fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಫೆಬ್ರವರಿ 24, 2019

ಉಪ್ಪು

ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಇದರ ಮಹತ್ವದ ಅರಿವಾಗುತ್ತದೆ
ಉಪ್ಪು ತಿಂದವನ ಮುಖವು ಬೆಪ್ಪು ತಕ್ಕಡಿಯಂಥಕ್ಕು
ಸಮುದ್ರದಲ್ಲಿ ದೊರೆಯುವುದರಿಂದ ಇದು ಮೀನಿನ ಬೆವರಿನಿಂದ ಉಂಟಾಗುವುದೆಂದು ಊಹಿಸಬಹುದು
ಯಾವ ಕಾಲಕ್ಕೂ ಸಪ್ಪೆಯೆನಿಸದ ಪದಾರ್ಥ
ನಮ್ಮ ದೇಹದ ಕಣ ಕಣದಲ್ಲೂ ಉಪ್ಪೇ ಇದೆ. ಬೆವರಿದಾಗ ತಿಳಿಯುತ್ತದೆ
ಉಪ್ಪಿನಲ್ಲಿ ಮೋಸ ಮಾಡುವ ದ್ರೋಹಕ್ಕೆ ಉಪ್ಪಾಯ ಎನ್ನಬಹುದು
ತಪ್ಪು ಮಾಡಿದರೆ ಒಪ್ಪಿಕೊಳ್ಳಬೇಕು,ಅಥವಾ ಉಪ್ಪು ಕೊಳ್ಳಬೇಕು
ಉಪ್ಪಿಗೆ ಪೆಪ್ಪರ್ ಬೆರೆಸಿ ತಿಂದರೆ ನೀರೂರಿಸುತ್ತೆ
ಉಪ್ಪಿಗಿಂಥ ರುಚಿಯಿಲ್ಲ ಎನ್ನುವವರು ಒಮ್ಮೆ ಉಪ್ಪಿನಕಾಯಿ ತಿಂದು ನೋಡುವುದು ಒಳಿತು

-ವಿಶ್ವನಾಥ ಸುಂಕಸಾಳ

ಶುಕ್ರವಾರ, ಫೆಬ್ರವರಿ 22, 2019

ಒಬ್ಬ ತಾಯಿ



ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ ಅಪಾರವಾದದ್ದು ಅನ್ನೋದು ಸತ್ಯ. ಅಂತಹಾ ತಾಯಂದಿರಿಗಾಗಿ, ಪ್ರತಿಯೊಬ್ಬ ಮಹಿಳಾಮಣಿಯರಿಗಾಗಿ ಬರೆದ ಕೆಲವು ಸಾಲುಗಳಿವು,
 
 ಹಸುಗೂಸು ಹೆರುವಾಗ ನೀ ಕಷ್ಟಪಟ್ಟೆ
ಹೆತ್ತಕಂದನ ಕಂಡು ಸಂತಸವ ಪಟ್ಟೆ
ಹುಟ್ಟಿದ ಹಸುಗೂಸ ಒಲುಮೆಯಲಿ ಸಾಕಿ
ಒಲುಮೆ ಸಿರಿ ಸಂತಸವ ಅನುದಿನವು ಉಣಿಸಿ

ಎದ್ದು ಬಂದಿದ್ದೆ ನಡುರಾತ್ರಿಯಲಿ, ಕೇಳಿ ಕಂದನ ಕೂಗು
ರಟ್ಟೆನೋವಾದರೂ ನೀ ಬಿಡಲಿಲ್ಲ ತೊಟ್ಟಿಲ ತೂಗು
ರಚ್ಚೆಹಿಡಿದತ್ತಾಗ ತೋಳ ತೆಕ್ಕೆಯಲಿ ಮಲಗಿಸಿ
ಮುದ್ದು ಕಂದನ ನಿನ್ನ ಕಣ್ರೆಪ್ಪೆಯಲಿ ಇರಿಸಿ

ಅಯ್ಯೋ ಕಂದನ ಒಡಲು ಬಿಸಿಯಾಯ್ತು
ಹೆತ್ತಕರುಳಿನ ಕೂಗು, ಚಿಂತೆ ನೂರಾಯ್ತು
ಗುಡಿ ಗೋಪುರದಿ ಪೂಜೆ, ಮನೆ ದೇವರಲಿ ಹರಕೆ
ಕಂದನಿಗೆ ಗುಣಮಾಡು, ನಗುತರಿಸು ಮೊಗಕೆ

