fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಗುರುವಾರ, ಡಿಸೆಂಬರ್ 31, 2015
ಬುಧವಾರ, ಡಿಸೆಂಬರ್ 30, 2015
ಸೋಮವಾರ, ಡಿಸೆಂಬರ್ 28, 2015
ಗಾಡವಾದ ಪ್ರೀತಿ
ಒಮ್ಮೊಮ್ಮೆ ಅತಿ
ಗಾಡವಾದ
ಪ್ರೀತಿಯು ಸಹ
ಬರ
ಬರುತ್ತ
ಬಣ್ಣ
ಕಳೆದುಕೊಂಡು ಸ್ವಾರ್ಥಕ್ಕೆ ಗುರಿಯಾಗಿ,
ಕಲಹಕ್ಕೆ ಕಿಡಿಯಾಗಿ,
ದ್ವೇಶಕ್ಕೆ ಅಡಿಯಾಗಿ,
ಆ
ಪ್ರೀತಿಯೇ ಅಸೂಯೆಯೆಂಬ ಕತ್ತಿಯಂತಾಗಿ
ಅವನನ್ನಿವಳು ಇವನನ್ನವಳು ಹಿಂಬಾಲಿಸಿ
ಕಾಡಿಸಿ
ಕೊನೆಗೆ
ಅಲ್ಲೊಂದು ಅಂತ್ಯವನ್ನಾಗಿಸುವಂತೆ ಮಾಡಿಬಿಡುತ್ತದೆ.
ಶನಿವಾರ, ಡಿಸೆಂಬರ್ 26, 2015
ಅವಸರದ ರೇಕಣ್ಣ
ಅಂಕಿತ ನಾಮ:
ಸದ್ಯೋಜಾತಲಿಂಗ
ಕಾಲ: 1160
ದೊರಕಿರುವ ವಚನಗಳು: 105 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. 105 ವಚನಗಳು ದೊರೆತಿವೆ. ತತ್ವಚಿಂತನೆ ಇವನ ಮುಖ್ಯ ಆಸಕ್ತಿ. ಬೆಡಗಿನ ವಚನಗಳ ಮಾರ್ಗಕ್ಕೆ ಒಲಿದವನು.
ಕಾಲ: 1160
ದೊರಕಿರುವ ವಚನಗಳು: 105 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. 105 ವಚನಗಳು ದೊರೆತಿವೆ. ತತ್ವಚಿಂತನೆ ಇವನ ಮುಖ್ಯ ಆಸಕ್ತಿ. ಬೆಡಗಿನ ವಚನಗಳ ಮಾರ್ಗಕ್ಕೆ ಒಲಿದವನು.
ಅಹಿ ಕ್ರೂರಮೃಗಂಗಳೆಲ್ಲಕ್ಕೂ ಬಾಯಿಕಟ್ಟಿಂದ ಕಚ್ಚವು ಫಲಂಗಳ,
ಹೊಲದಲ್ಲಿದ್ದಡೂ ಆ ಹೊಲದ ಸೀಮೆಯ ಫಲವನೊಲ್ಲದ
ತೆರದಿಂದ ಕಡೆಯೆ ನಿಮ್ಮ ಹೊಲಬಿನ ಹೊಲ ?
ಗುರುಭಕ್ತನಾದಡೆ ಗುರು ಆಜ್ಞೆ ತಪ್ಪದೆ
ಲಿಂಗಭಕ್ತನಾದಡೆ ಅರ್ಚನೆ, ಪೂಜನೆ, ನಿತ್ಯ ನೇಮ ಕೃತ್ಯಂಗಳು ತಪ್ಪಡೆ,
ಜಂಗಮಭಕ್ತನಾದಡೆ ಆಪ್ಯಾಯನದ ಅನುವಿಷಯದ ಡಾವರ
ಆಶೆಯ ಪಾಶದ ಪರಿಭ್ರಮಣವನರಿತು
ಸುಖಿಯಲ್ಲದೆ, ದುಃಖಿಯಲ್ಲದೆ ಬಂದಂತೆ ಬಾಯಿಗರೆಯದೆ,
ಕಂಡುದ ಬೇಡದೆ, ನಿಂದೆಗೆಡೆಗೊಡದೆ ನಿಜಲಿಂಗಾಂಗಿಯನರಿದು
ಭಕ್ತಿಗೆ ಊಣಿಯವಿಲ್ಲದೆ ಅವರವರ ಒಪ್ಪಕ್ಕೆ ತಕ್ಕ ಚಿತ್ತವಿದ್ದು ಮಾಡುತ್ತಿಪ್ಪ
ಭಕ್ತನ ಬಾಗಿಲೆ ಸದ್ಯೋಜಾತಲಿಂಗವ ಕಾಬುದಕ್ಕೆ ಕಾಹಿಲ್ಲದ ಪಥ.
