fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಡಿಸೆಂಬರ್ 31, 2018

ನಾಡಿನೊಳಗೆ ನಾಡು ನಮ್ಮ ಕನ್ನಡ ನಾಡು

ನಾಡಿನೊಳಗೆ ನಾಡು ನಮ್ಮ ಕನ್ನಡ ನಾಡು
ಅಂದದ ನಾಡು, ಶ್ರೀಗಂದದ ಬೀಡು,
ಏಕತೆ ಭಾವೈಕ್ಯತೆಯಿಂದ ಕೂಡಿದ ನಾಡು,
ನಮ್ಮ ಚಲುವ ಕನ್ನಡ ನಾಡು..

ಜಾತಿ ಮತಗಳೆಂಬ ಬೇಧವಿಲ್ಲದ ನಾಡು,
ಮೇಲು ಕೀಳೆಂಬ ಭಾವವಿಲ್ಲದ ಬೀಡು,
ನೀತಿ ನಿಯಮ, ಕಲೆ ಸಂಸ್ಕೃತಿಯು,
ನೆಲೆಸಿರುವ ಏಕೈಕ ನಾಡು ಈ ಕರುನಾಡು..

ಹಸಿರು ಸಹ್ಯಾದ್ರಿಯಿಂದ ಕೂಡಿದ ನಾಡು,
ವೀರಧಿರರಾಳಿದ, ವರ ಸಾಧು ಸಂತರ,
ಸಂಗೀತ, ಸಾಹಿತ್ಯ, ಕಲೆ ಚಿತ್ರಕಲೆಯ,
ನೆಲೆಬೀಡು ಈ ನಮ್ಮ ಕರುನಾಡು..

ಒಮ್ಮೆಯಾದರೂ ನೋಡು ನಮ್ಮ ನಾಡು,
ಅಂದ ಚಂದದ ನಮ್ಮ ಕನ್ನಡ ನಾಡು...

ಕೃಪೆ - ಜ್ಯೋತಿ ಭಟ್

ಭಾನುವಾರ, ಡಿಸೆಂಬರ್ 30, 2018

ಡಾ|| ವಿಷ್ಣುವರ್ಧನ್ ರವರ ಸ್ಮರಣಾರ್ಥ (2018)

ಕನ್ನಡದ ಉಳಿವಿಗೆ ಹೋರಾಟಗಳು ಬೇಕಿಲ್ಲ...,
ಕರುನಾಡಿನಲ್ಲಿರುವವರು ಕನ್ನಡ ಮಾತನಾಡಿದರೆ ಸಾಕು.... 
                                                                                                           ==> ಡಾ|| ವಿಷ್ಣುವರ್ಧನ 

ಡಾ|| ವಿಷ್ಣುವರ್ಧನ ರವರ ನೆನಪಿಗಾಗಿ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯವರು ಸನ್ 2013 ರಲ್ಲಿ ರೂ.5 ಮುಖಬೆಲೆಯುಳ್ಳ ಅಂಚೆಯನ್ನು ಬಿಡುಗಡೆಗೊಳಿಸಿದ್ದಾರೆ.

ಸೋಮವಾರ, ಡಿಸೆಂಬರ್ 24, 2018

ಪ್ರತಿಫಲ

ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಿಂದುಂಟಾಗುವ ಫಲ
ಕಲ್ಲು ಹೊಡೆದಿದ್ದ ಕೈ ಪ್ರತಿಯಾಗಿ ಉದುರಿದ ಹಣ್ಣು
ಮಾಡಿದ್ದುಣ್ಣುವ ಮಹರಾಯರ ಮಹತ್ಕಾರ್ಯಗಳ ಫಲ
ಗೋಡೆಗೆ ಬಡಿದ ಚೆಂಡು
ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೇ ಕರ್ಮ ಮಾಡು ಎಂದು ಕೃಷ್ಣ ಅರ್ಜುನನಿಗೆ ಹೇಳಿರುವುದರಿಂದ ನಾವಿದಕ್ಕೆ ತಲೆಕೆಡಿಸಿಕೊಂಡಿಲ್ಲ
ಕಲಿಯುಗದಲ್ಲಿ ಪ್ರವೃತ್ತಿಯ ಪ್ರೇರಕವೇ ಇದು
ಪ್ರತಿಫಲಾಪೇಕ್ಷೆಯಿಲ್ಲದೇ ಯಾರಾದರೂ ಉಪಕಾರ ಮಾಡಿದರೆ ಅದು ಅಕಸ್ಮಾತ್ತಾಗಿ ಆಗಿರುವ ಸಂಭವವೂ ಇದೆ
ಇದರ ಲಭ್ಯತೆಯನ್ನನುಸರಿಸಿ ಕಾರ್ಯ ಮಾಡಬೇಕೋ ಬೇಡವೋ ಎಂಬುದರ ನಿರ್ಣಯವಾಗುತ್ತದೆ.
ಎಷ್ಟು ಸಿಗುತ್ತೆ ? ಎಂದರೆ ಇದೇ ಅರ್ಥ
ಕೆಲಸ ಮಾಡದಿದ್ದರೂ ಫಲ ಸಿಗುತ್ತೆ ಸರ್ಕಾರಿ ಅಧಿಕಾರಿಗಳಿಗೆ
ದೇವರಿಗೆ ನೈವೇದ್ಯ ಮಾಡಿದ್ದರ ಫಲವೆಂದರೆ, ಅದನ್ನು ನಾವು ಮತ್ತೆ ನೈವೇದ್ಯ ಮಾಡುವುದೇ
ಪ್ರತಿಫಲಕ್ಕಾಗಿ ಕಾಯುತ್ತಾ 'ಕುಳಿತುಕೊಳ್ಳುವುದಕ್ಕಿಂತ' ಕಾಯುತ್ತಾ ಮಲಗುವುದು ಹೆಚ್ಚು ವಾಸಿ
ಲಕ್ಷಗಟ್ಟಲೆ ದಾನ ಕೊಟ್ಟವಗೆ ಸನ್ಮಾನ ಮಾಡುವುದೇ ಅತನಿಗೆ ಪ್ರತಿಫಲ

