋಗಳು, ವೀಡಿಯೊಗಳು, ಟಿಪ್ಪಣಿಗಳು, ಜ್ಞಾಪನೆಗಳು ಮತ್ತು ಇತರ ಫೈಲ್‌ಗಳನ್ನು ಸಂಗ್ರಹಿಸಬಹುದಾದ ಮೀಸಲಾದ ಸ್ವಯಂ ಚಾಟ್ ಸ್ಥಳ. ಇದು ವೀಡಿಯೊ ಸಭೆಗಳನ್ನು ನಿಗದಿಪಡಿಸಲು ಮೀಸಲಾದ "ಸಭೆಗಳು" ಟ್ಯಾಬ್ ಅನ್ನು ಸಹ ಹೊಂದಿದೆ. ವಾಟ್ಸಾಪ್ ಪ್ರಸ್ತುತ ಹೊಂದಿರದ ವೈಶಿಷ್ಟ್ಯ. ಆದಾಗ್ಯೂ, ವಾಟ್ಸಾಪ್ 'ನೀವು' ಚಾಟ್ ವಿಂಡೋವನ್ನು ಒದಗಿಸುತ್ತದೆ. ಅಲ್ಲಿ ಬಳಕೆದಾರರು ತಮ್ಮೊಂದಿಗೆ ಚಾಟ್ ಮಾಡಬಹುದು ಮತ್ತು ಮಾಧ್ಯಮವನ್ನು ಉಳಿಸಬಹುದು.

█▓▒░⯮ ಕೃಪೆ: 🙶 Google 🙷 ░▒▓█

ಸೋಮವಾರ, ಜುಲೈ 14, 2025

ಪಪ್ಪಾಯಿ ಏಕೆ ತಿನ್ನಬೇಕು…? ಇಲ್ಲಿವೆ ನೋಡಿ ಕೆಲವು ಕಾರಣಗಳು


         ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ನಿತ್ಯದ ಆಹಾರದಲ್ಲಿ ಅದನ್ನು ಸೇರ್ಪಡೆಗೊಳಿಸಿಕೊಂಡರೆ ಒಳಿತಾಗುತ್ತದೆ. ಶರೀರದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರಿಗೆ ಇದು ಒಂದು ವರದಾನವೇ ಸರಿ. ಕಿತ್ತಳೆ ಬಣ್ಣದ ಸಿಹಿಯಾದ ಈ ರಸಭರಿತ ಹಣ್ಣು ವಿಟಮಿನ್‍ಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಗುಣಕಾರಿ ಲಕ್ಷಣಗಳನ್ನುಹೊಂದಿದೆ.

1. ಉರಿಯೂತ ನಿವಾರಕ:
ಪಪ್ಪಾಯಿ ಚಿಮೊಪಾಪಿನ್ ಮತ್ತು ಪಾಪಿನ್ ಗಳೆಂಬ ಎರಡು ಪ್ರೋಟೀನ್ ಜೀರ್ಣಕಾರಕ ಕಿಣ್ವಗಳನ್ನು, ವಿಟಮಿನ್ ಎ, ಸಿ ಮತ್ತು ಕ್ಯಾರೋಟಿನ್ ಹೊಂದಿದೆ. ಇವೆಲ್ಲವೂ ಈ ಹಣ್ಣಿಗೆ ರುಮಟಾಯ್ಡ್ ಆಥ್ರೈಟಿಸ್ ವಿರುದ್ಧ ಹೋರಾಟಕ್ಕೆ ಕಸುವು ನೀಡುತ್ತವೆ ಮತ್ತು ಉರಿಯೂತಗಳ ನಿವಾರಣೆಗೂ ಸಹಕಾರಿಯಾಗಿದೆ.

2. ಕರುಳಿನ ರಕ್ಷಕ:
ಪಪ್ಪಾಯಿ ಜೀವನಿರೋಧಕ (ಆ್ಯಂಟಿ ಬಯಾಟಿಕ್)ಗಳಿಂದ ಹಾನಿಗೊಂಡ ಉತ್ತಮ ಕರುಳಿನ ಬ್ಯಾಕ್ಟೀರಿಯಾಗಳನ್ನು ಪುನಶ್ಚೇತನಗೊಳಿಸುತ್ತದೆ.

3. ವಾಕರಿಕೆ ನಿವಾರಕ: 
ಪಪ್ಪಾಯಿ ಕಿಣ್ವಗಳ ಒಂದು ಸಮೃದ್ಧ ಮೂಲವಾಗಿದ್ದು ಕರುಳಿನ ಆಮ್ಲವನ್ನು ಸಮತೋಲನಗೊಳಿಸುತ್ತದೆ. ಈ ಹಣ್ಣು ವಾಕರಿಕೆಯನ್ನು ಹೋಗಲಾಡಿಸುತ್ತದೆ.

4. ಒತ್ತಡ ಶಾಮಕ:
ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಒತ್ತಡದ ಹಾರ್ಮೋನ್‍ಗಳ ಹರಿವನ್ನು ನಿರ್ಬಂಧಿಸುತ್ತದೆ. ತನ್ಮೂಲಕ ಒತ್ತಡವನ್ನು ತಗ್ಗಿಸುತ್ತದೆ.

5. ಋತುಚರ್ಯೆ ಸುಗಮ:
ಋತು ಸಂಬಂಧಿ ತೊಂದರೆಗಳಿಗೆ ಪಪ್ಪಾಯಿ ರಾಮಬಾಣ ಎಂದು ಬಿಂಬಿತವಾಗಿದೆ. ಒಂದು ಪಪ್ಪಾಯಿ ಎಲೆ, ಹುಣಸೆಹಣ್ಣು ಮತ್ತು ಉಪ್ಪನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕುಡಿಯಿರಿ. ಈ ಮಿಶ್ರಣ ರುಚಿಕರವಾಗಿಲ್ಲದಿದ್ದರೂ ಋತುದೋಷ ಶಮನಗೊಳಿಸಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.