ಹೊಲದಲ್ಲಿದ್ದಡೂ ಆ ಹೊಲದ ಸೀಮೆಯ ಫಲವನೊಲ್ಲದ
ತೆರದಿಂದ ಕಡೆಯೆ ನಿಮ್ಮ ಹೊಲಬಿನ ಹೊಲ ?
ಗುರುಭಕ್ತನಾದಡೆ ಗುರು ಆಜ್ಞೆ ತಪ್ಪದೆ
ಲಿಂಗಭಕ್ತನಾದಡೆ ಅರ್ಚನೆ, ಪೂಜನೆ, ನಿತ್ಯ ನೇಮ ಕೃತ್ಯಂಗಳು ತಪ್ಪಡೆ,
ಜಂಗಮಭಕ್ತನಾದಡೆ ಆಪ್ಯಾಯನದ ಅನುವಿಷಯದ ಡಾವರ
ಆಶೆಯ ಪಾಶದ ಪರಿಭ್ರಮಣವನರಿತು
ಸುಖಿಯಲ್ಲದೆ, ದುಃಖಿಯಲ್ಲದೆ ಬಂದಂತೆ ಬಾಯಿಗರೆಯದೆ,
ಕಂಡುದ ಬೇಡದೆ, ನಿಂದೆಗೆಡೆಗೊಡದೆ ನಿಜಲಿಂಗಾಂಗಿಯನರಿದು
ಭಕ್ತಿಗೆ ಊಣಿಯವಿಲ್ಲದೆ ಅವರವರ ಒಪ್ಪಕ್ಕೆ ತಕ್ಕ ಚಿತ್ತವಿದ್ದು ಮಾಡುತ್ತಿಪ್ಪ
ಭಕ್ತನ ಬಾಗಿಲೆ ಸದ್ಯೋಜಾತಲಿಂಗವ ಕಾಬುದಕ್ಕೆ ಕಾಹಿಲ್ಲದ ಪಥ.
ಅಮೃತದ್ರವ್ಯದಲ್ಲಿ ಅಮೃತವಿಶೇಷವ ಮಾಡಲಿಕ್ಕಪ್ಪುದಲ್ಲದೆ
ಕಹಿ ಕಟುಕಂಗಳಲ್ಲಿ ಮಧುರಸಾರಕ್ಕೆ ಕ್ರಮಗುಣವುಂಟೆ ?
ಇಂತೀ ಭಾವಕ್ರೀ ವರ್ತನಶುದ್ಧವುಳ್ಳವರಲ್ಲಿ ಅಲ್ಲದೆ
ವರ್ತನಹೀನರಲ್ಲಿ ಉಂಟೆ ಸ್ವಯಜ್ಞಾನಸಂಬಂಧ ?
ಇಂತಿವು ಕುಲವಂಶದಲ್ಲಿ ಅಲ್ಲದೆ ಸತ್ಕುಲ ತದ್ರೂಪಿಲ್ಲ.
ಇಂತೀ ಆಚರಣೆ ಆಶ್ರಿತದ ಭೇದ.
ಈ ಆತ್ಮನ ಭೇದವನರಿತು ಭೇದಿಸಬೇಕು, ಸದ್ಯೋಜಾತಲಿಂಗದಲ್ಲಿ.
ಕಹಿ ಕಟುಕಂಗಳಲ್ಲಿ ಮಧುರಸಾರಕ್ಕೆ ಕ್ರಮಗುಣವುಂಟೆ ?
ಇಂತೀ ಭಾವಕ್ರೀ ವರ್ತನಶುದ್ಧವುಳ್ಳವರಲ್ಲಿ ಅಲ್ಲದೆ
ವರ್ತನಹೀನರಲ್ಲಿ ಉಂಟೆ ಸ್ವಯಜ್ಞಾನಸಂಬಂಧ ?
ಇಂತಿವು ಕುಲವಂಶದಲ್ಲಿ ಅಲ್ಲದೆ ಸತ್ಕುಲ ತದ್ರೂಪಿಲ್ಲ.