-ವಿಶ್ವನಾಥ ಸುಂಕಸಾಳ

ಶನಿವಾರ, ಡಿಸೆಂಬರ್ 22, 2018

ನೆನಪಿದೆ ಅಮ್ಮ

ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.
ಇನ್ನೂ ನೆನಪಿದೆ ಅಮ್ಮ,
ನಿನ್ನೆದೆಯ ನಾ ಚೀಪುವಾಗ,
ನಾನೊದ್ದ ಕಾಲಿನ ನೋವಿಗೆ,
ನಿನ್ನ ತುಟಿಯಲ್ಲಿ ಮಿನುಗಿದ ನಗು.
ಇನ್ನೂ ನೆನಪಿದೆ ಅಮ್ಮ,
ಮೊಸರನ್ನವನಿಕ್ಕುತ ನೀ ತೋರಿದ,
ಮಾಳಿಗೆಯ ಅಚ್ಚರಿಯ ಚಂದಿರ,
ಎಣಿಸಿದ ನಕ್ಷತ್ರ.
ಇನ್ನೂ ನೆನಪಿದೆ ಅಮ್ಮ,
ನಾ ನಿನ್ನ ತೊದಲು ಕರೆದಾಗ,
ಬಳಿ ಓಡಿ ಬಂದು,
ನೀನಪ್ಪಿದ ಬಿಸಿ ಸ್ಪರ್ಶ.
ಇನ್ನೂ ನೆನಪಿದೆ ಅಮ್ಮ,
ಅಪ್ಪ ಬರೆದ ಬೆನ್ನ ಬಾಸುಂಡೆಗಳ,
ಮೇಲೆ ನೀ ಹಚ್ಚಿದ,
ಕಣ್ಣೀರ ಲೇಪನ.
ಇನ್ನೂ ನೆನಪಿದೆ ಅಮ್ಮ, 
ಯಶಸ್ಸಿನುತ್ತುಂಗವನೇರಲು,
ನೀ ಗುಂಡಿಗೆಯಲ್ಲಿ ಬಿತ್ತಿದ,
ಉತ್ಸಾಹದ ಚಿಲುಮೆ.
ಇನ್ನೂ ನೆನಪಿದೆ ಅಮ್ಮ,
ನಾನವಳ ಕೈ ಹಿಡಿದಾಗ,
ನಿನ್ನ ಕಣ್ಣಂಚಿನಲಿ,
ಜಿನುಗಿದ ಆ ಮುತ್ತು ಹನಿ.
ಇನ್ನೂ ನೆನಪಿದೆ ಅಮ್ಮ, 
ಇದ್ದಕಿದ್ದಂತೆ ನೀನೆದ್ದು,
ಹೊರಟು ನಿಂತಾಗ,
ಬೆಂಬಿಡದೆ ಕಾಡಿದ ಅಸಾಧ್ಯ ಯಾತನೆ.
--- ಇಂದ--ಸಂತು ಆಯ್ ಎಮ್

ಗುರುವಾರ, ಡಿಸೆಂಬರ್ 20, 2018

ಮಕ್ಕಳಾಟ..

ಬಿತ್ತೊಂದು ಮಳೆ
ನೆತ್ತಿ ತಣ್ಣಗಾಗಲಿಲ್ಲ
ಕತ್ತೆತ್ತುವ ಭರದಲ್ಲಿ
ಕತ್ತು ಉಳುಕಿತಲ್ಲ||

ಬಾರೊ ಬಾರೊ
ಮಳೆರಾಯ
ಮಕ್ಕಳ ಹಾಡಿಗೆ
ಕುಣಿಯಲಾಗಲಿಲ್ಲ||

ಚೌಕಾ ಬಾರಾ
ಕವಡೆ ಕಾಯಿ
ಕುಲು ಕುಲುಕಿ
ಹಾಕಲಾಗಲಿಲ್ಲ||

ಚಿನ್ನಿ ದಾಂಡು
ಗಿರ ಗಿರ ಗಿಲ್ಲಿ
ಹೊಡೆಯುವ ಹಳೆ ಆಟ
ಹೇಳಿಕೊಡಲಾಗಲಿಲ್ಲ||

ಚನ್ನೆಮಣೆಯ
ಅಟ್ಟದಿ ತೆಗೆದು
ಮಕ್ಕಳೊಟ್ಟಿಗೆ ಕುಳಿತು
ಆಡಿಸಲಾಗಲಿಲ್ಲ||

ಕಣ್ಣಾ ಮುಚ್ಚೆ
ಕಾಡೆ ಗೂಡೆ….
ಅಡಗುವ ಆಟ
ತಿಳಿಸಿಕೊಡಲಾಗಲಿಲ್ಲ||

ತಿರುಗುವ ಮಕ್ಕಳ
ಒಟ್ಟಿಗೆ ಸೇರಿಸಿ
ಚಂದಮಾಮಾ ಕಥೆ
ಹೇಳಲಾಗಲಿಲ್ಲವಲ್ಲ||

ಕಜ್ಜಾಯದಡುಗೆ
ಕೈ ತುತ್ತ ನೀಡಿ
ಒಟ್ಟಿಗೆ ಕುಳಿತ
ಬೆಳದಿಂಗಳೂಟವಿಲ್ಲ||

ಮಕ್ಕಳ ಕರೆದು
ಹೇಳಿದರಂದರು
ಇವೆಲ್ಲ ಓಲ್ಡ ಜಮಾನಾ
ಹೋಗಜ್ಜಿ||

ನಮಗೇನಿದ್ದರು
ಟೀವೀನೇ ಬೇಕು
ಮೊಬೈಲು ಬೇಕು
ನಿನ್ನಾಟ ಯಾರಿಗೆ ಬೇಕು||

ರುಚಿಕಟ್ಟಾದ
ಪಿಜ್ಜಾ ಬರಗರ್
ಸಾಕು ಹೊಟೇಲಿನ
ಮಂದ ದೀಪ||

ಬೈ ಬೈ ಅಜ್ಜಿ
ಹೊರಡುವೆವೀಗ
ಬಾಗಿಲು ತೆಗಿ ಬರುವೆವು
ರಾತ್ರಿ ಹನ್ನೆರಡರೊಳಗೆ ||
From - Sandhyadeepa…

ಶನಿವಾರ, ಡಿಸೆಂಬರ್ 15, 2018

3 ರ ಮಹತ್ವ

    ೧.    ಈ ಮೂವರನ್ನು ಆದಾರದಿಂದ ಕಾಣಿರಿ  --   ತಂದೆ,  ತಾಯಿ,  ಗುರು.

        ೨.   ಈ ಮೂವರನ್ನು ನೆನಪಿನಲ್ಲಿಡಿ        --   ಬ್ರಹ್ಮ,  ವಿಷ್ಣು,  ಮಹೇಶ್ವರ.

            ೩.   ಈ ಮೂವರನ್ನು ಗೌರವಿಸಿರಿ.       --  ವೃದ್ಧಾಪ್ಯ,  ಧರ್ಮ,  ಕಾನೂನು.

                ೪.   ಈ ಮೂವರನ್ನು ಹೊಗಳು.       --  ಗುಣ,  ಸಂಗೀತ,  ಬುದ್ಧಿಶಕ್ತಿ.

                    ೫.   ಈ ಮೂವರಿಗೆ  ಚೇಷ್ಟೆ ಮಾಡದಿರಿ.   --  ಹುಚ್ಚ,  ಮೊರ್ಖ,  ಮುದುಕ.

                        ೬.   ಈ ಮೂವರನ್ನು ದಕ್ಷತೆ ಇಡು.      --  ಶಬ್ದ,  ನಡುವಳಿಕೆ,  ನೀತಿ.