ಅಪಾರ ಪ್ರೀತಿಯ ಮೊಗೆದು ಬೊಗಸೆಯಲಿ ತುಂಬಿ
ಮಮಕಾರ ತೋರಿ ಮುತ್ತಿನ ಮಳೆ ಸುರಿಸಿ
ನೋವುಗಳ ನುಂಗಿ, ಸಂತಸವ ಉಣಬಡಿಸಿ
ಕಣ್ಣೀರನು ಮರೆಸಿ, ನೋವನ್ನು ತೊರೆಸಿ

ಕೂಸದು ಗೆದ್ದಾಗ ನೀನೂ ಸಂಭ್ರಮಿಸಿ
ಸಿಹಿಯೂಟ ಪ್ರೋತ್ಸಾಹ, ಕಂದನಿಗೆ ಹರಸಿ
ನಿನ್ನೊಲುಮೆಯ ಧಾರೆ ಹರಿದಿರಲಿ ನಿರಂತರ
ನೀಜೊತೆಯಲಿದ್ದರೆ ಸಂಭ್ರಮದ ಸಡಗರ
                                                                                                      Posted by Prashanth Urala. G

ಗುರುವಾರ, ಫೆಬ್ರವರಿ 14, 2019

ಸ್ವಾಮಿ ವಿವೇಕಾನಂದ ರವರ 18 ಉಲ್ಲೇಖಗಳು

       ಸ್ವಾಮಿ ವಿವೇಕಾನಂದರ ಮೂಲ ನಾಮ ನರೇಂದ್ರನಾಥ ದತ್ತ ಅವರು 1863 ಜನವರಿ 13 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಬದುಕಿದ್ದು ಕೆಲವೇ ವರ್ಷಗಳಾದರೂ ಅವರ ಬದುಕು ಮತ್ತು ಅವರ ತತ್ವಗಳು ಇಡೀ ಜಗತ್ತಿಗೆ ಮಾದರಿಯಾಗಿದೆ. ಯುವ ಜನತೆಗೆ ಅವರೊಬ್ಬ ಮಾದರಿ ವ್ಯಕ್ತಿ ಆಗಿದ್ದಾರೆ. ಅವರು ಹುಟ್ಟು ಸನ್ಯಾಸಿಯಾಗಿರಲಿಲ್ಲ. ಕೇವಲ 7 ವರ್ಷಗಳಲ್ಲಿ ಇಡೀ ಪ್ರಪಂಚದ ಗಮನ ಸೆಳೆದರು. ಅವರೊಬ್ಬ ಪ್ರತಿಭಾ ಗಣಿ. ಅವರ ಉಲ್ಲೇಖಗಳನ್ನು ಓದುತ್ತಿದ್ದರೆ ಮನಸ್ಸು ನಿರ್ಮಳಗೊಳ್ಳುತ್ತದೆ. ಇಲ್ಲಿದೆ ಅಂತಹ ಕೆಲವೊಂದು ಉಲ್ಲೇಖಗಳು.

1. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.

2. ಜ್ಞಾನ ನಮ್ಮ ಮಧ್ಯ ಇರುತ್ತದೆ ಆದರೆ ನಾವು ಅದನ್ನು ಹುಡುಕಿ ಅನಾವರಣಗೊಳಿಸುವ ಕಡೆ ಗಮನ ಹರಿಸಬೇಕು.

3. ಮನಸಿನಂತೆ ಮಹಾದೇವ ಯಾವುದೇ ವಿಚಾರ ಮನಸ್ಸಿಗೆ ಗಾಢವಾಗಿ ತಾಕಿದಾಗ ಅದು ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಆವಾಗಲೇ ವಾಸ್ತವಿಕ, ಭೌತಿಕ, ಮಾನಸಿಕ ಪರಿವರ್ತನೆ ಕಂಡು ಬರುತ್ತದೆ.

4. ನಿಮ್ಮ ತಪ್ಪಿಗೆ ಬೇರೆಯವರನ್ನು ದೂರುವಂತೆ ಮಾಡಬೇಡಿ, ಅದರ ಬದಲಿಗೆ ನಿಮ್ಮ ಹೊಣೆಗಾರಿಕೆಯನ್ನು ನೀವೇ ಧೈರ್ಯವಾಗಿ ವಹಿಸಿಕೊಳ್ಳಿ ಮತ್ತು ತಪ್ಪನ್ನು ಒಪ್ಪಿಕೊಳ್ಳಿ. ನಾನು ಅನುಭವಿಸುತ್ತಿರುವ ದುಃಖ ಸಂಕಟಗಳಿಗೆ ನನ್ನ ದುಷ್ಕರ್ಮಗಳೇ ಕಾರಣ ಆದುದರಿಂದ ಅವುಗಳನ್ನು ಸರಿಪಡಿಸಿಕೊಳ್ಳಬೇಕಾದವನು ನಾನೇ ಎಂದು ಹೇಳಿ.