6. ಕ್ಯಾನ್ಸರ್ ವಿರುದ್ಧ ಸೆಣಸು:
ಪಪ್ಪಾಯಿಯಲ್ಲಿರುವ ಜೀವಸತ್ವ ಪಾಪಿನ್ ಮೇಲೆ ಅಧ್ಯಯನ ನಡೆಯುತ್ತಿದೆ. ಈ ಜೀವಸತ್ವವು ಕ್ಯಾನ್ಸರ್ ರೋಗಿಗಳಲ್ಲಿ ಕಿಮೋ ಥೆರಪಿ ಚಿಕಿತ್ಸೆಯ ಬಳಿಕ ತಲೆದೋರುವ ತೊಂದರೆಗಳ ಉಪಶಾಮಕವಾಗಿ ಕೆಲಸ ಮಾಡುತ್ತದೆ. ಪಪ್ಪಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ಕಸುವು ಲಭಿಸುತ್ತದೆ.

7. ರಕ್ತ ಪರಿಚಲನೆಗೆ ಪೂರಕ :
ಜನನ ನಿಯಂತ್ರಣ ಗುಳಿಗೆ ಸೇವಿಸುವವರು, ಧೂಮಪಾನಿಗಳು ಮುಂತಾದವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗುತ್ತದೆ. ಪಪ್ಪಾಯಿ ಸೇವನೆಯು ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.

       ಈ ಹಣ್ಣು ಪಾದಗಳ ಬಿರುಕನ್ನೂ ನಿವಾರಿಸುತ್ತದೆ ಎಂಬ ಪ್ರತೀತಿ ಇದೆ. ಪಪ್ಪಾಯಿಯನ್ನು ಚೆನ್ನಾಗಿ ಕಿವುಚಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಈ ದ್ರಾವಣದಲ್ಲಿ ಪಾದಗಳನ್ನು ಉಜ್ಜಿದರೆ ಸೀಳುಪಾದ ಗುಣವಾಗುತ್ತದೆ.

ಮಂಗಳವಾರ, ಫೆಬ್ರವರಿ 25, 2025

ಮೆಹಂದಿ ಬಣ್ಣ ಹೆಚ್ಚು ಕೆಂಪಗಾಗಬೇಕಾ...

       ಮಹಿಳೆಯರಿಗೆ ಕೈಗೆ ಮೆಹಂದಿ ಹಚ್ಚಿಕೊಳ್ಳುವುದೆಂದರೆ ಅಚ್ಚುಮೆಚ್ಚು. ಕೇವಲ ಮದುವೆ ಸಮಾರಂಭಗಳಿಗೆ ಮಾತ್ರವಲ್ಲ, ಇತರ ದಿನಗಳಲ್ಲಿಯೂ ಕೈಗೆ ಮಹಂದಿ ಹಚ್ಚಿಕೊಳ್ಳುತ್ತಾರೆ. ತಮ್ಮ ಕೈಯಲ್ಲಿನ ಮೆಹಂದಿ ಬಣ್ಣ ಗಾಢವಾದಾಗ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.

ಮೆಹಂದಿ ಬಣ್ಣ ಕೆಂಪಗಾಗಲು ಇಲ್ಲಿದೆ ಕೆಲವು ಟಿಪ್ಸ್‌
  • ಮೆಹಂದಿ ಹಚ್ಚಿಕೊಂಡ ನಂತರ ಅದರ ಮೇಲೆ ಲವಂಗದ ಎಣ್ಣೆ ಹಚ್ಚಿಕೊಳ್ಳಿ.
  • ಮೆಹಂದಿ ಹಚ್ಚಿಕೊಳ್ಳುವ ಮೊದಲು ಕೈಯನ್ನು ಚೆನ್ನಾಗಿ ತೊಳೆದು ಸೆಟ್ರೋನೆಲ್‌ ಎಣ್ಣೆ ಹಚ್ಚಿಕೊಳ್ಳಿ. ಮೆಹಂದಿ ಗಾಢ ಬಣ್ಣ ಬರಬೇಕಾದರೆ ತಾಳ್ಮೆ ಅಗತ್ಯ. 4 ಗಂಟೆಗಳ ತನಕ ಕೈಯಲ್ಲಿ ಮೆಹಂದಿ ಇಟ್ಟುಕೊಳ್ಳಿ.
  • ಮೆಕಪ್‌ ಎಕ್ಸ್‌ಪರ್ಟ್ಸ್‌ ಮೆಹಂದಿ ಬಣ್ಣ ಗಾಢವಾಗಲು ಫೌಂಡೇಶನ್‌ನ ಸಲಹೆ ನೀಡುತ್ತಾರೆ. ಇದನ್ನು ಹಚ್ಚಿಕೊಂಡರೆ ಕೈನ ಬಿಸಿಯ ಜೊತೆಗೆ ಸೇರಿ ಆಕ್ಸಿಡೈಸ್‌ ಆಗಿ ಮೆಹಂದಿಗೆ ಒಂದು ಗಾಢ ಬಣ್ಣ ಬರುತ್ತದೆ.
  • ನೀವು ಚಳಿಗಾಲದಲ್ಲಿ ಕೈಗೆ ಮೆಹಂದಿ ಹಚ್ಚಿಕೊಂಡಿದ್ದರೆ, ಮೆಹಂದಿ ಹಚ್ಚಿದ ಬಳಿಕ ಬೆಚ್ಚನೆಯ ಕಂಬಳಿಯನ್ನು ಕೈ ಮೇಲೆ ಮುಚ್ಚಿ. ಬೆಳಗ್ಗೆ ಹೊತ್ತಿಗೆ ನಿಮ್ಮ ಮೆಹಂದಿಗೆ ಒಳ್ಳೆ ಬಣ್ಣ ಬರುತ್ತದೆ.