                            ೭.   ಈ ಮೂರನ್ನು ನಿಯಮದಿಂದ ಮಾಡಿರಿ.-- ಭಜನೆ,  ಭೋಜನ,  ವ್ಯಾಯಾಮ.

                                ೮.   ಈ ಮೂರನ್ನು ತಪ್ಪಿಸು.  --  ಕುಡಿಯುವದು,  ಸೇದುವದು, ಜೂಜಾಡುವದು.

                                    ೯.   ಈ ಮೂರನ್ನು ಕೈ ಬಿಡಬೇಕು.         --  ವಚನ,  ಗೆಳತನ,  ಪ್ರೀತಿ.

                                        ೧೦.  ಈ ಮೂರನ್ನು ಲಕ್ಷಗೊಡು.          --  ಪದ,  ನಡತೆ,  ನಡವಳಿಕೆ.

                                            ೧೧.  ಈ ಮೂರಕ್ಕೆ ಅಂಜುತ್ತಿರು.           --  ಸುಳ್ಳು,  ನಿಂದನೆ,  ಕಳ್ಳತನ.

                                                ೧೨.  ಈ ಮೂರ ಕಾಲಕ್ಕೆ ಹೊಂದಿನಡೆ. --  ಚಳಿಗಾಲ,  ಬೆಸಿಗೆಗಾಲ,  ಮಳೆಗಾಲ.

                                                    ೧೩.  ಈ ಮೂರನ್ನು ನಿಂತ್ರಿಸು.         --  ನಾಲಿಗೆ,  ಸಿಟ್ಟು,  ನಿಂದನೆ.

                                                        ೧೪.  ಈ ಮೂರನ್ನು ಪ್ರೀತಿಸು.       --   ಪ್ರಮಾಣಿಕತೆ,  ಸತ್ಯೆ,  ಪಾವಿತ್ರೆ.

                                                            ೧೫.  ಈ ಮೂರನ್ನು ತಡೆಯಿರಿ.    --  ಸೋಮಾರಿತನ,  ಸುಳ್ಳು,  ಆಸೆಬುರುಕತನ.

                                                                ೧೬.  ಈ ಮೂರನ್ನು ವೃದ್ಧಿಸಿಕೋ.  --  ಸಹಾನುಭೂತಿ,  ಆನಂದ,  ಸಮಾಧಾನ.

                                                                    ೧೭.  ಈ ಮೂರನ್ನು ನಿನ್ನ ವಶದಲ್ಲಿಡು.   --  ಇಂದ್ರಿಯ,  ಮನಸ್ಸು,  ಕ್ರೋಧ.

                                                                        ೧೮.  ಈ ಮೂರನ್ನು ವಿಚಾರದಲ್ಲಿಟ್ಟುಕೋ.-- ಸತ್ವಗುಣ, ರಜೋಗುಣ, ತಮೋಗುಣ.

                                                                            ೧೯.  ಈ ಮೂರನ್ನು ತಿಳಿದುಕೋ.    --  ವರ್ತಮಾನ,  ಭೂತ,  ಭವಿಷ್ಯತ 

                                                                                ೨೦. ಈ ಮೂರನ್ನು ವಾತ್ಸಲ್ಯದಿಂದ ನಡೆ. -- ದೇವಾಲಯ, ನ್ಯಾಯಾಲಯ, ಆತ್ಮಾಲಯ.
                                                                                                 ಸಂಗ್ರಹ: ಶ್ರೀ ವಿದ್ಯಾನಂದ.

                                                                                  ಸೋಮವಾರ, ಡಿಸೆಂಬರ್ 03, 2018

                                                                                  ಕಮ್ಮಿ / ಮಮ್ಮಿ

                                                                                  ದೊರದಿ0ದ ನೋಡಿದರೆ ಅವಳ ವಯಸ್ಸು ಕಮ್ಮಿ || ವಾಹ್ ವಾಹ್ ||
                                                                                  ದೊರದಿ0ದ ನೋಡಿದರೆ ಅವಳ ವಯಸ್ಸು ಕಮ್ಮಿ || ವಾಹ್ ವಾಹ್ ||
                                                                                   * * 
                                                                                  ಸಮೀಪ ಹೋಗಿ ನೋಡಿದಾಗ ಗೋತ್ತಾಯಿತು ಅವಳು 3 ಮಕ್ಕಳ ಮಮ್ಮಿ...

                                                                                  ಅಮ್ಮ - ಅಕ್ಕ - ತಾತ - ಅಜ್ಜಿ - ಅಣ್ಣ - ಶಾಲೆ - ಅಪ್ಪ - ಸ್ನೇಹಿತ - ಉದ್ಯೋಗ - ಸಂಸಾರ

                                                                                  ಅಮ್ಮನನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಂಡು ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಟ್ಟು ಮನೆಯೊಳಗಿನ ಸರಿದಾಡುವ ವಸ್ತುಗಳನ್ನು ನೋಡುತ್ತಿದ್ದಾಗ ಈ ಜಗತ್ತು ಕುತೂಹಲದಿಂದ ಕಂಡದ್ದೇ ಬೇರೆ.

                                                                                  ಅಕ್ಕನ ಕಂಕುಳಲ್ಲಿ ಕುಳಿತು ಮನೆಯ ಹಜಾರ - ವರಾಂಡಗಳಲ್ಲಿ ಸುತ್ತಾಡುವಾಗ ನನ್ನ ಮನಸ್ಸಿನೊಳಗೆ ಹರಿದಾಡಿದ ಲೋಕವೇ ಬೇರೆ.

                                                                                  ತಾತನ ಹೆಗಲ ಮೇಲೆ ಕೂತು ಅಂಗಡಿ - ಆಟದ ಮೈದಾನ - ಬೀದಿಗಳಲ್ಲಿ ಸುತ್ತಾಡುವಾಗ ನನ್ನೊಳಗೆ ಮೂಡುತ್ತಿದ್ದ ಭಾವನೆಗಳೇ ಬೇರೆ.

                                                                                  ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುತ್ತಾ ನಿದ್ರೆಗೆ ಜಾರುವಾಗ ಮನದಲ್ಲಿ ಆಗುತ್ತಿದ್ದ ತಾಕಲಾಟಗಳೇ ಬೇರೆ.

                                                                                  ಅಣ್ಣನ ಕೈ ಹಿಡಿದು ಹೆಗಲಿಗೆ ಬ್ಯಾಗು ನೇತಾಕಿಕೊಂಡು ಶಾಲೆಗೆ ಹೋದಾಗ ನಾನು ಕಂಡ ಜಗತ್ತೇ ಬೇರೆ.