ಇಂತೀ ಆಚರಣೆ ಆಶ್ರಿತದ ಭೇದ.
ಈ ಆತ್ಮನ ಭೇದವನರಿತು ಭೇದಿಸಬೇಕು, ಸದ್ಯೋಜಾತಲಿಂಗದಲ್ಲಿ.
ಶುಕ್ರವಾರ, ಡಿಸೆಂಬರ್ 25, 2015
+50,000
ಇಂದಿಗೆ +50,000 ಪುಟಗಳ ವೀಕ್ಷಣೆಯಾದವು, ನಿಮ್ಮ ಈ ಕರುನಾಡ ಕಂದನ ತಾಣವನ್ನು ವೀಕ್ಷಿಸುತ್ತಿರುವ ತಮಗೆಲ್ಲರಿಗೂ ಹೃತ್ಪೂರವವಾದ ಧನ್ಯವಾದಗಳನ್ನು ಹೇಳುತ್ತ, ಅನಂತದೂದ್ದಕ್ಕೂ ಬೆಳೆಯಲಿ ಎಂಬ ಹಂಬಲವನ್ನು ಈ ಕರುನಾಡ ಕಂದನದ್ದಾಗಿಗೆ.
ನಿಮ್ಮ ಈ ಕರುನಾಡ ಕಂದನ ಕನ್ನಡದ ಏಳಿಗೆಗ ಸದಾ ಶ್ರಮಿಸುವವನು,
..
ಬನ್ನಿ ಕನ್ನಡಿಗರು ಕೈ ಜೋಡಿಸಿ, ಕನ್ನಡ ಬೆಳಸಿ, ಮುಂದಿನ ಪೀಳಿಗೆಗೆ ತಿಳಿಸಿ.
ಗುರುವಾರ, ಡಿಸೆಂಬರ್ 24, 2015
ಸಮಾಧಿ
ಸೊಳ್ಳೆ, ಹೆಂಡತಿ ಮತ್ತು ಅಲಾರ್ಮಗಳ ಕಾಟವಿಲ್ಲದೇ ನಿಶ್ಚಿಂತವಾಗಿ ಮಲಗಬಹುದಾದ ಶಯ್ಯಾಸನ
ಇಲ್ಲಿನ ನಿದ್ರಾ ಭಂಗಿಗೆ ಶವಾಸನ ಎನ್ನಬಹುದು
ನಮ್ಮೆಲ್ಲರ ಪಯಣದ ಅಂತಿಮ ಗುರಿ ಈ ಗೋರಿ
ಇದನ್ನು ಕಟ್ಟಲೆಂದು ಬಳಸುವ ಬಂಡವಾಳವೆಲ್ಲ ಡೆಡ್ ಇನ್ವೆಷ್ಟ್ಮೆಂಟೇ
ಮಣ್ಣಲ್ಲಿ ಮಣ್ಣಾಗುವ ಸ್ಥಳ
ಶಾಶ್ವತ ಸಮಾಧಾನ ಸಿಗೋದು ಇಲ್ಲೊಂದೇ
ಸತ್ತವಗೆ ಸಮಾಧಿ ಕಟ್ಟುವುದಕ್ಕಿಂತ ಇರುವವರಿಗೆ ಮನೆ ಕಟ್ಟಿಸುವುದು ಲೇಸು
ಜೀವನದ ಪ್ರಶ್ನೆಗೆ ಅಂತಿಮ ಉತ್ತರ
ಯೋಗಶಾಸ್ತ್ರದ ಪ್ರಕಾರ ಇದೊಂದು ಸ್ಥಿತಿ. ಸಮಾಧಿ ಸ್ಥಿತಿಗೆ ತಲುಪಬಲ್ಲವ ಸಮಾಧಿಯಾಗಲು ಹೆದರಲಾರ
-ವಿಶ್ವನಾಥ ಸುಂಕಸಾಳ
ಮಂಗಳವಾರ, ಡಿಸೆಂಬರ್ 22, 2015
ಅಮ್ಮ ನಿನ್ನ ಹೊಗಳಲು
ಅಮ್ಮ ನಿನ್ನ ಹೊಗಳಲು
ಯಾವ ಪದವ ಹುಡುಕಲಿ?
ಅಮ್ಮ ನಿನ್ನ ಮಮತೆ ಪ್ರೀತಿಯ ಹೇಗೆ ತಾನೆ ಮರೆಯಲಿ?