ಗುರುವಾರ, ಜನವರಿ 02, 2025

ರಾಶಿಗಳು (ಹನ್ನೆರಡು ನಕ್ಷತ್ರ ಪುಂಜಗಳು)

    ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು.
    ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು (ಕ್ರಾಂತಿ ವೃತ್ತ) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ ರಾಶಿಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:
..
ಕ್ರಮಾಂಕಸಂಸ್ಕೃತ ಹೆಸರು & ಸ್ವಾಮಿ ಗ್ರಹಪಾಶ್ಚಾತ್ಯ ಹೆಸರುತತ್ವ
1ಮೇಷ (ಮಂಗಳ)Aries (Κριός, "ram")Fire
2ವೃಷಭ (ಶುಕ್ರ)Taurus (Ταύρος, "bull")Earth
3ಮಿಥುನ (ಬುಧ)Gemini (Δίδυμοι, "twins")Air
4ಕರ್ಕಾಟಕ (ಚಂದ್ರ)Cancer (Καρκίνος, "crab")Water
5ಸಿಂಹ (ಸೂರ್ಯ)Leo (Λέων, "lion")Fire
6ಕನ್ಯಾ (ಗುರು)Virgo (Παρθένος, "virgin", "girl")Earth
7ತುಲಾ (ಶುಕ್ರ)Libra (Ζυγός, "balance")Air
8ವೃಶ್ಚಿಕ (ಮಂಗಳ)Scorpio (Σκόρπειος, "scorpion")Water
9ಧನುಸ್ (ಬುಧು)Sagittarius (Τοξότης, "archer", "bow")Fire
10ಮಕರ:(ಮೊಸಳೆ-ಭಾರತೀಯ) (ಶನಿ)Capricorn (Αἰγόκερως, "goat-horned", "sea-monster")Earth
11ಕುಂಭ (ಶನಿ)Aquarius (Ὑδροχόος, "water-pourer", "pitcher")Air
12ಮೀನ (ಗುರು)Pisces (Ἰχθείς, "fish")Water

ಸೋಮವಾರ, ಅಕ್ಟೋಬರ್ 14, 2024

ನಾರದಮುನಿ ಹೇಳುವ ಆದರ್ಶ ಮನುಷ್ಯನ ೧೬ ಗುಣಗಳು . .

  1. ಗುಣವಾನ್ - ನೀತಿವಂತ
  2. ವೀರ್ಯವಾನ್- ಶೂರ
  3. ಧರ್ಮಜ್ಞ - ಧರ್ಮವನ್ನು ತಿಳಿದವನು
  4. ಕೃತಜ್ಞ - ಮಾಡಿದ ಸಹಾಯ/ಉಪಕಾರವನ್ನು ನೆನಪಿನಲ್ಲಿಟ್ಟು ಕೊಳ್ಳುವವನು
  5. ಸತ್ಯವಾಕ್ಯ – ಸತ್ಯವನ್ನು ನುಡಿಯುವವನು
  6. ಧೃಡವೃತ – ಮನೋನಿಶ್ವಯಕ್ಕೆ ಒಳಗಾದವನು
  7. ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವನು,
  8. ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವನು
  9. ವಿದ್ವಾನ್ - ಎಲ್ಲ ವಿದ್ಯೆಗಳನ್ನು ಬಲ್ಲವನು
  10. ಸಮರ್ಥ – ಸಮರ್ಥನು
  11. ಸದೈಕ ಪ್ರಿಯದರ್ಶನ – ನೋಡಲು ಕಣ್ಣುಗಳಿಗೆ ಸದಾ ಸುಖಕರನು
  12. ಆತ್ಮವಂತ – ಧೈರ್ಯಸ್ಥ
  13. ಜಿತಕ್ರೋಧ – ಕೋಪವನ್ನು ಗೆದ್ದವನು
  14. ದ್ಯುತಿಮಾನ್ – ಕಾಂತಿಯುಳ್ಳವನು,
  15. ಅನಸೂಯಕ – ಅಸೂಯೆ ಇಲ್ಲದವನು,
  16. ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಶಸ್ಯ ಸಂಯುಗೆ - ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವನು.

ಗುರುವಾರ, ಸೆಪ್ಟೆಂಬರ್ 26, 2024

ಮಗ ಮತ್ತು ಮಗಳು ಯಾರು ಶ್ರೇಷ್ಠ ?

ಮಗ ರಾಗವಾದರೆ, ಮಗಳು ಅನುರಾಗವಾಗುವಳು. ಇನ್ನೂ ಹೆಚ್ಚಿನ ಬಗ್ಗೆ ತಿಳಿಯುವದಾದರೆ ಅವುಗಳು ಈ ಕೆಳಗಿನಂತೆ ವಿವರಿಸಬಹುದು.... 
ಮಗ - ಮಗಳು ಮೇಲೆ ಪ್ರೀತಿ ಇರುವವರು ಓದಿ, ಶೇರ್ ಮಾಡುವ ಅಕ್ಷರಗಳು

   ಕ್ರ.ಸಂ  ಮಗಮಗಳು
1ರಾಗಅನುರಾಗ
2ಬುದ್ದಿಸಮೃದ್ಧಿ
3ಸಾಹಿತ್ಯಸಂಗೀತ
4ಗಣ್ಯಧನ್ಯ
5ಚೇತನಸಾಂತ್ವನ
6ಮನೆತನಮರ್ಯಾದೆ
7ಧಣಿಧ್ವನಿ
8ಪ್ರೀತಿವಾತ್ಯಲ್ಯ
9ದೃಷ್ಟಿಸೃಷ್ಟಿ
10ಸೊಬಗುಸೌಂದರ್ಯ
11ಇಂಪುತಂಪು
12     ಝೇಂಕಾರ     ಮಮಕಾರ   
13ಧೈರ್ಯಐಶ್ವರ್ಯ
14ಸಿಹಿಮಧುರ
15ಕಿಮ್ಮತ್ತುಕಿಸ್ಮತ್ತು
16ಹೃದಯಮಿಡಿತ
17ಕಣ್ಣುಬೆಳಕು
18ಮೃದಂಗಅಂತರಂಗ
19ಆತ್ಮಆತ್ಮಸಾಕ್ಷಿ
20ಸ್ವರ್ಗಮೋಕ್ಷ
21ಕೃಷ್ಣಯಶೋಧೆ
22ವಾರಬ್ದಾರಹರ್ಷಧಾರ
23ಸಂಸ್ಕಾರಸಂಸ್ಕೃತಿ
24ಜೀವಜಲಜೀವನದಿ
25ಮಗತಾಯಿ
26  ಮದುವೆಯವರೆಗೆ   ಕೊನೆಯವರೆಗೆ 