                                                                                  ಒಂದರಿಂದ ಹತ್ತರವರೆಗೆ ಶಾಲೆಯಲ್ಲಿ ಸ್ನೇಹಿತರು - ಟೀಚರ್ ಗಳು - ಆಟಗಳು - ಪಿಕ್ ನಿಕ್ ಗಳು - ಸಾಂಸ್ಕೃತಿಕ ಕಾರ್ಯಕ್ರಮಗಳು - ಗಲಾಟೆಗಳು - ಪರೀಕ್ಷೆಗಳು - ಓ - ಆಗ ಕಂಡ ಪ್ರಪಂಚವೇ ಬೇರೆ.

                                                                                  ಅಪ್ಪನ ಜೊತೆ ಗಾಡಿಯಲ್ಲಿ ಕುಳಿತು ನಗರದ ಕಾಲೇಜಿಗೆ ಹೋಗಿ ಸೇರಿದಾಗ ನಾನು ಕಂಡ ದುನಿಯಾನೇ ಬೇರೆ.

                                                                                  ಸ್ನೇಹಿತರ ಜೊತೆ ಕಾಲೇಜಿನಲ್ಲಿ - ಸಿನಿಮಾ ಥಿಯೇಟರುಗಳಲ್ಲಿ - ಹೋಟೆಲುಗಳಲ್ಲಿ ಮಜಾ ಉಡಾಯಿಸುವಾಗ ಕಂಡ ಜಗತ್ತೇ ಬೇರೆ.

                                                                                  ಉದ್ಯೋಗ ದೊರೆತಾಗ ಒಂಟಿಯಾಗಿಯೇ ಹೋಗಿ ಸೇರಿ ಅಲ್ಲಿ ಸಹಪಾಠಿಗಳ ಜೊತೆ ಬೆರೆತಾಗ ನಾನು ಕಂಡ ಲೋಕವೇ ಬೇರೆ.

                                                                                  ನಾನು ಮೆಚ್ಚಿದವರೊಂದಿಗೆ ಅಪ್ಪ - ಅಮ್ಮ ಮದುವೆ ಮಾಡಿಕೊಟ್ಟಾಗ ನಾನು ಅನುಭವಿಸಿದ ಸಂಭ್ರಮವೇ ಬೇರೆ.

                                                                                  ನನ್ನೊಂದಿಗೆ ಜೊತೆಯಾದವರೊಂದಿಗೆ ಸಂಸಾರ ಮಾಡುವಾಗ ನಾನು ಕಂಡ ಲೋಕವೇ ಬೇರೆ.

                                                                                  ಮತ್ತೆ ಈಗ ನನ್ನ ಮಗು ನನ್ನ ಮಡಿಲಲ್ಲಿ ಮಲಗಿ ನನ್ನ ಎದೆ ಹಾಲು ಕುಡಿಯುತ್ತಾ ಪಿಳಪಿಳನೇ ಕಣ್ಣುಬಿಟ್ಡು ನನ್ನನ್ನೇ ನೋಡುತ್ತಿರುವಾಗ ನನ್ನಲ್ಲಿ ಮೂಡುತ್ತಿರುವ ಭಾವನೆಗಳೇ ಬೇರೆ.

                                                                                  ಎಷ್ಟೊಂದು ಸುಂದರ ಈ ಬದುಕಿನ ಪಯಣ.
                                                                                  ಕಾಲನ ಅಂಗಳದಲ್ಲಿ ಎಷ್ಟೊಂದು ಅದ್ಭುತ - ಆಶ್ಚರ್ಯ - ವಿಸ್ಮಯ.
                                                                                  ಬದುಕು ಸಾರ್ಥಕತೆ ಕಂಡ ಈ ನೆನಪಿನ ಪಯಣದಲಿ

                                                                                  ನಿಮ್ಮೊಂದಿಗೆ, 
                                                                                  .............................

                                                                                  ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ.

                                                                                  ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
                                                                                  ಮನಸ್ಸುಗಳ ಅಂತರಂಗದ ಚಳವಳಿ.

                                                                                  ವಿವೇಕಾನ೦ದ. ಹೆಚ್.ಕೆ

                                                                                  ಶನಿವಾರ, ನವೆಂಬರ್ 24, 2018

                                                                                  ಸ್ವಭಾವ

                                                                                  ತನ್ನದೇ ಅಕ್ಕನ ಗಂಡ
                                                                                  ಅವರವರ ಸ್ವಂತ ಗುಣ-ದೋಷ ಭಾವ
                                                                                  ಅವರವರ ಸ್ವಭಾವದಂತೆ ಭಾವವೂ ಬೆರೆ
                                                                                  ಇದೊಂದು ಹುಟ್ಟು ಗುಣ, ಸುಟ್ಟರೂ ಹೋಗದ್ದು
                                                                                  ಬೇರೆಯವರನ್ನು ಪ್ರಭಾವಿಸುವ ವ್ಯಕ್ತಿತ್ವದ ಅಂಶ
                                                                                  ರೂಪ ರೂಪಗಳನು ದಾಟಿದ ಸ್ವರೂಪ
                                                                                  ನಿರ್ವಾತಕ್ಕೆ ಅಭಾವವೇ ಸ್ವಭಾವ
                                                                                  ಪ್ರಶ್ನಿಸುವುದು ಹೆಂಡತಿಯ ಸ್ವಭಾವ, ಉತ್ತರಿಸದಿರುವುದು ಗಂಡನ ಸ್ವಭಾವ
                                                                                  ಕೆಟ್ಟ ಹೆಂಡತಿಯನ್ನಾದರೂ ಬಿಡಬಹುದು. ಕೆಟ್ಟ ಸ್ವಭಾವವನ್ನು ಬಿಡಲಾಗದು
                                                                                  ಸ್ವಭಾವವನ್ನು ಮೀರಲು ಸ್ವಂತ ಭಾವನಿಂದಲೂ ಸಾಧ್ಯವಿಲ್ಲ (ಸ್ವಭಾವೋ ದುರತಿಕ್ರಮಃ)
                                                                                  ಒಳ್ಳೆಯ ಸ್ವಭಾವದ ವ್ಯಕ್ತಿಗೆ ಮಗಳನ್ನು ಕೊಟ್ಟರೆ ಮಗಳೇನೋ ಸುಖವಾಗಿರಬಹುದು, ಅಳಿಯ...?
                                                                                  ಸ್ವಭಾವ ಬೇರೆಯಾದರೂ ಭಾವ ಒಂದಾದರೆ ಸಂಸಾರ ಸಸಾರ
                                                                                  ಸ್ವಭಾವವೆಲ್ಲ ಸ್ವಾಭಾವಿಕವೇ
                                                                                  ಬೇಕು ಬೇಕೆಂಬುದು ನರನ ಸ್ವಭಾವ, ಬೇಕೇ ಬೇಕೆಂಬುದು ನಾಗರಿಕರನ ಸ್ವಭಾವ

