fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಫೆಬ್ರವರಿ 28, 2015

ಪ್ರೀತಿ ಮತ್ತು ಸ್ನೇಹ



"ಕಡಲಲ್ಲಿ ಸಾವಿರ ಮುತ್ತುಗಳು ಸಿಗಬಹುದು 
ಆದರೆ ಜೀವನದಲ್ಲಿ ಸಿಗುವುದು ಎರಡೆ ಮುತ್ತುಗಳು  
ಅದುವೆ ಪ್ರೀತಿ ಮತ್ತು ಸ್ನೇಹ  
ಇದರಲ್ಲಿ ಯಾವುದನ್ನೆ ಕಳಕೊಂಡರು ಮನಸಿಗೆ ನೊವಾಗುತ್ತೆ ಅಲ್ವ"

ಗುರುವಾರ, ಫೆಬ್ರವರಿ 26, 2015

ಅಖಂಡ ಮಂಡಲೇಶ್ವರ

ಅಂಕಿತ ನಾಮ: ಷಣ್ಮುಖಸ್ವಾಮಿ

ಕಾಲ:

ದೊರಕಿರುವ ವಚನಗಳು: 2 (ಆಧಾರ: ಸಮಗ್ರ ವಚನ ಸಂಪುಟ)

ತಂದೆ/ತಾಯಿ:

ಹುಟ್ಟಿದ ಸ್ಥಳ:

ಪರಿಚಯ: 


 ಕೊಲಲಾರದೆಯೆ
ಹಿಂದೆ ಬಂದುದನರಿದುದಿಲ್ಲಾಗಿ,
ಮುಂದೆ ಬಾಹದಕೆ ನೀ ಚಿಂತಿಸಲೇಕೆ ?
ಇಂದಿಗೆಂಬುದು ಲಿಂಗದೊಲವು.
ಶಿವಶರಣಂಗೆ ನಾಳೆ ಇಂದು ಎಂಬ ಅಭಾವವಿಲ್ಲ.
ಕಡುಗಲಿಯಾದ ಶರಣ ರಕ್ಷೆಯ ಕಾಯವೇನಯ್ಯಾ,
ಅಖಂಡ ಮಂಡಲೇಶ್ವರಾ.

 ಹೇಮ ಕಾಮಿನಿ ಭೂಮಿ ಜೀವರಾಧಾರ,
ಜೀವರ ಪ್ರಾಣ, ಜೀವರ ಸಿಕ್ಕು ತೊಡಲು.
ಇಹಪರದೊಳಗೆ ಜಂಘೆಯ ಬಿಟ್ಟು,
ಲಂಘಿಸಿ ನಿಂದಾತನೆ ವಿರತಿ ಸಮಗ್ರ ಕಾಣಾ,
ಮರ್ಕಟೇಶ್ವರಾ.

ಭಾನುವಾರ, ಫೆಬ್ರವರಿ 22, 2015

ಪ್ರೀತಿಯ ಡ್ಯಾಡಿ..



Align Center
ಯಾವ ಜನ್ಮದ ಪುಣ್ಯವೋ ಏನೋ
ನೀವಾಗಿದ್ದಿರಿ ನನ್ನ ಪ್ರೀತಿಯ ಡ್ಯಾಡಿ..

ನನ್ನ ಬದುಕಿನುದ್ದಕ್ಕೂ ಪೂಜಿಸುವ
ತಾಯಿಯ ನಂತರದ ದೇವರು ನೀವು
ದಿನವೂ ರಾಜಕುಮಾರನ ಕಥೆಯ ಹೇಳಿ
ಕನಸಿನ ಲೋಕಕ್ಕೆ ಕರೆದೊಯ್ಯುವಿರಿ ನೀವು
ಬಾರದು ನಿದಿರೆ, ನಿಮ್ಮ ಮಡಿಲಲ್ಲಿ ಮಲಗದೇ
ಇಡೀ ಜಗವೇ ಬೆರಗಾಗುವಂತಹ
ತಂದೆ-ಮಗಳ ಅಪರೂಪ ಜೋಡಿ ನಾನು-ನೀವು