ಗುರುವಾರ, ಆಗಸ್ಟ್ 15, 2024

55 ರ ಸಂಭ್ರಮದಲ್ಲಿ "ನಮ್ಮ ಇಸ್ರೋ, ನಮ್ಮ ಹೆಮ್ಮೆ"

🤖🤩 ಮಾನವ ಕುಲದ ಸೇವೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ 🤩🤖

ವಿಷಯವಿವರ
ಸಂಸ್ಥಾಪಕರುವಿಕ್ರಮ್ ಸಾರಾಭಾಯಿ
ಸಂಕ್ಷೇಪಣISRO
ರಚನೆ
15 ಆಗಸ್ಟ್ 1969
1962 ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ
ಹಿಂದಿನ ಸಂಸ್ಥೆINCOSPAR
ವಿಧಸ್ಪೇಸ್ ಏಜೆನ್ಸಿ
ನ್ಯಾಯವ್ಯಾಪ್ತಿಬಾಹ್ಯಾಕಾಶ ಇಲಾಖೆ
ಪ್ರಧಾನ ಕಛೇರಿ
ಬೆಂಗಳೂರು, 13°02′6.4″N77°34′15.6″E
ಮಾಲಿಕಭಾರತ ಸರ್ಕಾರ
ಉದ್ಯೋಗಿಗಳು16,786 (2022)
ತಾಣwww.isro.gov.in
ಪ್ರಾಥಮಿಕ ಬಾಹ್ಯಾಕಾಶ ನಿಲ್ದಾಣಗಳುS.D.S.C ಮತ್ತು T.E.R.L.S
I.S.R.O
Indian  Space Research Organisation

I.N.C.O.S.P.A.R
Indian National Committee for Space Research

S.D.S.C
Satish Dhawan Space Centre

T.E.R.L.S
Thumba Equatorial Rocket Launching Station

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ "ಇಸ್ರೋ" ಬೆಂಗಳೂರು ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತ ಸರ್ಕಾರದ ಬಾಹ್ಯಾಕಾಶ ಸಂಸ್ಥೆಯಾಗಿದೆ. ಇಂಜಿನಿಯರ್‌ಗಳು ಕೆಲಸ ಮಾಡಲು ಇದು ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದೆ. "ಬಾಹ್ಯಾಕಾಶ ವಿಜ್ಞಾನ ಸಂಶೋಧನೆ ಮತ್ತು ಗ್ರಹಗಳ ಅನ್ವೇಷಣೆಯನ್ನು ಅನುಸರಿಸುವಾಗ ರಾಷ್ಟ್ರೀಯ ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ" ವನ್ನು ಬಳಸಿಕೊಳ್ಳುವ ದೃಷ್ಟಿಯನ್ನು ISRO ಹೊಂದಿದೆ.

ಭಾರತದಾದ್ಯಂತ ಒಟ್ಟು 32 ಕೇಂದ್ರಗಳೊಂದಿಗೆ ISRO ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದಕ್ಕಾಗಿ ಸಿವಿಲ್, ಎಲೆಕ್ಟ್ರಿಕಲ್, ಆರ್ಕಿಟೆಕ್ಚರ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮತ್ತು ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಸ್ಟ್ರೀಮ್‌ಗಳಿಂದ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ISROಗೆ ಅರ್ಜಿ ಸಲ್ಲಿಸಲು ಅರ್ಹವಾದ ಪದವಿಗಳು ಅಂದರೆ B.E., B.Tech, B.Sc.(ಎಂಜಿನಿಯರಿಂಗ್), ಡಿಪ್ಲೊಮಾ + B.E / B.Tech (ಲ್ಯಾಟರಲ್ ಎಂಟ್ರಿ), B.Sc. + B.E / B.Tech(ಲ್ಯಾಟರಲ್ ಎಂಟ್ರಿ), AMIE, B.E / B.Tech ಪದವಿ ಅರೆಕಾಲಿಕ.

ಬಾಹ್ಯಾಕಾಶ ಇಲಾಖೆಯ ಇಸ್ರೋ ಕೇಂದ್ರೀಕೃತ ನೇಮಕಾತಿ ಮಂಡಳಿ (ICRB) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ನೇಮಕಾತಿ ಡ್ರೈವ್ ಅನ್ನು ನಡೆಸುತ್ತದೆ. ಕೆಳಗಿನ ತಿಳಿಸದ 15 ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಯನ್ನು ಮಾಡಲಾಗುತ್ತದೆ:
  1. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC).
  2. ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC).
  3. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) SHAR.
  4. ISRO ಉಪಗ್ರಹ ಕೇಂದ್ರ (ISAC).
  5. ISRO ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC).
  6. ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ (SAC).
  7. ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC).
  8. ISRO ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC).
  9. ISRO ಜಡ ವ್ಯವಸ್ಥೆಗಳ ಘಟಕ (IISU).
  10. ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಪ್ರಯೋಗಾಲಯ.
  11. ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂವಹನ ಘಟಕ (DECU).
  12. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (IIRS).
  13. ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (MCF).
  14. ಬಾಹ್ಯಾಕಾಶ ಇಲಾಖೆ ಮತ್ತು ಇಸ್ರೋ ಕೇಂದ್ರ.
  15. ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್.
█▓▒▒░░⯮ ಕೃಪೆ: 🙶ವಿಕಿಡೇಟಾ, ಮೇಡಇಝಿ🙷 ░░▒▒▓█

ಶನಿವಾರ, ಜುಲೈ 15, 2023

ಶ್ರೀ ಹನುಮಂತನ ಇತರ ಹೆಸರುಗಳು

ಮಾರುತಿ 
ಪವನಪುತ್ರ 
ಸುಂದರ 
ವಾಯುಪುತ್ರ 
ರಾಮಪ್ರಿಯ 
ಹನುಮ 
ಅಂಜನಾತನಯ 
ಆಂಜನೇಯ 
ವಾನರ ಶ್ರೇಷ್ಠ 
ಕೇಸರಿ ನಂದನ 
ಹನುಮಂತ 
ರಾಮದೂತ 
ದಾಸರಲ್ಲಿ ಶ್ರೇಷ್ಟ 
ಭಕ್ತ ಅಂಜನಸುತ
ಹನುಮಂತನಿಗೆ 5 ಜನ ಸಹೋದರರಿದ್ದರು ಗೊತ್ತಾ?
1) ಮತಿಮಾನ್,
2) ಶ್ರುತಿಮಾನ್,
3) ಕೇತುಮಾನ್,
4) ಗತಿಮಾನ್
         ಮತ್ತು
5) ಧೃತ್ಮಾನ್.