ಅಮ್ಮ ನಿನ್ನ ಮಡಿಲದು ಪ್ರೀತಿ ಸುಧೆಯ ಕಡಲು.
ಅಮ್ಮ ನಿನ್ನ ಮಡಿಲದು ಸ್ವರ್ಗಕಿಂತ ಮಿಗಿಲು.
ಅಮ್ಮ ನಿನ್ನ ನುಡಿಗಳು ಹಾಲು ಜೇನ ಸಂಗಮ.
ಅಮ್ಮ ನಿನ್ನ ಮೊಗವದು ಹುಣ್ಣಿಮೆಯ ಚಂದ್ರಮ.
ಅಮ್ಮ ನೀನು ಸನಿಹವಿರಲು ಜಗವನ್ನೇ ಮರೆವೆನು.
ಅಮ್ಮ ನಿನ್ನ ಜೊತೆಯಿರಲು ಜಗವನ್ನೇ ಗೆ ಲ್ಲುವೆನು.
ಮುಂದಿನಾ ಜನುಮವಿರಲು ನಿನ್ನ ಕಂದನಾಗೇ ಬರುವೆನು.
ಮತ್ತೆ ನಿನ್ನ ಜೊತೆಯಿರಲು ಹರುಷದಲ್ಲಿ ಕುಣಿವೆನು.
ಕವಿ ಕನ್ನಡಿಗ ವಿಜಯ್ ಜಿ
ಅಮ್ಮ ನಿನ್ನ ಮಮತೆ ಪ್ರೀತಿಯ ಹೇಗೆ ತಾನೆ ಮರೆಯಲಿ?
ಅಮ್ಮ ನಿನ್ನ ಮಡಿಲದು ಪ್ರೀತಿ ಸುಧೆಯ ಕಡಲು.
ಅಮ್ಮ ನಿನ್ನ ಮಡಿಲದು ಸ್ವರ್ಗಕಿಂತ ಮಿಗಿಲು.
ಅಮ್ಮ ನಿನ್ನ ನುಡಿಗಳು ಹಾಲು ಜೇನ ಸಂಗಮ.
ಅಮ್ಮ ನಿನ್ನ ಮೊಗವದು ಹುಣ್ಣಿಮೆಯ ಚಂದ್ರಮ.
ಅಮ್ಮ ನೀನು ಸನಿಹವಿರಲು ಜಗವನ್ನೇ ಮರೆವೆನು.
ಅಮ್ಮ ನಿನ್ನ ಜೊತೆಯಿರಲು ಜಗವನ್ನೇ ಗೆ
ಮುಂದಿನಾ ಜನುಮವಿರಲು ನಿನ್ನ ಕಂದನಾಗೇ ಬರುವೆನು.
ಮತ್ತೆ ನಿನ್ನ ಜೊತೆಯಿರಲು ಹರುಷದಲ್ಲಿ ಕುಣಿವೆನು.
ಕವಿ ಕನ್ನಡಿಗ ವಿಜಯ್ ಜಿ
ಭಾನುವಾರ, ಡಿಸೆಂಬರ್ 20, 2015
ಹತ್ತು ಹತ್ತು ಇಪ್ಪತ್ತು
ಹತ್ತು ಹತ್ತು
ಇಪ್ಪತ್ತು,
ತೋಟಕೆ ಹೋದನು
ಸಂಪತ್ತು
ಇಪ್ಪತ್ತು ಹತ್ತು
ಮೂವತ್ತು
ಕೈಯಲ್ಲೊಂದು ಕಲ್ಲಿತ್ತು
ಮೂವತ್ತು ಹತ್ತು
ನಲವತ್ತು,
ಎದುರಿಗೆ ಮಾವಿನ
ಮರವಿತ್ತು.
ನಲವತ್ತು ಹತ್ತು
ಐವತ್ತು
ಮಾವಿನ ಮರದಲಿ
ಕಾಯಿತು
ಐವತ್ತು ಹತ್ತು
ಅರವತ್ತು
ಕಲ್ಲನುಬೀರಿದ ಸಂಪತ್ತು
ಅರವತ್ತು ಹತ್ತು
ಎಪ್ಪತ್ತು
ಕಾಯಿಯು ತಪ
ತಪನುದುರಿತ್ತು
ಎಪ್ಪತ್ತು ಹತ್ತು
ಎಂಭತ್ತು
ಮಾಲಿಯ ಕಂಡನು
ಸಂಪತ್ತು.