ಅಮ್ಮ ಗುಮ್ಮನ ಹಾಗೆ ಹೆದರಿಸುವಾಗ,
ಅಮ್ಮನಿಗೆ ಗೊತ್ತಾಗದ ಹಾಗೆ ಹೊರಗಡೆ
ಕರೆದೊಯ್ದು, ಕೇಳಿದೆಲ್ಲವನ್ನು ಕೊಡಿಸಿ,
ಚಂದಿರನ ಬೆಳಕಿನಲಿ ಊಟ ಮಾಡಿಸುತ
ಆಡಿಸುತ್ತಿದ್ದ ಕೂಸುಮರಿಯಾಟ...
ಆಟವಾಡುವ ಖುಷಿ ಖುಷಿಯಲ್ಲೂ
ನೀವು ನನಗೆ ಹೇಳಿ ಕೊಡುತ್ತಿದ್ದಿರಿ, ನಾ
ಮರೆಯಲಾರದ ಬದುಕು, ಶಿಸ್ತು,ನೀತಿ ಪಾಠ..

ನನ್ನ ಪುಟ್ಟ ಮಗಳ ತುಂಟಾಟ ಕಂಡಾಗ
ಆಗಿನ ನನ್ನ ತುಂಟಾಟವನು ನೋಡಿ,
ನೀವು ಪಡುತ್ತಿದ್ದ ಸಂಭ್ರಮವ ನೆನೆದಾಗ
ನಾನೋಡಿ ಬಂದು ನಿಮ್ಮ ಬೆಚ್ಚನೆದೆಯಲ್ಲಿ
ಮುಖವಿಟ್ಟು ನಿಮ್ಮನ್ನು ಬಿಗಿದಪ್ಪುವಾಸೆ ...Really I miss you ... Daddy...!!!
                                                                    ಕೃಪೆ : 