                                                                                  -ವಿಶ್ವನಾಥ ಸುಂಕಸಾಳ

                                                                                  ಗುರುವಾರ, ನವೆಂಬರ್ 22, 2018

                                                                                  ಅಮ್ಮ ಕರುಣೆಯ ಸಾಗರ

                                                                                  ಅವಳೊಂದು ಕರುಣೆಯ ಸಾಗರ
                                                                                  ಮಮತೆಯ ಆಗರ
                                                                                  ಸಿಹಿಯಂತ ಮಾತು ಬಲು ಮಧುರ
                                                                                  ಹೋಗೆನು ನಿನ್ನಿಂದ ನಾ ದೂರ
                                                                                  ನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರ
                                                                                   
                                                                                  ಧರಣಿ ನಾ ಬಂದ ಗಳಿಗೆ
                                                                                  ಅಮ್ಮ ಎಂದಿತು ಈ ನನ್ನ ನಾಲಿಗೆ
                                                                                  ಅಂದೆ ಬೆಳೆಯಿತು ನಮ್ಮ ಸಲಿಗೆ
                                                                                  ನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆ
                                                                                  ನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆ
                                                                                   
                                                                                  ಹಸಿವೆಂಬ ಈ ನನ್ನ ಆರ್ತನಾದ
                                                                                  ತಟ್ಟಿತು ನಿನ್ನ ಮನಸ್ಸಿನ ಕದ
                                                                                  ಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರು
                                                                                  ಮರೆಯನಮ್ಮ ಅದನ್ನು ನಾ ಸತ್ತರು
                                                                                  ಬಾಳೆಂಬ ಶಾಲೆಗೆ ನೀನೆ ಮೊದಲ ಗುರು
                                                                                   
                                                                                  ಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮ
                                                                                  ನಿನಗಾಗೆ ಮುಡಿಪು ಈ ನನ್ನ ಜನ್ಮ
                                                                                  ಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,
                                                                                  ನನ್ನಂತೆ ಇತರರಿಗೆ.
                                                                                   
                                                                                                                           
                                                                                                                                                         ಇಂದ - ಎಂ.ಎಸ್.ಪರಶುರಾಮ

                                                                                  ಗುರುವಾರ, ನವೆಂಬರ್ 15, 2018

                                                                                  ಯಾರಿಂದ ಏನೇನು ಕಲಿಯಬೇಕು?

                                                                                  (1)  ಶ್ರವಣಕುಮಾರ  = ತಂದೆ-ತಾಯಿಗಳ ಸೇವೆ
                                                                                  (2) ಶ್ರೀ ರಾಮ         = ಮರ್ಯಾದೆ
                                                                                  (3) ಹನುಮಂತ       = ಆರಾಧಕನ ಸೇವೆ
                                                                                  (4) ಭೀಷ್ಮ             = ಬ್ರಹ್ಮಚರ್ಯೆ
                                                                                  (5) ಶ್ರೀ ಕೃಷ್ಣ          = ಗೆಳೆತನ
                                                                                  (6) ಏಕಲವ್ಯ          = ಗುರುಭಕ್ತಿ
                                                                                  (7) ಯುಧಿಷ್ಠಿರ        = ಧರ್ಮ
                                                                                  (8) ಕರ್ಣ              = ದಾನ
                                                                                  (9) ಮಹಾವೀರ      = ತಪಸ್ಸು
                                                                                  (10) ಹರೀಶ್ಚಂದ್ರ    = ಸತ್ಯ
                                                                                  (11) ಲಕ್ಷ್ಮಣ, ಭರತ ಹಾಗೂ ಶತ್ರುಘ್ನ = ಸೋದರ ವಾತ್ಸಲ್ಯ
                                                                                  (12) ಚಾಣಕ್ಯ                       = ಛಲ
                                                                                  (13) ಸೀತಾ                        = ಸಹನೆ
                                                                                  (14) ಸಾವಿತ್ರಿ ಮತ್ತು ಗಾಂಧಾರಿ = ಪತಿ ಪ್ರೇಮ
                                                                                  (15) ತೆನಾಲಿ ರಾಮಕೃಷ್ಣ        = ಹಾಸ್ಯ
                                                                                  (16) ಭೂದೇವಿ                    = ಕ್ಷಮೆ

                                                                                  ಶುಕ್ರವಾರ, ನವೆಂಬರ್ 09, 2018

                                                                                  ಗೌರಿ ಹುಣ್ಣಿಮೆ

                                                                                  ಸ್ವಾದರಮಾವ ತಂದಾನ 
                                                                                  ಸಕ್ರಿ ಗೊಂಬಿ 
                                                                                  ಬೆಳಗೋಣ ಗೌರವ್ವಗ
                                                                                  ಹಾಕ್ಕೊಂಡು ದಂಡಿ

                                                                                  ಬೆಳದಿಂಗಳ್ದಾಗ
                                                                                  ಸಕ್ಕಾ ಸರಿಗಿ
                                                                                  ಆಡ್ತಾ ಆಚರ್ಸೋದ್ 
                                                                                  ಚಂದ ಗೌರಿ ಹುಣ್ಣಿಮೆ

                                                                                                                      = 》ಗೀತಾ ಶ್ರೀ   

                                                                                  ಬೆಂಡೆಕಾಯಿ


                                                                                  ಶನಿವಾರ, ನವೆಂಬರ್ 03, 2018

                                                                                  ಪೋಟೋ ಸೂಪರ್ (Photooo...SUPER)

                                                                                  ತುಂಬ_ಜನ_photo_ಹಾಕಿದ್ರೆ Mass ಆಗಿರುತ್ತೆ ....

                                                                                  ಸ್ವಲ್ಪ_ಜನ_ಹಾಕಿದ್ರೆ Clss ಆಗಿರುತ್ತೆ ....

                                                                                  ಕೆಲವೊಬ್ರೂ_ಹಾಕಿದ್ರೆ Sappe ಆಗಿರುತ್ತೆ ....

                                                                                  ಇನ್_ಕೆಲವೊಬ್ರೂ_ಹಾಕಿದ್ರೆ..Comedy ಆಗಿರುತ್ತೆ 

                                                                                  Nanu_ಹಾಕಿದ್ರೆ Photooo...SUPER ಆಗಿರುತ್ತೆ..