ಹನುಮಂತನ ಪ್ರಮುಖ ದೇವಸ್ಥಾನಗಳು 
  • ಹೊನ್ನಾವರ ತಾಲೂಕಿನ ಗೇರಸೊಪ್ಪಾದ ಬಂಗಾರಮಕ್ಕಿ ಶ್ರೀ ವೀರಾಣಜನೇಯ ದೇವಸ್ಥಾನ.
  • ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿನ ಹನುಮಂತನ ಬೃಹತ್ ಪ್ರತಿಮೆಯಿರುವ ಶ್ರೀ ಆಂಜನೇಯ ದೇವಸ್ಥಾನ.
  • ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ.
  • ಬೆಂಗಳೂರಿನ ಜಯನಗರ ೯ನೇ ಬ್ಲಾಕಿನಲ್ಲಿರುವ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ.
  • ರಾಮನಗರ ಜಿಲ್ಲೆಯ ಚನ್ನಪಟ್ಟಣದ ದೇವರಹೊಸಹಳ್ಳಿಯ ಶ್ರೀ ಸಂಜೀವರಾಯಸ್ವಾಮಿ ದೇವಸ್ಥಾನ.
  • ರಾಮನಗರ ಜಿಲ್ಲೆಯ ಕೆಂಗಲ್ ಹನುಮಂತರಾಯಸ್ವಾಮಿ ದೇವಸ್ಥಾನ.
  • ಕೋಲಾರ ಜಿಲ್ಲೆಯ ಮಾಕಿರೆಡ್ಡಿಪಲ್ಲಿಯಲ್ಲಿರುವ ಮುತ್ತುರಾಯ ಸ್ವಾಮಿ ದೇವಸ್ಥಾನ.
  • ಬಿಜಾಪುರ ಜಿಲ್ಲೆಯ ಯಲಗೂರು ಆಲಮಟ್ಟಿ ಹತ್ತಿರ ಯಲಗೂರೇಶ ಸ್ವಾಮಿ ದೇವಸ್ಥಾನ.
  • ಮಂತ್ರಾಲಯದ ಹತ್ತಿರ ಪಂಚಮುಖಿ ಆಂಜನೇಯ (ರಾಮಾಯಣ) ದೇವಸ್ಥಾನ.
  • ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಚಟ್ಟೇನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.
  • ಕನಕಪುರ ತಾಲ್ಲೂಕು ಕುರುಬರಹಳ್ಳಿ ಬಸವಾಂಜನೇಯ (ಬಿಸಿಲಪ್ಪ) ಸ್ವಾಮಿ ದೇವಸ್ಥಾನ.
  • ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ನಗರದಲ್ಲಿರುವ ಶ್ರೀ ಜೀವಾಂಜೀನೇಯಸ್ವಾಮಿ ದೇವಸ್ಥಾನ.
  • ತುಮಕುರು ಜಿಲ್ಲೆಯ ಗೂಳೂರು ಗ್ರಾಮದ ಶೂಲದ ಹನುಮಂತರಾಯಸ್ವಾಮಿ ದೇವಸ್ಥಾನ.
  • ತುಮಕುರು ಜಿಲ್ಲೆಯ ಎಡೆಯುರು ಗ್ರಾಮದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ.
  • ದಾವಣಗೆರೆ ಜಿಲ್ಲೆಯ ದಾಗಿನಕಟ್ಟೆಯ ಚನ್ನಗಿರಿ ತಾ|| ಶ್ರೀ ಆಂಜನೇಯಸ್ವಾಮಿ ದೇವಸ್ಥಾನ.
  • ದಾವಣಗೆರೆ ಜಿಲ್ಲೆಯ ಕುಂದುರಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ.
  • ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿ ಬಳಿಯಿರುವ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನ.
  • ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಎಸ್.ಗಂಗನಾಳದ ಅಮೃತ ಘಳಿಗೆಯಲ್ಲಿ ನಿರ್ಮಿಸಿದ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನ.
  • ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಸಮೀಪ ಇರುವ ಅಂಜನಾದ್ರಿ ಬೆಟ್ಟ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ (ಹನುಮ ಜನಿಸಿದ ಸ್ಥಳ - ಕಿಷ್ಕಿಂಧ ಪ್ರದೇಶ).
  • ಅನಂತಪುರ ಜಿಲ್ಲೆಯ ಮಡಕಶೀರಾ ತಾಲೂಕಿನ ಮದೂಡಿ ಗ್ರಾಮದ ಬಳಿಯ ಶ್ರೀ ರಾವುಡಿ ಆಂಜನೇಯ ಸ್ವಾಮಿ ದೇವಸ್ಥಾನ.
  • ಶಿವಮೊಗ್ಗ ದಲ್ಲಿ ಇರುವ ಕೋಟೆ ಆಂಜನೇಯ ದೇವಸ್ಥಾನ
  • ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಶ್ರೀ ಕ್ಷೇತ್ರ ಕದರಮಂಡಲಗಿ ಶ್ರೀ ಕಾಂತೇಶ (ಆಂಜನೇಯ)ದೇವಸ್ಥಾನ
  • ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಕ್ಕನೂರು ಶ್ರೀ ಕೊಕ್ಕನೂರಪ್ಪ ದೇವಸ್ಥಾನ
  • ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲೂಕಿನ ತಮ‍ಟಕಲ್ಲು ಶ್ರೀ ಆಂಜನೇಯಸ್ವಾಮಿ ದೇವಸ್ಥಾನ
  • ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೂನಿಕೆರೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ
  • ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದ ಶ್ರೀ ಮಾರುತಿ (ಪ್ರಾಣ ದೇವರು) ದೇವಸ್ಥಾನ