ಶನಿವಾರ, ಫೆಬ್ರವರಿ 21, 2015

ಮಸಾಲಾ ಚಹಾ

 
ಪ್ರಮಾಣ: 2 ಮಂದಿಗೆ ಸಾಕಾಗುವಷ್ಟು 
ತಯಾರಿಕೆಗೆ ತೆಗೆದುಕೊಳ್ಳುವ ಸಮಯ: ಹತ್ತು ನಿಮಿಷಗಳು. 
ಬೇಕಾಗುವ ಸಮಯ: ಐದರಿ೦ದ ಆರು ನಿಮಿಷಗಳು  
ಬೇಕಾಗಿರುವ ಸಾಮಗ್ರಿಗಳು 
*ಕಾಳುಮೆಣಸಿನ ಪುಡಿ - ಅರ್ಧ ಟೀ. ಚಮಚದಷ್ಟು 
*ಒಣ ಶು೦ಠಿ - ಒ೦ದು 
*ಏಲಕ್ಕಿ - ಒ೦ದು ಟೀ. ಚಮಚದಷ್ಟು
 *ಡಾಲ್ಚಿನ್ನಿ - ಅರ್ಧ ಟೀ. ಚಮಚದಷ್ಟು 
*ಇಡಿಯ ಲವ೦ಗಗಳು - ಒ೦ದರಿ೦ದ ಎರಡು 
*ಜಾಯಿಕಾಯಿ - ¼ ಚಹಾ ತಯಾರಿಕೆಯ ಸಾಮಗ್ರಿಗಳು 
*ಹಾಲು - ¾ ಲೋಟದಷ್ಟು 
*ನೀರು - ಅರ್ಧ ಲೋಟದಷ್ಟು 
*ಚಹಾ ಪುಡಿ - ಅರ್ಧ ಟೀ ಚಮಚದಷ್ಟು 
*ಸಕ್ಕರೆ - ರುಚಿಗೆ ತಕ್ಕಷ್ಟು 
ತಯಾರಿಕಾ ವಿಧಾನ 
1.ಒಣ ಶು೦ಠಿ, ಏಲಕ್ಕಿ, ಡಾಲ್ಚಿನ್ನಿ, ಲವ೦ಗಗಳು, ಹಾಗೂ ಜಾಯಿಕಾಯಿಗಳನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿರಿ. ಇವುಗಳನ್ನು ಚೆನ್ನಾಗಿ ಜಜ್ಜುವುದರ ಮೂಲಕವೂ ಕೂಡ ನೀವು ಅವುಗಳನ್ನು ಪುಡಿ ಮಾಡಿಕೊಳ್ಳಬಹುದು. 
2.ಈಗ ಈ ಪುಡಿಮಾಡಿರುವ ಸಾ೦ಬಾರ ಪದಾರ್ಥಗಳನ್ನು ಮಿಶ್ರಗೊಳಿಸುವುದಕ್ಕಾಗಿ ಅವುಗಳನ್ನು ಮಿಕ್ಸರ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಗೊಳಿಸಿರಿ. ಮಿಕ್ಸರ್‌ನ ಮುಚ್ಚಳವನ್ನು ತೆರೆದಾಗ, ನಿಮಗೆ ಈ ಸಾ೦ಬಾರ ಪದಾರ್ಥಗಳ ತಾಜಾ ಪರಿಮಳವು ಮೂಗಿಗೆ ಬಡಿಯುತ್ತದೆ. 
3. ಈಗ, ನೀರು ಮತ್ತು ಹಾಲನ್ನು ಮಿಶ್ರಗೊಳಿಸಿ ಅವುಗಳನ್ನು ಕುದಿಸಿರಿ. ಇದು ಕುದಿಯತೊಡಗಿದಾಗ, ಚಹಾಪುಡಿಯನ್ನು ಇದಕ್ಕೆ ಸೇರಿಸಿರಿ. ಉರಿಯನ್ನು ಮ೦ದಗೊಳಿಸಿರಿ ಹಾಗೂ ಒ೦ದು ಟೀ ಚಮಚದಷ್ಟು ಮಸಾಲಾ ಪುಡಿಯನ್ನು ಚಹಾಕ್ಕೆ ಸೇರಿಸಿರಿ. ಇದು ಸುಮಾರು ಒ೦ದು ನಿಮಿಷದವರೆಗೆ ಕುದಿಯಲಿ. 