                                                                                  ಗುರುವಾರ, ನವೆಂಬರ್ 01, 2018

                                                                                  ನವೆಂಬರ್ 1 (November 1)

                                                                                          ನವೆಂಬರ್ 1 ಬಂತೆಂದರೆ ಜಯಭಾರತ ಜನನಿಯ ತನುಜಾತೆಗೆ 63 ವರ್ಷ ತುಂಬುತ್ತದೆ. ಕನ್ನಡ ಮಾತೆ 63 ರ ಕದ ತಟ್ಟಲು ಅಣಿಯಾಗುತ್ತಿದ್ದಾಳೆ. ಆಕೆಯನ್ನು ಅರುವತ್ತರ ಅಧ್ವರ್ಯು ಎಂದು ಕರೆಯಲಪ್ಪಣೆಯೆ, ದೊರೆಯೇ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹರಿದು ಹಂಚಿಹೋಗಿದ್ದ ಕರ್ನಾಟಕದ ಚಾಪೆಯನ್ನು ಒಗ್ಗೂಡಿಸಿ ರತ್ನಗಂಬಳಿ ನೇಯ್ದ ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರರಿಗೆ ಪುನಃ ನಮಿಸುವ ಕಾಲ ಮತ್ತೆ ಬರುತ್ತಿದೆ. ನಿಸ್ವಾರ್ಥ ಸೇವಕ, ಚಳವಳಿಯ ನಾಯಕ ಆಲೂರು ವೆಂಕಟರಾಯರಿಗೆ ಮೊದಲ ನಮಸ್ಕಾರಗಳು.
                                                                                          ನವೆಂಬರ್ ಒಂದು ನಾಡಹಬ್ಬ. ಅಂದು ಎಲ್ಲರಿಗೂ ರಜೆ. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸರಕಾರಿ, ಅರೆಸರ್ಕಾರಿ, ಕೊರೆ ಸರ್ಕಾರಿ, ಖಾಸಗಿ ಖಿಲ್ಲತ್ತುಗಳೂ ರಾಜ್ಯೋತ್ಸವ ಆಚರಿಸುತ್ತವೆ. ಮಂಚೂಣಿಯಲ್ಲಿ ನಿಂತು ರಾಜ್ಯದ ಮುಖ್ಯಮಂತ್ರಿಗಳು ಕೆಂಪು ಹಳದಿ ಬಣ್ಣದ ಧ್ವಜಾರೋಹಣ ಮಾಡುತ್ತಾರೆ. ಕೆಂಪು ಹಳದಿ ಬಾವುಟ ನಮ್ಮ ರಾಜ್ಯದ ಅಧಿಕೃತ ಧ್ವಜವೇನಲ್ಲ. ಆದರೂ ಅದೇ ನಮ್ಮ ಧ್ವಜವೆಂದು ಒಪ್ಪಿಕೊಂಡು ಹಾರಿಸುತ್ತಾ ಬಂದಿದ್ದೇವೆ. ಇನ್ನು ಕೆಂಪು ಹಳದಿ ಬಾವುಟವು ಕನ್ನಡ ನಾಡು ನುಡಿಯ ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತದೆ ಎಂದು ಮತ್ತೆ ನೆನಪಿಸುವ ಕರ್ನಾಟಕದ ಸಂದಿಗೊಂದಿಗಳಲ್ಲಿ ಸುಳಿದಾಡುವ ಆಟೋರಿಕ್ಷ ಚಾಲಕರಿಗೆ ಎರಡನೇ ನಮಸ್ಕಾರ. ರಾಜ್ಯೋತ್ಸವ ಬಂತೆಂದರೆ ರಾಜ್ಯೋತ್ಸವ ಪ್ರಶಸ್ತಿಗಳು ಬೆನ್ನೇರಿ ಬರುತ್ತವೆ. Not only ಬಂದಾಗ but also ಬರಬೇಕೆಂಬ ವ್ಯಾಕರಣದ ನಿಯಮದ ಹಾಗೆ. ನಾನಾ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿ ಧನ್ಯರಾದ ಕನ್ನಡದ ಕುವರರು ಮತ್ತು ಕುವರಿಯರಿಗೆ ಇಡೀ ರಾಜ್ಯದ ಪರವಾಗಿ ಧನ್ಯವಾದ ಹೇಳುವ ಪ್ರತೀಕವಾಗಿ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತದೆ. ಇದು ಸಂಪ್ರದಾಯ. ಏನೇ ಮಾಡಿದರೂ ಅದಕ್ಕೊಂದು ಲೆಕ್ಕಾಚಾರ ಇರಬೇಕು. ತೂಕ ತುಂಡು ಇರಬೇಕು. 
                                                                                           ಪ್ರಶಸ್ತಿಗೆ ಪಾತ್ರರಾರು ಎಂದು ನಿರ್ಧರಿಸುವುದು ಅಷ್ಟೇ ಕಷ್ಟದ ಕೆಲಸ. ಪರಂತು, ನಮ್ಮಲ್ಲಿ ಸಾಧಕರು ಅತಿಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುವುದರಿಂದ ಯಾರು ಹೆಚ್ಚು, ಯಾರು ಕಮ್ಮಿ ಎಂದು ಅಳೆದೂ ಸುರಿದು ಇತ್ಯರ್ಥ ಮಾಡುವುದು ತುಂಬಾ ತ್ರಾಸದ ಕೆಲಸ. ಪ್ರಶಸ್ತಿ ಪಟ್ಟಿ ತಯಾರಿಸುವುದಕ್ಕೆ ಒಂದು ಸಮಿತಿಯನ್ನು ರಚಿಸಲಾಗುತ್ತದೆ. ಯೋಗ್ಯರ ಪಟ್ಟಿ ಮಾಡಿ, ಜರಡಿ ಹಿಡಿದು, ಒಳ್ಳೆ ಹೆಸರುಗಳನ್ನು ಸರಕಾರಕ್ಕೆ ಶಿಫಾರಸ್ಸು ಮಾಡುವುದು ಕಮಿಟಿಯ ಜವಾಬ್ದಾರಿ ಆಗಿರುತ್ತದೆ. ಈ ಬಾರಿಯೂ ಹಾಗೇ ಆಗ್ತದೆ. ಆದರೆ, ಪ್ರಶಸ್ತಿಗೆ ಆಯ್ಕೆ ಮಾಡುವಾಗ ಯಾವುದಾದರೂ ಒಂದು ಮಾನದಂಡ ಇದ್ದರೆ ಲೇಸು. ಹಾಗಾಗಿ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಸಾರ್ವಜನಿಕರಲ್ಲಿ ಒಂದು ಕೋರಿಕೆಯನ್ನು ಇಟ್ಟಿದೆ. ಅದು ಹೀಗಿದೆ - 
                                                                                  ಮಾನ್ಯರೆ,
                                                                                         ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಪ್ರತಿ ವರ್ಷ ನವೆಂಬರ್ 1 ರಂದು ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಅಗತ್ಯ ಮಾನದಂಡಗಳನ್ನು ನಿರ್ಧರಿಸಲು ಸಲಹಾ ಸಮಿತಿಯು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ.  
                                                                                                                                                    ಇಂತಿ ನಿಮ್ಮ ಪ್ರೀತಿಯ ಕನ್ನಡಿಗ