ಮಂಗಳವಾರ, ಜನವರಿ 03, 2023

ನಾರದಮುನಿ ಹೇಳುವ ಆದರ್ಶ ಮನುಷ್ಯನ ೧೬ ಗುಣಗಳು

  1. ಗುಣವಾನ್ - ನೀತಿವಂತ
  2. ವೀರ್ಯವಾನ್- ಶೂರ
  3. ಧರ್ಮಜ್ಞ - ಧರ್ಮವನ್ನು ತಿಳಿದವನು
  4. ಕೃತಜ್ಞ - ಮಾಡಿದ ಸಹಾಯ/ಉಪಕಾರವನ್ನು ನೆನಪಿನಲ್ಲಿಟ್ಟು ಕೊಳ್ಳುವವನು
  5. ಸತ್ಯವಾಕ್ಯ – ಸತ್ಯವನ್ನು ನುಡಿಯುವವನು
  6. ಧೃಡವೃತ – ಮನೋನಿಶ್ವಯಕ್ಕೆ ಒಳಗಾದವನು
  7. ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವನು,
  8. ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವನು
  9. ವಿದ್ವಾನ್ - ಎಲ್ಲ ವಿದ್ಯೆಗಳನ್ನು ಬಲ್ಲವನು
  10. ಸಮರ್ಥ – ಸಮರ್ಥನು
  11. ಸದೈಕ ಪ್ರಿಯದರ್ಶನ – ನೋಡಲು ಕಣ್ಣುಗಳಿಗೆ ಸದಾ ಸುಖಕರನು
  12. ಆತ್ಮವಂತ – ಧೈರ್ಯಸ್ಥ
  13. ಜಿತಕ್ರೋಧ – ಕೋಪವನ್ನು ಗೆದ್ದವನು
  14. ದ್ಯುತಿಮಾನ್ – ಕಾಂತಿಯುಳ್ಳವನು,
  15. ಅನಸೂಯಕ – ಅಸೂಯೆ ಇಲ್ಲದವನು,
  16. ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಶಸ್ಯ ಸಂಯುಗೆ - ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವನು. 
                            Naradmuni Icon

ಶುಕ್ರವಾರ, ಡಿಸೆಂಬರ್ 09, 2022

ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ (ಮರೆಯಬಾರದು )

      ಹೆಣ್ಣಿನ ಬಗ್ಗೆ ವಿವರಿಸುವುದು ತುಂಬಾ ಕಷ್ಟದ ವಿಷಯ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನುತ್ತಾರೆ. ಒಬ್ಬ ವ್ಯಕ್ತಿಯ ನಾಶಕ್ಕೂ ಹೆಣ್ಣೆ ಕಾರಣ ಕರ್ತಳಾಗಿರುತ್ತಾಳೆ. ಒಮ್ಮೆ ಅಬಲೆ ಅನಿಸಿದರೂ, ಮತ್ತೊಮ್ಮೆ ವಿಶ್ವವನ್ನು ನಿಯಂತ್ರಿಸುವ ಶಕ್ತಿ ಹೆಣ್ಣಗಿದೆ ಎಂದು ಅನಿಸುತ್ತದೆಯಲ್ಲವೇ? ಒಬ್ಬ ಪುರುಷನಿಗೆ ತನ್ನ ಬಾಳಿನಲ್ಲಿ ಉತ್ತಮ ಸ್ತ್ರೀಯರು ದೊರಕಿದರೆ ಅವನೇ ಅದೃಷ್ಟ ಶಾಲಿ. ಆ ಸ್ತ್ರೀಯರಲ್ಲಿ ಅವನ ತಾಯಿ ಹಾಗೂ ಕೈ ಹಿಡಿದವಳು ಪುರುಷನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಗನನ್ನು ಉತ್ತಮ ಹಾದಿಯಲ್ಲಿ ಬೆಳೆಸುವಲ್ಲಿ ತಾಯಿಯ ಮಾತ್ರ ಮಹತ್ವವಾದರೆ, ಅವನನ್ನು ಉತ್ತಮನಾಗಿಯೇ ಉಳಿಸಿಕೊಳ್ಳುವಲ್ಲಿ ಹೆಂಡತಿಯ ಪಾತ್ರ ಪ್ರಮುಖವಾಗಿರುತ್ತದೆ. ಮಾರ್ಚ್ 8. ಅಂತರಾಷ್ಟ್ರೀಯ ಮಹಿಳೆಯರ ದಿನ. ಮಹಿಳೆಯರ ದಿನದ ವಿಶೇಷವಾಗಿ ಪ್ರತೀಯೊಬ್ಬ ಪುರುಷನ ಜೀವನದಲ್ಲಿ ಬರುವ 7 ಪ್ರಮುಖ ಸ್ತ್ರೀಯರ ಬ್ಗಗೆ ಹೇಳಲಾಗಿದೆ

1) ಅಮ್ಮ:-ಅಮ್ಮನ ಪಾತ್ರವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ನಾವು ಬೆಳೆದ ಒಂದೊಂದು ಹಂತದಲ್ಲಿ ಅಮ್ಮನ ಶ್ರಮವಿರುತ್ತದೆ, ತ್ಯಾಗವಿರುತ್ತದೆ. ಅದರಲ್ಲೂ ಸಾಮಾನ್ಯವಾಗಿ ಗಂಡು ಮಕ್ಕಳು ಅಪ್ಪನಿಗಿಂತ ಹೆಚ್ಚಾಗಿ ಅಮ್ಮನನ್ನು ಹಚ್ಚಿಕೊಂಡಿರುತ್ತಾರೆ.