4. ಈಗ, ಈ ದ್ರಾವಣವನ್ನು ಸೋಸಿ ನ೦ತರ ಚಹಾವನ್ನು ಬಿಸಿಬಿಸಿಯಾಗಿ ಒದಗಿಸಿರಿ. ಚಹಾಕ್ಕೆ ಸೇರಿಸಲಾಗಿರುವ ಸಾ೦ಬಾರ ವಸ್ತುಗಳು ಚಿಕಿತ್ಸಾತ್ಮಕ ಗುಣಲಕ್ಷಣಗಳುಳ್ಳವುಗಳಾಗಿದ್ದು, ಇವು ಜೀರ್ಣಾ೦ಗ ವ್ಯೂಹಕ್ಕೆ ಉತ್ತಮವಾಗಿವೆ.
 ಪೋಷಕಾ೦ಶ ತತ್ವಗಳು
*ಮಸಾಲಾ ಚಹಾಕ್ಕೆ ಬಳಸಿಕೊಳ್ಳಲಾಗುವ ಸ೦ಬಾರ ಪದಾರ್ಥಗಳು ಆರೋಗ್ಯದ ದೃಷ್ಟಿಯಿ೦ದ ಉತ್ತಮವಾದವುಗಳಾಗಿವೆ. ಇವುಗಳಲ್ಲಿ ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ವಿಟಮಿನ್‪ಗಳಿದ್ದು , ಇವು ನಿಮ್ಮ ದೇಹದ ಒಟ್ಟಾರೆಯ ಸ್ವಾಸ್ಥ್ಯಕ್ಕೆ ಪೂರಕವಾಗಿವೆ. 
*ಮಸಾಲಾ ಚಹಾವು ಒ೦ದು ಆಯುರ್ವೇದೀಯ ಉತ್ಪನ್ನವಾಗಿದೆ. ಚಹಾಕ್ಕೆ ಸೇರಿಸಲಾಗುವ ಸ೦ಬಾರ ಪದಾರ್ಥಗಳು ಚಿಕಿತ್ಸಾತ್ಮಕ ತತ್ವಗಳನ್ನೊಳಗೊ೦ಡಿದ್ದು, ಜೀರ್ಣಾ೦ಗ ವ್ಯೂಹಕ್ಕೆ ಅತ್ಯುತ್ತಮವಾದವುಗಳಾಗಿವೆ. ಸಲಹೆ 
*ಚಹಾದ ಸ್ವಾದದ ಸ೦ವರ್ಧನೆಗಾಗಿ ನೀವು ಚಹಾಕ್ಕೆ ತುಳಸಿ ಎಲೆಗಳನ್ನು ಅಥವಾ ಗುಲಾಬಿ ಹೂವಿನ ದಳಗಳನ್ನು ಅಗತ್ಯವಿದ್ದಲ್ಲಿ ಸೇರಿಸಬಹುದು. 
*ಚಹಾ ತಯಾರಿಕೆಯ ವೇಳೆ, ಚಹಾದ ಪುಡಿಯನ್ನು ಅತಿಯಾಗಿ ಹಾಕದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಸಾ೦ಬಾರ ಪದಾರ್ಥಗಳೊ೦ದಿಗೆ ಬೆರೆಸಲ್ಪಟ್ಟಾಗ ನಿಮ್ಮ ಚಹಾವು ಉತ್ತಮವಾದ ಸ್ವಾದವನ್ನು ಪಡೆಯುತ್ತದೆ. 
*ಮಸಾಲಾ ಚಹಾಕ್ಕೆ ವಿಶಿಷ್ಟವಾದ ಸ್ವಾದವು ಒದಗಬೇಕೆ೦ದಾದರೆ, ಸೇರಿಸಲಾಗುವ ಸಾ೦ಬಾರ ಪದಾರ್ಥಗಳನ್ನು ಚೆನ್ನಾಗಿ ಪುಡಿ ಮಾಡಿಕೊ೦ಡಿರಬೇಕು.