                                                                                                                                                     [ವಿದ್ಯಾಶಂಕರ ಹರಪನಹಳ್ಳಿ] 
                                                                                  - ಕೆ.ವಿ.ರಾಧಾಕೃಷ್ಣ ಸಮನ್ವಯಕಾರರು-
                                                                                  ಕಣಜ ಯೋಜನೆ
                                                                                  ಇ-ಕನ್ನಡ ವಿಭಾಗ,
                                                                                  ಕನ್ನಡ ಭವನ,
                                                                                  ಜೆ.ಸಿ.ರಸ್ತೆ ಬೆಂಗಳೂರು- 560 002.
                                                                                  080-22227478, 09844192952


                                                                                  1.ಮೊದಲನೇಯ ನಮಸ್ಕಾರ -- ಆಲೂರು ವೆಂಕಟರಾಯ
                                                                                  2. ಎರಡನೇಯ ನಮಸ್ಕಾರ --    ಆಟೋರಿಕ್ಷ ಚಾಲಕ
                                                                                  3. ಮೂರನೇ ನಮಸ್ಕಾರ -- *****


                                                                                  ಬುಧವಾರ, ಅಕ್ಟೋಬರ್ 31, 2018

                                                                                  ಕನ್ನಡಕ್ಕೆ ಹೋರಾಡು

                                                                                  ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ
                                                                                  ಕನ್ನಡವ ಕಾಪಾಡು ನನ್ನ ಆನಂದಾ
                                                                                  ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
                                                                                  ಮರೆತೆಯಾದರೆ, ಅಯ್ಯೊ ಮರೆತಂತೆ ನನ್ನ

                                                                                  ಬುಧವಾರ, ಅಕ್ಟೋಬರ್ 24, 2018

                                                                                  ಬೆಲೆ

                                                                                  ಗ್ರಾಹಕನ ಕಿಸೆಯ ಹಣ ಎಗರಿಸುವ ಬಲೆ
                                                                                  ಸರ್ಪ್ರೈಸ್ ಕೊಡುವ ಗುಣದ್ದು C price
                                                                                  ಬೆಳೆ ಬೆಳೆಯುವವನಿಗೆ ಸಿಗದ ಮರೀಚಿಕೆ ಇದು
                                                                                  ಗ್ರಾಹಕನ ತಲೆ ಮೇಲೆ ಬೀಳುವ ಏಟು- ರೇಟು
                                                                                  ವ್ಯಾಪಾರಿಯ ಸಂಪಾದನೆಗೊಂದು ಮರ- ದರ
                                                                                  ಬ್ಯಾಲೆ ನೃತ್ಯ ನೋಡಲು ಕೊಡುವ ಮೌಲ್ಯ
                                                                                  ನಮ್ಮ ಹಿಂದೆ ಜನ ಏನು ಆಡಿಕೊಳ್ಳುತ್ತಾರೋ ಅದೇ ನಮ್ಮ ನಿಜವಾದ ಬೆಲೆ
                                                                                  ತೂಕದಲ್ಲಿ ದೋಖಾ ಆಗಲು ವಿಪರೀತವಾಗಿ ಹೆಚ್ಚುತ್ತಿರುವ ಬೆಲೆಯೇ ಕಾರಣ
                                                                                  ಅತ್ಯಂತ ಬೆಲೆಬಾಳುವ ವಿಷಯಗಳಲ್ಲಿ ಬಾಳು ಕೂಡ ಒಂದು. ಅದನ್ನು ಹಾಳು ಮಾಡಿಕೊಳ್ಳಬಾರದು
                                                                                  ಬೆಲೆ ಕಟ್ಟಲಾಗದ್ದೆಲ್ಲ ಅಮೂಲ್ಯವೆನಿಸುವುದಾದರೆ, ಬೆಲೆಯು ಕೂಡ ಅಮೂಲ್ಯವೇ
                                                                                  ಕೊಳ್ಳುವುದಕ್ಕೆ ಹೆಚ್ಚು. ಕೊಡುವುದಾದರೆ ಕಡಿಮೆ
                                                                                  ನಿಮ್ಮ ಬೆಲೆ ಇರುವುದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ನಲ್ಲಿ
                                                                                  ಸತ್ತ ಮೇಲೆ ಎಲ್ಲರ ಬದುಕಿಗೂ ಬೆಲೆ ಬರುತ್ತೆ. ಬೆಲೆ ಬರಬೇಕೆಂದರೆ ಸಾಯಬೇಕು
                                                                                  ಬೆಲೆ ಬಾಳುವ ಮಾತು ಆಡಬೇಕೆಂದರೆ ಬೆಲೆಯ ಕುರಿತಾದ 'ಪೇಟೆ ಧಾರಣೆ' ಮಾತನ್ನೇ ಆಡಬಹುದು

                                                                                  -ವಿಶ್ವನಾಥ ಸುಂಕಸಾಳ

                                                                                  ಸೋಮವಾರ, ಅಕ್ಟೋಬರ್ 22, 2018

                                                                                  ಅಮ್ಮ ಎಂದರೆ (Saying Mother)

                                                                                  ಅಮ್ಮ ಎಂದರೆ ಎಂತ ಆನಂದ ಮನಸಿಗೆ
                                                                                  ಆತಂಕ, ಕೇ ಕೇ ಹಾಕುವ ನೋವುಗಳಿಗೆ

                                                                                  ನನ್ನ ಮೊದಲ ಅರಿವಿನ ಸಿರಿ ಅವಳು
                                                                                  ಅವಳಿಂದ ಕಲಿತದ್ದು ಎಂದೂ ಮರೆಯಲಾಗದು

                                                                                  ಎಲ್ಲರನ್ನೂ ಕಾಯುವ ಆ ಶಿವನು
                                                                                  ಅವಳ ಮಮತೆಯನ್ನು ಕಂಡು ಶರಣಾದನು

                                                                                  ಬೂಮಿಯ ಮೇಲೆ ತ್ಯಾಗ ಪ್ರತೀಕ ಅವಳು
                                                                                  ಅವಳಿಗೆ ಸಮಾನರು ಇನ್ಯಾರು?

                                                                                  ಕರುಣೆಯೇ ಅಳಿಸಿದ ಮಾನವ ಲೋಕದಲ್ಲಿ
                                                                                  ಅದನ್ನು ಉಳಿಸಿದ ಕರುಣಾಮಯಿ ಅವಳು

                                                                                  ನನ್ನ ಕಣ್ಣೀರಿಗೆ ಕಣ್ಣೀರಾಗುವವಳು
                                                                                  ನಗುವಿನಲ್ಲಿ ನಗುವಾಗುವವಳು
                                                                                  ತನ್ನ ಜೀವನವೇ ನನಗೆ ಮುಡುಪಾಗಿಡುವವಳು

                                                                                  ನಾ ಕಂಡಿಲ್ಲ ನಿಜವಾದ ದೇವರನ್ನು
                                                                                  ಇರಬಹುದು ಇವಳಂತೆ ಅವನು
                                                                                  ಪ್ರೀತಿಗೆ ಇನ್ನೊಂದು ಹೆಸರು ಅವಳು
                                                                                  ಅವಳ ಪ್ರೀತಿಯ ಪಡೆದ ನಾನು ಪುಣ್ಯವಂತನು