2) ಅಕ್ಕ-ತಂಗಿ :-ಅಕ್ಕ-ತಂಗಿ ಇವರ ಜೊತೆ ಕಳೆದ ಯಾವುದೇ ನೆನಪನ್ನು ಮರೆಯಲು ಸಾಧ್ಯವಿಲ್ಲ. ಸ್ವಂತ ಅಕ್ಕ-ತಂಗಿ ಇಲ್ಲದಿದ್ದರೂ ಚಿಕ್ಕಪ್ಪನ-ದೊಡ್ಡಪ್ಪನ ಮಕ್ಕಳನ್ನು ಅಕ್ಕ -ತಂಗಿ ಎಂದು ಕರೆಯುತ್ತಾ ಅವರ ಜೊತೆ ಆಟ ಆಡಿ ಕಳೆದ ಕ್ಷಣಗಳು ನೆನಪಿನಲ್ಲಿ ಇದ್ದೇ ಇರುತ್ತದೆ.

3) ಅಜ್ಜಿ :-ಪ್ರೀತಿಯ ಅಜ್ಜಿಯನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ತನ್ನ ಬಾಲ್ಯದ ಬಗ್ಗೆ ನೆನೆಸುವಾಗ ಪ್ರತಿಯೊಬ್ಬರಿಗೂ ಅಜ್ಜಿ ನೆನೆಪಿಗೆ ಬಂದೇ ಬರುತ್ತಾಳೆ.

4) ಟೀಚರ್ :-ಯಾವುದೇ ಪುರುಷನನ್ನು ಕೇಳಿ ನೋಡಿ, ಅವರ ನೆನೆಪಿನಲ್ಲಿ ಒಂದಾದರೂ ಅವರ ಪ್ರೀತಿಯ ಟೀಚರ್ ನ ನೆನಪು ಇದ್ದೇ ಇರುತ್ತದೆ.

5) ಮೊದಲ ಪ್ರೇಮ :-ಪುರುಷ ತಾನು ಮೊದಲು ಇಷ್ಟಪಟ್ಟ ಹುಡುಗಿಯನ್ನು ತಮ್ಮ ಜೀವನದ ಕೊನೆಯವರೆಗೂ ನೆನೆಪಿನಲ್ಲಿಟ್ಟು ಕೊಳ್ಳುತ್ತಾರೆ. ಒಂದು ವೇಳೆ ತಾನು ಪ್ರೀತಿಸಿದ ಹುಡುಗಿ ಬಾಳಿನಲ್ಲಿ ದೊರಕದೇ ಹೋದರೆ ಅಥವಾ ಅವಳು ಮೋಸ ಮಾಡಿ ಹೋದರೂ ಕೂಡ ಅವಳನ್ನು ಅವನು ಯಾವತ್ತಿಗೂ ಮರೆಯುವುದಿಲ್ಲ.

6) ಹೆಂಡತಿ :-ಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಒಳ್ಳೆಯ ಹೆಂಡತಿ ಸಿಕ್ಕಿದರೆ ಜೀವನದಲ್ಲಿ ಎಂತಹ ಕಷ್ಟವನ್ನು ಎದುರಿಸುವ ಸಾಮರ್ಥ್ಯ ಪುರುಷನಿಗೆ ಬರುತ್ತದೆ.

7) ಮಗಳು :-ಪ್ರತಿಯೊಬ್ಬ ಉತ್ತಮ ತಂದೆಯೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಾನೆ. ಎಂತಹ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅಪ್ಪ-ಅಮ್ಮನ ಮರ್ಯಾದೆಗೆ ಕುಂದು ಬರದಂತೆ ನನ್ನ ಮಗಳು ನಡೆದುಕೊಳ್ಳಬೇಕೆನ್ನುವುದೇ ಪ್ರತಿಯೊಬ್ಬ ಹೆತ್ತವರ ಆಶಯ.
ಕೃಪೆ: ಮಾ.ಕೃ. ಮಂಜು:

ಗುರುವಾರ, ನವೆಂಬರ್ 24, 2022

ಸ್ತ್ರೀ💃 - ಪುರುಷ🕺

ಕಾರ್ಯೆಷು ದಾಸಿ, ಕರಣೇಶು ಮಂತ್ರಿ,
ಭೋಜನೇಶು ಮಾತಾ, ಶಯನೇಶು ರಂಭಾ,
ರೂಪೇಶು ಲಕ್ಷ್ಮೀ, ಕ್ಷಮಯಾಧರಿತ್ರಿ,
ಸತ್ಧರ್ಮ ಯುಕ್ತಾ, ಕುಲಧರ್ಮ ಪತ್ನೀ.

ಈ ಶ್ಲೋಕವನ್ನು ನೀವೆಲ್ಲರೂ ಕೇಳಿರುತ್ತೀರಿ.

ಸ್ತ್ರೀ ಹೇಗಿರಬೇಕೆನ್ನುವುದೇ ಅಲ್ಲ
ಪುರುಷ ಕೂಡಾ ಹೇಗಿರಬೇಕೆನ್ನುವುದು
&
ಪುರುಷ ಗುಣಗಾನದ ಒಂದು ಶ್ಲೋಕ ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಾರ್ಯೇಷು ಯೋಗೀ, ಕರಣೇಷು ದಕ್ಷ:,
ರೂಪೇ ಚ ಕೃಷ್ಣ:, ಕ್ಷಮಯಾ ತು ರಾಮಃ:,
ಭೋಜ್ಯೇಷು ತೃಪ್ತಃ:, ಸುಖ ದುಃಖ ಮಿತ್ರಂ,
ಷಟ್ಕರ್ಮಯುಕ್ತ:, ಖಲು ಧರ್ಮನಾಥ: .



ಬುಧವಾರ, ನವೆಂಬರ್ 09, 2022

ನಿಮಗೆ ಗೋತ್ತೆ ?