ಎಂಭತ್ತು ಹತ್ತು
ತೊಂಭತ್ತು
ಕಾಲುಗಳೆರಡೂ ಓಡಿತ್ತು
ತೊಂಭತ್ತು ಹತ್ತು
ನೂರು
ಓಡುತ ಮನೆಂiiನು ಸೇರು || ಜಿ.ಪಿ ರಾಜರತ್ನಂ.
ಶುಕ್ರವಾರ, ಡಿಸೆಂಬರ್ 18, 2015
ಬುಧವಾರ, ಡಿಸೆಂಬರ್ 16, 2015
ಸೋಮವಾರ, ಡಿಸೆಂಬರ್ 14, 2015
ಸೋಮನಾಥ ದೇವಾಲಯ
ಕೊಪ್ಪಳ
ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿರುವ ಪುಟ್ಟ ಗ್ರಾಮ ಪುರ. ಈ ಗ್ರಾಮದಲ್ಲಿರುವ
ಸೋಮನಾಥ ದೇವಾಲಯ ಪವಿತ್ರ ತಾಣವಾಗಿದೆ. ಸೋಮನಾಥೇಶ್ವರ ದೇವಾಲಯದ ಒಳಗೆ ನಾನಾ ಬಗೆಯ,
ನಾನಾ ಆಕಾರದ ಸಾವಿರಾರು ಶಿವಲಿಂಗಗಳು ಎಲ್ಲೆಲ್ಲೂ
ಕಾಣಸಿಗುತ್ತವೆ. ಅರ್ಧ ಇಂಚಿನ ಲಿಂಗದಿಂದ ಹಿಡಿದು ದೊಡ್ಡಗಾತ್ರದ ಬೃಹದೇಶ್ವರ
ಲಿಂಗಗಳೂ ಇಲ್ಲಿವೆ. ಹೀಗಾಗೇ ಈ ಕ್ಷೇತ್ರ ಕೋಟಿಲಿಂಗಕ್ಷೇತ್ರ ಎಂದು ಖ್ಯಾತವಾಗಿದೆ.
ಇಲ್ಲಿರುವ
ಲಿಂಗಗಳು ಪಂಚಲಿಂಗ,
ವರದಾಶಂಕರ ಲಿಂಗ, ಸಂಗಮೇಶ್ವರಲಿಂಗ,
ಅಷ್ಟಲಿಂಗ, ನವಲಿಂಗ,
ರುದ್ರಾಕ್ಷಿ ಲಿಂಗ, ರುದ್ರಲಿಂಗ
ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತವೆ.
ಸೋಮನಾಥ
ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎಂದು ಊರಿನ
ಹಿರಿಯರು ಹೇಳುತ್ತಾರೆ. ಕ್ರಿ.ಶ.೧೪೬೯ರ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ
ಬಿದಿಗೆ ದಿನ ಈ ದೇವಾಲಯ ನಿರ್ಮಾಣವಾಗಿರಬಹುದು ಇದನ್ನು ವಿಜಯನಗರದ ದೊರೆ ಎರಡನೇ
ವೀರಪ್ರತಾಪ ಸದಾಶಿವರಾಯ ಕಟ್ಟಿಸಿರುವನೆಂದು ದೇವಾಲಯದ ಹೊರಗೆ ಇರುವ ಶಾಸನ
ತೋರಿಸುತ್ತಾರೆ.
ದೇವಾಲಯದ
ಪ್ರಾಕಾರದಲ್ಲಿ ಹಲವೆಡೆ ಸಾಲು ಸಾಲು ಲಿಂಗಗಳಿದ್ದರೆ,
ಮತ್ತೆ ಕೆಲವೆಡೆ ಗುಂಪುಗಳಾಗಿ ಲಿಂಗಪ್ರತಿಷ್ಠೆ ಮಾಡಲಾಗಿದೆ.
ಮತ್ತೆ ಕೆಲವೆಡೆ ಹಂತ ಹಂತಗಳಲ್ಲಿ ಲಿಂಗಗಳಿವೆ.