                                                                                  ಸೋಮವಾರ, ಅಕ್ಟೋಬರ್ 15, 2018

                                                                                  ಮಾಜಿ ರಾಷ್ಟ್ರಪತಿ ಎಪಿಜೆ_ಅಬ್ದುಲ್_ಕಲಾಂ ರವರ ಇಂದು 87ನೇ ವರ್ಷದ ಜನ್ಮದಿನ


                                                                                  ಭಾರತಾಂಬೆಯ ಹೆಮ್ಮೆಯ ಪುತ್ರ,

                                                                                  ದೇಶ ಕಂಡ ಮಹಾನ್‌ ವಿಜ್ಞಾನಿ,

                                                                                  ಮಾಜಿ ರಾಷ್ಟ್ರಪತಿ ಎಪಿಜೆ_ಅಬ್ದುಲ್_ಕಲಾಂ ರವರ ಇಂದು 87ನೇ ವರ್ಷದ ಜನ್ಮದಿನ

                                                                                  ಈ ಮಹಾನ್ ವ್ಯಕ್ತಿ ನಮ್ಮನ್ನು ಅಗಲಿದರೂ
                                                                                  ಇವರ ನೇರ ನಡೆ,
                                                                                  ಕಲ್ಮಶವಿಲ್ಲದ ವ್ಯಕ್ತಿತ್ವ ನಮಗೆಲ್ಲರಿ ಆದರ್ಶ.


                                                                                  ಶುಕ್ರವಾರ, ಅಕ್ಟೋಬರ್ 12, 2018

                                                                                  GST ಎಂದರೇನು? What is GST?


                                                                                          ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಭಾರತದ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ. ಸರಕು ಮತ್ತು ಸೇವೆಗಳ ಸರಬರಾಜಿಗೆ ಜಿಎಸ್ಟಿ ಒಂದೇ ತೆರಿಗೆಯಾಗಿದೆ. ಇದು ಗಮ್ಯಸ್ಥಾನ ಆಧಾರಿತ ತೆರಿಗೆಯಾಗಿದೆ. ಜಿಎಸ್ಟಿ ಕೇಂದ್ರ ಎಕ್ಸೈಸ್ ಲಾ, ಸರ್ವಿಸ್ ಟ್ಯಾಕ್ಸ್ ಲಾ, ವ್ಯಾಟ್, ಎಂಟ್ರಿ ಟ್ಯಾಕ್ಸ್, ಅಕ್ಟೊರೋ ಇತ್ಯಾದಿ ತೆರಿಗೆಗಳನ್ನು ಒಳಗೊಂಡು ಜಿಎಸ್ಟಿ ದೇಶದಲ್ಲಿ ಅತಿದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ. ಜಿಎಸ್ಟಿ ರಾಜ್ಯ ಆರ್ಥಿಕತೆಗಳನ್ನು ಒಟ್ಟುಗೂಡಿಸಲು ಮತ್ತು ರಾಷ್ಟ್ರದ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಸುಧಾರಿಸುವ ನಿರೀಕ್ಷೆಯಿದೆ.
                                                                                  ಜಿಎಸ್ಟಿ ಸರಕುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸೇವೆಗಳ ಮೇಲೆ ಸಮಗ್ರ ಪರೋಕ್ಷ ತೆರಿಗೆ ವಿಧಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಗಳು ಸರಕು ಮತ್ತು ಸೇವೆಗಳ ಮೇಲೆ ವಿಧಿಸಿದ ಎಲ್ಲಾ ಪರೋಕ್ಷ ತೆರಿಗೆಗಳನ್ನು ಇದು ಬದಲಿಸುತ್ತದೆ. ಪ್ರತಿ ರಾಜ್ಯದಲ್ಲಿ ಅವರು ನೋಂದಣಿಯಾಗಿರುವ ಜಿಎಸ್ಟಿ ಗುರುತಿನ ಸಂಖ್ಯೆಯನ್ನು ಪಡೆಯಲು ವ್ಯಾಪಾರಗಳು ಅಗತ್ಯವಿದೆ.
                                                                                  ಜಾಗತಿಕ ಸ್ಥಳದಲ್ಲಿ ಜಿಎಸ್ಟಿ ಹೊಂದಿರುವ ಸುಮಾರು 160 ದೇಶಗಳು ಇವೆ. ಸರಕುಗಳನ್ನು ಸೇವಿಸುವ ರಾಜ್ಯವು ತೆರಿಗೆ ಸಂಗ್ರಹಿಸಿದ ಸ್ಥಳದಲ್ಲಿ GST ಗಮ್ಯಸ್ಥಾನ ಆಧಾರಿತ ತೆರಿಗೆಯಾಗಿದೆ. ಜಿಎಸ್ಟಿ ಅನ್ನು ಜುಲೈ 1, 2017 ರಿಂದ ಭಾರತದಲ್ಲಿ ಜಾರಿಗೆ ತರಲಾಗಿದೆ ಮತ್ತು ಇದು ಡ್ಯುಯಲ್ ಜಿಎಸ್ಟಿ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರಲ್ಲಿ ರಾಜ್ಯಗಳು ಮತ್ತು ಕೇಂದ್ರ ಲೆವಿಗಳು ಎರಡೂ ಸರಕುಗಳು ಅಥವಾ ಸೇವೆಗಳ ಮೇಲೆ ತೆರಿಗೆ ವಿಧಿಸುತ್ತವೆ.

                                                                                  SGST – State GST, collected by the State Govt.
                                                                                  SGST - ಸ್ಟೇಟ್ GST ಯಿಂದ ಸಂಗ್ರಹಿಸಲ್ಪಟ್ಟ ರಾಜ್ಯ ಜಿಎಸ್ಟಿ

                                                                                  CGST – Central GST, collected by the Central Govt.
                                                                                  CGST - ಕೇಂದ್ರೀಯ ಸರ್ಕಾರದಿಂದ ಸಂಗ್ರಹಿಸಲ್ಪಟ್ಟ ಕೇಂದ್ರ ಜಿಎಸ್ಟಿ.

                                                                                  IGST – Integrated GST, collected by the Central Govt.
                                                                                  IGST - ಇಂಟಿಗ್ರೇಟೆಡ್ ಜಿಎಸ್ಟಿ, ಕೇಂದ್ರ ಸರ್ಕಾರ ಸಂಗ್ರಹಿಸಿದೆ.

                                                                                  UTGST – Union territory GST, collected by union territory government
                                                                                  UTGST - ಕೇಂದ್ರಾಡಳಿತ ಪ್ರದೇಶದ ಸರ್ಕಾರವು ಸಂಗ್ರಹಿಸಿದ ಯೂನಿಯನ್ ಪ್ರದೇಶ ಜಿಎಸ್ಟಿ