                  ಮಸಾಲಾ ಚಹಾವು ಅದೆಷ್ಟು ಅಪ್ಯಾಯಮಾನವಾದ ಪೇಯವೆ೦ದರೆ, ನೀವ೦ತೂ ಖ೦ಡಿತವಾಗಿಯೂ ಈ ದಿನ ಸ೦ಜೆ ಅದನ್ನು ಮಾಡಿಕೊ೦ಡು ಕುಡಿಯದೇ ಇರಲಾರಿರಿ. ಚಳಿಗಾಲವ೦ತೂ ತಳವೂರಿಯಾಗಿದೆ. ಚಳಿಗಾಲದ ಈ ತಣ್ಣನೆಯ ವಾತವರಣವು ನಿಮ್ಮನ್ನು ಸೋಮಾರಿಯನ್ನಾಗಿಸುತ್ತದೆ ಹಾಗೂ ಒ೦ದು ಕಪ್ ಚಹಾಕ್ಕಾಗಿ ನೀವು ಹಪಹಪಿಸುವ೦ತೆ ಮಾಡುತ್ತದೆ. ಮೈಮೂಳೆ ಕೊರೆಯುವ ಚಳಿಗಾಲದ ಸ೦ಜೆಯ ವೇಳೆಗೆ ನೀವು ಅಪ್ಯಾಯಮಾನವಾಗಿ ಹೀರಲು ಬಯಸುವ ಪೇಯವೇ ಈ ಮಸಾಲಾ ಚಹಾವಾಗಿದೆ. 
                  ಮಸಾಲಾ ಚಹಾದ ತಯಾರಿಕಾ ವಿಧಾನವು ತು೦ಬಾ ಜನಪ್ರಿಯವಾದುದಾಗಿದ್ದು, ಇದರ ಸ್ವಾದವ೦ತೂ ನೀವು ಮತ್ತಷ್ಟು ಚಹಾಕ್ಕಾಗಿ ಬೇಡಿಕೆಯಿಡುವ೦ತೆ ಮಾಡುತ್ತದೆ. ಸಣ್ಣ ಪ್ರಮಾಣದ ಚಹಾ ಅ೦ಗಡಿಗಳ ಮಾಲೀಕರ ನಡುವೆಯ೦ತೂ ಈ ಭಾರತೀಯ ಮಸಾಲಾ ಚಹಾದ ತಯಾರಿಕಾ ವಿಧಾನವು ಅತ್ಯ೦ತ ಅಚ್ಚುಮೆಚ್ಚಿನದ್ದಾಗಿದೆ. ರಸ್ತೆಯ ಬದಿಯಲ್ಲಿರಬಹುದಾದ ಇ೦ತಹ ಚಹಾ ಮಾರಾಟದ ಸ್ಟಾಲ್ ಗಳಿ೦ದ ಹೊರಬರುವ ಅತ್ಯುತ್ತಮವಾದ ಮಸಾಲಾ ಚಹಾದ ಕ೦ಪು, ಚಹಾದ ಸ್ವಾದವನ್ನು ಹೀರಿಕೊಳ್ಳದೇ ನಿಮ್ಮನ್ನು ಮು೦ದುವರಿಯಲು ಬಿಡಲಾರದು. 
             ಈ ಚಹಾದ ಕುರಿತಾದ ಅತ್ಯುತ್ತಮವಾದ ಅ೦ಶವೇನೆ೦ದರೆ, ನೀವು ಈ ಚಹಾಕ್ಕೆ ನಿಮ್ಮ ಬಯಕೆಯ ಎಲ್ಲಾ ಸಾ೦ಬಾರ ಪದಾರ್ಥಗಳನ್ನೂ ಸೇರಿಸಬಹುದು ಹಾಗೂ ಇ೦ತಹ ಒ೦ದು ಚಹಾವನ್ನು ಹೀರಿದ ಬಳಿಕ ನಿಮ್ಮ ಮನಸ್ಥಿತಿಯನ್ನು ಚೇತೋಹಾರಿಗೊಳಿಸಿಕೊಳ್ಳಬಹುದು.

ಬುಧವಾರ, ಫೆಬ್ರವರಿ 18, 2015

2015 Cricket World Cup Live stream's Links ಕ್ರಿಕೆಟ್ ಲಿಂಕ್-ಗಳು

ವಲ್ಡ ಕಪ್ 2015 ಮಾಹಿತಿ ಮತ್ತು ವೇಳಾಪಟ್ಟಿ (Live WorldCup Stream))

2015 ವಲ್ಡ್ ಕಪ್ ((Live WorldCup Stream))



ಮಂಗಳವಾರ, ಫೆಬ್ರವರಿ 17, 2015

ಶಿವರಾತ್ರಿ ಆಚರಣೆಯ ಹಿನ್ನೆಲೆ

೧.       ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿ ಯಂದು... ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ.

೨.
ಸ್ಕಂದ ಪುರಾಣ  ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ... ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ..

೩ ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. 

೪. ' ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ....., ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆ..., ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆ... ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು.  ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ..

೫ ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದ್ರೆ ದೇವತೆಗಳು... ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು... ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.