ಸೋಮನಾಥ
ದೇವಾಲಯದ ಗರ್ಭಗೃಹದ ಮುಂದೆ ಕಲ್ಲಿನ ಕಂಬವೊಂದರ ಮೇಲೆ ಶಿವಲಿಂಗವಿದೆ. ಇದನ್ನು
ಹರಿವಾಣ ಲಿಂಗ ಎಂದು ಕರೆಯಲಾಗುತ್ತದೆ. ಕೊಳವೆ ಜೋಡಿಸಿರುವ ಈ ಲಿಂಗಕ್ಕೆ ಅಭಿಷೇಕ
ಮಾಡಿ,
ಲಿಂಗ ತಿರುಗಿಸಿದರೆ ಆ ತೀರ್ಥ ದೇವಾಲಯದಲ್ಲಿರುವ ಎಲ್ಲ
ಶಿವಲಿಂಗಗಳಿಗೂ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳುತ್ತಾರೆ. ಈಗ ಆ
ವ್ಯವಸ್ಥೆ ಇಲ್ಲ ಆದರೆ ಲಿಂಗ ತಿರುಗುತ್ತದೆ.
ದೇವಾಲಯದ
ಗರ್ಭಗೃಹದ ಎಡಭಾಗದಲ್ಲಿ ಗೋವರ್ಧನ ಗಿರಿಯನ್ನು ಎತ್ತಿಹಿಡಿದು ಗೋಪಾಲಕರನ್ನು
ಕಾಪಾಡಿದ ಕೃಷ್ಣ,
ಗಣಪತಿ, ನವಿಲೇರಿ ಸವಾರಿ
ಮಾಡುತ್ತಿರುವ ಷಣ್ಮುಖ, ರಾವಣ,
ಗಣಪತಿ ಇರುವ ಗೋಕರ್ಣ ಮಹಾತ್ಮೆ,
ಗಜಗೌರಿ ವ್ರತ, ಬೇಡರ ಕಣ್ಣಪ್ಪ ಮೊದಲಾದ
ದೃಶ್ಯಾವಳಿಗಳಿವೆ.
ದೇವಾಲಯದಲ್ಲಿ
ಅಮೃತಬಾವಿ ಸೇರಿದಂತೆ ಐದು ಬಾವಿಗಳಿವೆ. ಮೂರನೇ ದ್ವಾರದಲ್ಲಿರುವ ಹಾಲಿನ ಬಾವಿಯ
ಸುತ್ತ ಕಾಮಧೇನು,
ಕಲ್ಪವೃಕ್ಷ, ಆಂಜನೇಯ
ವಿಗ್ರಹಗಳಿವೆ. ದೇವಾಲಯದಲ್ಲಿರುವ ಮೂರು ಕಾಲಿನ ಮಂಟಪ,
ವೀರಭದ್ರ ಮೂರ್ತಿ ಗಮನಾರ್ಹವಾಗಿದೆ. ದೇವಾಲಯದ ಗೋಪುರದ ಮೇಲೆ ಸಹ ಲಿಂಗಾಕೃತಿಯ
ಸಾವಿರಾರು ಗೋಪುರಗಳಿವೆ.
ಶಿವರಾತ್ರಿಯ
ವೇಳೆ ಇಲ್ಲಿ ರಥೋತ್ಸವ ಜರುಗುತ್ತದೆ. ಎಳ್ಳಮಾವಾಸ್ಯೆ, ನಾಗರಪಂಚಮಿ ಹಾಗೂ
ಶ್ರಾವಣದಲ್ಲಿ ಇಲ್ಲಿ ಪೂಜೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಪರೂಪದ ಈ
ದೇವಾಲಯ ಸಂರಕ್ಷಣೆಗೆ ಸರ್ಕಾರ ಹಾಗೂ ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು
ಸ್ಥಳೀಯ ಪ್ರಜ್ಞಾವಂತರ ಮನವಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ನಾಮಕರಣಕ್ಕೆ "ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ... ಬೇಗ ಹೇಳಿ…. ನಿಮ್ಮ ಉತ್ತರ ಈ ತಾಣಕ್ಕೆ ಕಮೆಂಟ್ ಅಥವಾ 8951734903 ಗೆ ಸಂದೇಶ / ವಾ...
-
೧ ಬಾಲ್ಯ ಜೀವನ ೨ ಡಾ. ವಿಷ್ಣುವರ್ಧನ್ ಅಭಿನಯದ ಸಂಪೂಣ೯ ಚಿತ್ರಗಳು ೨.೧ ಕನ್ನಡ ೨.೨ ಹಿಂದಿ ೨.೩ ತಮಿಳು ೨.೪ ತೆಲುಗು ೨.೫ ಮಲಯಾಳಂ ಬಾಲ್ಯ ...
ಪದ ಪುಸ್ತಕ
ಹುಡುಕಾಟ ಫಲಿತಾಂಶಗಳು