  1. ಬೆನ್ನು ಕೆಳಗೆ ಮಾಡಿ ಮಲಗುವ ಏಕೈಕ ಪ್ರಾಣಿಯೆಂದರೆ - ಮಾನವ.
  2. ಹೆಣ್ಣು ಸೊಳ್ಳೆ ಒಂದು ವರ್ಷದಲ್ಲಿ ೧೫,೦೦,೦೦,೦೦೦ ಸೊಳ್ಳೆಗಳನ್ನು ಉತ್ಪತ್ತಿ ಮಾಡಬಲ್ಲದು.
  3. ಒಂದು ಅಂಗುಲದಷ್ಟು ಮಣ್ಣು ನಿರ್ಮಾಣವಾಗಲು ೫೦೦ ರಿಂದ ೧೫೦೦ ವರ್ಷಗಳು ಬೇಕಾಗುತ್ತವೆ.
  4. ಮಾನವನ ಮೂತ್ರ ಪಿಂಡದಲ್ಲಿ ಪ್ರತಿ ನಿಮಿಷಕ್ಕೆ ೧೨೦ ಮಿ.ಲೀ. ಮೂತ್ರ ತಯಾರಾಗುತ್ತದೆ.
  5. ಸೂರ್ಯನು ತಿರುಗುವ ವೇಗದಿಂದಾಗಿ ಯಾವುದೇ ಸೂರ್ಯಗ್ರಹಣ ೭ ನಿಮಿಷ ೫೮ ಸೆಕೆಂಡ್ ಗಿಂತ ಹೆಚ್ಚು ಕಾಲ ಇರಲಾರದು.
  6. ಮಾನವನ ಮೂತ್ರಜನಕಾಂಗವು ಒಂದು ದಿನದಲ್ಲಿ ಸುಮಾರು ಎರಡು ಸಾವಿರ ಲೀಟರಿನಷ್ಟು ರಕ್ತವನು ಶುದ್ಧೀಕರಿಸುತ್ತದೆ.
  7. ಪಾದರಸ ದ್ರವರೂಪದಲ್ಲಿರುವ ಏಕೈಕ ಲೋಹ.
  8. ನೀರಿನ ಒಂದು ಹನಿಯಲ್ಲಿ ೬,೦೦೦,೦೦೦,೦೦೦,೦೦೦,೦೦೦,೦೦೦,೦೦೦ ಅಣುಗಳಿರುತ್ತವೆ.
  9. ಇರುವೆಗಳಲ್ಲಿ ಫಾರ್ಮಿಕ್ ಆಮ್ಲವಿರುವುದರಿಂದ ಅವುಗಳು ಕಚ್ಚಿದ್ದಾಗ ಉರಿಯುಂಟಾಗುತ್ತದೆ.
  10. ಅತಿಯಾಗಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಪದಾರ್ಥ - ಸಲ್ಫರ್ ಡೈ ಆಕ್ಸೈಡ್
  11. ಪ್ರಾಚೀನ ಲಿಪಿಗಳನ್ನು ಓದುವ ಶಾಸ್ತ್ರವನ್ನು "ಪಾಲಿಯೋಗ್ರಫಿ" ಎನ್ನುತ್ತಾರೆ.

ಭಾನುವಾರ, ಅಕ್ಟೋಬರ್ 09, 2022

ಮಹಾ ಭಾರತದ 18 ಪರ್ವಗಳು

1.  ಆದಿ ಪರ್ವ: ಪರಿಚಯ, ವಿಶ್ವ ಸೃಷ್ಟಿ ವಿವರ ಸೃಷ್ಟಿ ಮತ್ತು ಮಹಾಭಾರತ, ಹಿನ್ನೆಲೆ, ಪಾಂಡವ
                      ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
2.  ಸಭಾ ಪರ್ವಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
3.  ಅರಣ್ಯಕ ಪರ್ವ: ಹನ್ನೆರಡು ವರ್ಷದ ವನವಾಸ
4.  ವಿರಾಟ ಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
5.  ಉದ್ಯೋಗ ಪರ್ವ: ಯುದ್ಧದ ತಯಾರಿ
6.  ಭೀಷ್ಮ ಪರ್ವ: ಯುದ್ಧ ಆರಂಭಭೀಷ್ಮ ಕೌರವ ಸೇನಾನಿ ಕೃಷ್ಣನಿಂದ ಭಗವದ್ಗೀತೆ ಉಪದೇಶ
7.  ದ್ರೋಣ ಪರ್ವ: ಯುದ್ಧದ ಮುಂದುವರಿಕೆದ್ರೋಣ ಸೇನಾಧಿಪತ್ಯದಲ್ಲಿ
8.  ಕರ್ಣ ಪರ್ವ: ಕರ್ಣ ಸೇನಾಧಿಪತ್ಯ, ಕರ್ಣಾವಸಾನ
9.  ಶಲ್ಯ ಪರ್ವ: ಶಲ್ಯನ ಸೇನಾಧಿಪತ್ಯ
10.  ಸೌಪ್ತಿಕ ಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
11.  ಸ್ತ್ರೀ ಪರ್ವ: ಗಾಂಧಾರಿಯ ವಿಲಾಪ
12.  ಶಾಂತಿ ಪರ್ವಯುಧಿಷ್ಠಿರ ಪಟ್ಟಾಭಿಷೇಕಭೀಷ್ಮನಿಂದ ಸಲಹೆ
13.  ಅನುಶಾಸನ ಪರ್ವ: ಭೀಷ್ಮ ಕೊನೆಯ ಮಾತುಗಳು
14.  ಅಶ್ವಮೇಧಿಕ ಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ
15.  ಆಶ್ರಮವಾಸಿಕ ಪರ್ವ: ಧೃತರಾಷ್ಟ್ರಗಾಂಧಾರಿಕುಂತಿಯರ ಆಶ್ರಮವಾಸ, ಕೊನೆಗೆ ಮರಣ
16.  ಮೌಸಲ ಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")
17.  ಮಹಾಪ್ರಸ್ತಾನಿಕ ಪರ್ವ: ಪಾಂಡವರ ಮರಣದ ಮೊದಲ ಭಾಗ
18.  ಸ್ವರ್ಗಾರೋಹಣ ಪರ್ವ: ಪಾಂಡವರ ಸ್ವರ್ಗಾರೋಹಣ..

1.. ಜಾಹೀರಾತು

2.ಜಾಹೀರಾತು