5. ದುಡ್ಡು ನಿಮ್ಮ ಕೈಸೇರುವುದು ಅಥವಾ ಇಲ್ಲವೋ ಅದು ನಿಮ್ಮ ಜೀವನದ ದೈಯ್ಯ ಅಲ್ಲ, ನಿಮ್ಮ ಸಾವು ಈಗಲೇ ಆಗಬಹುದು ಅಥವಾ ಯಾವಾಗಲಾದರೂ ಆಗಬಹುದು ಆದರೆ ಅನ್ಯಾಯದ ದಾರಿಯಲ್ಲಿ ಸಾಗದೆ ನ್ಯಾಯ ದಾರಿಯಲಿ ಸಾಗುವುದು ನಿಮ್ಮ ಜೀವನದ ಗುರಿ ಆಗಿರಬೇಕು.

6. ನೀವು ನಿಮ್ಮ ಮೇಲೆ ನಂಬಿಕೆ ಇಡುವ ತನಕ ನೀವು ದೇವರನ್ನು ನಂಬಲು ಸಾಧ್ಯವಿಲ್ಲ

7. ಶಕ್ತಿಯೆ ಜೀವನ ದೌರ್ಬಲ್ಯವೇ ಸಾವು.

8. ನಮ್ಮ ಪಾಲಿಗೆ ಬರುವ ಯಾವುದೇ ಕೆಲಸವಾದರೂ ಖುಷಿ ಪಡುವವನೆ ನಿಜವಾದ ಕಾರ್ಯಕುಶಲ.

9. ಇಡೀ ವಿಶ್ವವೇ ಒಂದು ವ್ಯಾಯಾಮ ಶಾಲೆ ಅಲ್ಲಿ ತಮ್ಮನ್ನು ತಾವೇ ಸಾಣೆ ಹಿಡಿದುಕೊಂಡು ಸದೃಢಗೊಳಿಸಿಕೊಳ್ಳಬೇಕು

10. ನಮಗೆ ಬೇಕಾದ ಸುಖ, ಶಕ್ತಿ, ರಕ್ಷಣೆ , ಜ್ಞಾನ ಇವೆಲ್ಲವೂ ಎಲ್ಲಿಂದಾನು ಬರುತ್ತದೆ ಎಂದು ಕಾಯುತ್ತಾ ಕುಳಿತಿಕೊಳ್ಳುವುದು ಸರಿಯಲ್ಲ ಕೇವಲ ಕಾಯುತ್ತಾ ಕುಳಿತರಬೇಕು ಅಷ್ಟೇ ಅದು ಎಲ್ಲಿಂದನು ಬರುವುದಿಲ್ಲ ಮತ್ತು ಯಾವುದು ಈಡೇರುವುದಿಲ್ಲ. ನಿಜ ಯಾವುದೇ ಸಹಾಯವೂ ಹೊರಗಿನಿಂದ ಬರುವಂತಹುದೇ ಅಲ್ಲ.

11. ಸಾದ್ಯವಾದರೆ ಸಹಾಯ ಮಾಡಿ ಇಲ್ಲವಾದರೆ ಅವರನ್ನು ಅವರ ಪಾಲಿಗೆ ಸಾಧನೆ ಮಾಡಲು ಬಿಡಿ.

12. ನಮ್ಮ ನೈತಿಕತೆ ಎಷ್ಟು ಉನ್ನತವಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದಾಗಿರುತ್ತದೆ.

13. ಶಿಕ್ಷಕನಾದವನು ಯಾವುದೇ ಸ್ವಾರ್ಥ ಇಟ್ಟುಕೊಂಡು ಹಣಕ್ಕಾಗಿ, ಹೆಸರಿಗಾಗಿ ಅಥವಾ ಪ್ರಸಿದ್ಧಿಗಾಗಿ ಭೋದನೆ ಮಾಡಬಾರದು ಇಂತಹ ಉದ್ದೇಶಗಳು ಶಿಕ್ಷಕನ ಸಂವಹನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

14. ಅನುಭವ ಜಗತ್ತಿನ ಸರ್ವಶ್ರೇಷ್ಟ ಶಿಕ್ಷಕ ಉಸಿರಿರುವರೆಗೂ ಕಲಿಕೆ ಮತ್ತು ಜ್ಞಾನಾರ್ಜನೆ ಜೀವನದ ಗುರಿಯಾಗಿರಬೇಕು.

15. ಏಳಿ ಎದ್ದೇಳಿ ಗುರಿಯತ್ತ ಸಾಗಿ, ಏಳಿ ಎದ್ದೇಳಿ ಗುರಿ ತಲುಪುವವರೆಗೂ ನಿಲ್ಲದಿರಿ.

16. ನಾವು ದೇವರನ್ನು ಕಾಣಬೇಕಾದರೆ ಮೊದಲು ಮಾನವನ ಸೇವೆ ಮಾಡಬೇಕು.

17. ದಿನಕ್ಕೆ ಒಂದು ಬಾರಿಯಾದರೂ ನೀವು ನಿಮ್ಮ ಜೊತೆ ಮಾತನಾಡಿಕೊಳ್ಳಿ ಇಲ್ಲದಿದ್ದರೆ ಪ್ರಪಂಚದ ಅತ್ಯುತಮ್ಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನು ತಪ್ಪಿಸಿಕೊಳ್ಳುವಿರಿ.

18. ಎಲ್ಲ ಶಕ್ತಿ ನಿಮ್ಮೊಳಗೆ ಇದೆ ನೀವು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದು.

ಭಾನುವಾರ, ಫೆಬ್ರವರಿ 03, 2019

ಗುಡ್ ಮಾರ್ನಿಂಗ್ / ಲಾಸ್ಟ್ ವಾರ್ನಿಂಗ್

ಅಂದು ಒಂದು ಹುಡುಗಿಗೆ ಹೇಳಿದೆ "ಗುಡ್ ಮಾರ್ನಿಂಗ್"..

ಅಂದು ಒಂದು ಹುಡುಗಿಗೆ ಹೇಳಿದೆ "ಗುಡ್ ಮಾರ್ನಿಂಗ್"..

* *
ಆದರೆ, ಅವಳಪ್ಪ ಹೇಳಿದ ಇಂದು, ಇದೇ ನಿಂಗೆ "ಲಾಸ್ಟ್ ವಾರ್ನಿಂಗ್"

ಧರ್ಮರಾಯ ಹೇಳಿದ್ದು

ಮಹಾಭಾರತದಲ್ಲಿ ಒಮ್ಮೆ ಧರ್ಮರಾಯ ಹೇಳಿದ್ದು

" ಎಲ್ಲರೂ ಸಾಯಲೇ ಬೇಕು, ಆದರೆ ಸಾವನ್ನು ಯಾರೂ ಬಯಸುವುದಿಲ್ಲ."

ಈ ಮಾತನ್ನೇ ಇಂದಿನ ಭಾರತದ ಪರಿಸ್ಥಿತಿಯಲ್ಲಿ ಹೀಗೆ ಹೇಳ ಬಹುದಲ್ಲವೇ...

* ನೀರು ಎಲ್ಲರಿಗೂ ಬೇಕು ಆದರೆ ನೀರನ್ನು ರಕ್ಷಿಸ ಬಯಸುವುದಿಲ್ಲ.
* ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ಬೆಳೆಸಲು ಬಯಸುವುದಿಲ್ಲ.
* ಆಹಾರ ಎಲ್ಲರಿಗೂ ಬೇಕು ಆದರೆ ವ್ಯವಸಾಯ ಮಾಡಲು ಬಯಸುವುದಿಲ್ಲ.
* ಸೊಸೆ / ಪತ್ನಿ ಎಲ್ಲರಿಗೂ ಬೇಕು ಆದರೆ ಮಗಳನ್ನು ಬಯಸುವುದಿಲ್ಲ.
* ಹಾಲು ಎಲ್ಲರಿಗೂ ಬೇಕು ಆದರೆ ಹಸುಗಳ ಸಂರಕ್ಷಣೆ ಮಾಡ ಬಯಸುವುದಿಲ್ಲ.
* ಅಧಿಕಾರ ಎಲ್ಲರಿಗೂ ಬೇಕು ಆದರೆ ಕಾರ್ಯ ಮಾಡ ಬಯಸುವುದಿಲ್ಲ.
* ಸರ್ಕಾರಿ ನೌಕರಿ ಎಲ್ಲರಿಗೂ ಬೇಕು ಆದರೆ ಸರ್ಕಾರಿ ಶಾಲೆಗೆ ಪ್ರವೇಶ ಬಯಸುವುದಿಲ್ಲ............
ಏನಂತೀರ....ನೀವು.....?

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು