fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಮಾರ್ಚ್ 28, 2014

ಅಮ್ಮ ಮತ್ತು ಯುಗಾದಿ


ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ವ್ಯುತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ, ಎಂದು.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ." ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ(ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.
ಯುಗಾದಿ ಶುಭಾಶಯ ಕೋರುವ ಶುಭಾಶಯ ಪತ್ರ

ಹಬ್ಬದ ಆಚರಣೆಯ ವಿಧಾನ

ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.
ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೇಷ ತಿನಿಸು - ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಈಗೀಗ ಟಿವಿಯಲ್ಲಿ ಕವಿಗೋಷ್ಠಿಯೂ ಪ್ರಸಾರ ಮಾಡುವರು.
ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.

ಬೇವು-ಬೆಲ್ಲ

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.
ಬೇವು- ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.

ಮಂಗಳವಾರ, ಮಾರ್ಚ್ 25, 2014

ಎಂದು ಬಂದೀತು ಪರಿವರ್ತನ ಕಾಲ?


ನಿಮಗೆ ಯಾವ ಕಾಲ ಇಷ್ಟ? ಚಳಿಗಾಲವೇ? `ಅಯ್ಯೋ ಚಳಿಗಾಲವೇ? ನಡುಗುವ ಚಳಿಯಲ್ಲಿ ಹೊರ ಹೋಗಲು ಮನಸ್ಸೇ ಬಾರದೆ, ಹೊದ್ದುಕೊಂಡು ಮಲಗಬೇಕು ಎನ್ನಿಸುತ್ತದೆ. ಚಳಿಗಾಲದ ಶುಷ್ಕ ಗಾಳಿಯಿಂದ ತ್ವಚೆ ಒಣಗಿ, ತುಟಿ ಬಿರಿದು ಕಿರಿಕಿರಿಯಾಗುತ್ತದೆ ಅಲ್ಲವೇ?
ಹಾಗಾದರೆ ಬೇಸಿಗೆ ಕಾಲ?
`ಅಯ್ಯೋ ರಾಮ ಬೇಸಿಗೆಯ ಧಗೆ, ಉರಿ ಬಿಸಿಲು, ಬಿಸಿ ಗಾಳಿ. ನರಕ ಯಾತನೆ. ಯಾರಿಗೆ ಬೇಕಪ್ಪ? ಬೇಡವೇ ಬೇಡ. ನೆನಪಿಸಿಕೊಳ್ಳುವುದೂ ಬೇಡ. ಇನ್ನು ಮಳೆಗಾಲ ಇಷ್ಟ ಅಲ್ಲವೇ? `ಅಯ್ಯೋ ಜಿಟಿ ಜಿಟಿ ಮಳೆ ಹತ್ತಿದರೆ ಸಾಕು ಹೊರ ಹೋಗುವುದಿರಲಿ, ನಿತ್ಯದ ಕೆಲಸಗಳಿಗೂ ತೊಂದರೆ. ಮಳೆ ಕಡಿಮೆಯಾದ ಈ ದಿನಗಳಲ್ಲಿ ಹೊರಡುವಾಗ ಕೊಡೆ ಕೊಂಡೋಗುವುದನ್ನು ಮರೆತೇ ಬಿಟ್ಟಿದ್ದೇವೆ. ಅಂಥ ಸಮಯದಲ್ಲೇ ಅಚಾನಕ್ಕಾಗಿ ಬರುವ ಮಳೆ. ಜೊತೆಗೆ ಅಕಾಲ ಮಳೆ ಮತ್ತು ನಗರ ಪ್ರದೇಶಗಳಲ್ಲಿ ಚರಂಡಿ ನೀರು ಮನೆಗೇ ನುಗ್ಗುವ ನರಕಯಾತನೆ.
ಹಾಗಾದರೆ ಯಾವ ಕಾಲ ಮನಕ್ಕೆ ಮುದ ನೀಡುತ್ತದೆ?
ಪರಿವರ್ತನಾ ಕಾಲ! ಹೌದು. ಏನಿದು ಪರಿವರ್ತನ ಕಾಲ? ಮೂರೂ ಕಾಲಗಳ ನಡು ನಡುವೆ ಬರುವುದೇ ಪರಿವರ್ತನ ಕಾಲ (ಟ್ರಾನ್ಸಿಷನ್ ಪೀರಿಯಡ್).
ಚಳಿಗಾಲದಿಂದ ಬೇಸಿಗೆ ಕಾಲಕ್ಕೆ, ಬೇಸಿಗೆಯಿಂದ ಮಳೆಗಾಲಕ್ಕೆ, ನಂತರ ಮಳೆಗಾಲದಿಂದ ಚಳಿಗಾಲಕ್ಕೆ... ಹೀಗೆ ಒಂದು ಕಾಲದಿಂದ ಮತ್ತೊಂದಕ್ಕೆ ನಮ್ಮನ್ನು ಕೊಂಡೊಯ್ಯುವುದೇ ಪರಿವರ್ತನ ಕಾಲ.
ಈ ಕಾಲ ಮನಸ್ಸನ್ನು ಮುದಗೊಳಿಸುವ ಆಹ್ಲಾದವನ್ನು ನೀಡುತ್ತದೆ. ಬೇಸಿಗೆಯಿಂದ ಮಳೆಗಾಲದ ನಡುವಿನ ಪರಿವರ್ತನ ಕಾಲವನ್ನು ತೆಗೆದುಕೊಂಡರೆ, ಬಿಸಿಲ ಬೇಗೆಯಿಂದ ದಣಿದ ದೇಹ- ಮನಸ್ಸಿಗೆ ಹಿತವಾದ ತೇವ ಮಿಶ್ರಿತ ತಂಗಾಳಿಯು ಮಳೆಯ ಮಣ್ಣಿನ ಸುವಾಸನೆಯನ್ನು ತಂದು ಹಾಯ್ ಎನಿಸುವಂತೆ ಮಾಡುತ್ತದೆ.
ಎಲ್ಲ ಸಂಕಷ್ಟಗಳೂ ಬಗೆಹರಿದವೇನೋ ಎನಿಸುವ ಹಿತಾನುಭವ. ಜೊತೆಗೆ ಜಿನುಗುವ ಮುಂಗಾರು ಮಳೆಯಲ್ಲಿ `ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...' ಎಂದು ಹಾಡಿ ಕುಣಿಯುವ ಆಸೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಉಂಟಾಗುತ್ತದೆ. ಈ ಖುಷಿಯನ್ನು ಇಮ್ಮಡಿಗೊಳಿಸಲು ಆಗಸದಲ್ಲಿ ಕಾಮನಬಿಲ್ಲೂ ಪ್ರತ್ಯಕ್ಷವಾಗುತ್ತದೆ.
ಇನ್ನು ಮಳೆಗಾಲದಿಂದ- ಚಳಿಗಾಲದ ನಡುವಿನ ಪರಿವರ್ತನ ಕಾಲ. ಇಲ್ಲಿ ಗಾಳಿಯಲ್ಲೇನೋ ಬದಲಾವಣೆಯಾದ ಸುಖದ ಅನುಭವ. ಅದೇ ಮೂಡ್ಗಾಳಿ. ಇದು ನಮ್ಮನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿದ ಅನುಭವ ಕಟ್ಟಿಕೊಡುತ್ತದೆ.
ಈ ಚಳಿಗಾಲದ ಆರಂಭದಲ್ಲಿ ಕೆಲವು ವಿಶೇಷ ಹೂಗಳು ಅರಳುತ್ತವೆ. ಅದರಲ್ಲಿ ಆಕಾಶ ಮಲ್ಲಿಗೆ, ಸಂಜೆ ಮಲ್ಲಿಗೆ ಸೇರಿವೆ. ಆಕಾಶ ಮಲ್ಲಿಗೆಯ ಸುಗಂಧವು ಈ ಸಮಯದಲ್ಲಿ ತಂಪಾದ ಗಾಳಿಯೊಡನೆ ತೇಲಿ ಬಂದು ಹಿತಾನುಭವ ಕೊಟ್ಟು, ಆಕಾಶದಲ್ಲಿ ತೇಲಾಡಿದಂತೆ ಖುಷಿ ಕೊಡುತ್ತದೆ.
ಇನ್ನು ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಪರಿವರ್ತನೆಗೊಳ್ಳುವ ಕಾಲದಲ್ಲಿ, ಚಳಿಯಿಂದ ನಡುಗಿ ಕುಳಿತ ದೇಹ- ಮನಸ್ಸಿಗೆ ಅತ್ತ ತೀವ್ರ ಚಳಿಯೂ ಅಲ್ಲದ ಇತ್ತ ಬಿರು ಬಿಸಿಲ ಸೆಖೆಯೂ ಅಲ್ಲದ ಸಮತೋಲನದ ಉಷ್ಣತೆ ವಾತಾವರಣವನ್ನು ವ್ಯಾಪಿಸುತ್ತದೆ. ಈ ಕಾಲದಲ್ಲೂ ಅನೇಕ ಹೂಗಳು ಅರಳುತ್ತವೆ. ಆದರೆ ನನಗೆ ಮಾತ್ರ ಅತಿ ವಿಶೇಷವಾದ ಉಲ್ಲಸಿತ ಅನುಭವ ಕೊಡುವುದು ಬೇವಿನ ಹೂ! ಹೌದು ಈ ಬೇವಿನ ಕಂಪು ತಂಪಾದ, ವಿಸ್ಮಯದ ಅನುಭವ ಕೊಡುತ್ತದೆ. ಬೇವಿನ ಮರದ ಎಲೆಗಳು ಚಳಿಗಾಲದಲ್ಲಿ ಒಣಗಿ ಉದುರುತ್ತಾ ಬಂದಿರುವಾಗ, ಪರಿವರ್ತನ ಕಾಲದಲ್ಲಿ ಮತ್ತೆ ಮರ ನಿಧಾನವಾಗಿ ಕೆಂಪು ಎಲೆ, ಚಿಗುರುಗಳ ಜೊತೆಗೆ ಆ ವಿಶಿಷ್ಟ ಬೇವಿನ ಹೂಗಳನ್ನು ಅರಳಿಸುತ್ತದೆ. ಆಗ ಹೊರಡುವ ಬೇವಿನ ಹೂವಿನ ಸುವಾಸನೆ ವರ್ಣನಾತೀತ!
ಉತ್ತರ ಕರ್ನಾಟಕದಂತಹ ಪ್ರದೇಶದಲ್ಲಿರುವ ನನಗೇ ಇಂತಹ ಅನುಭವ ಈ ಬಗೆಯ ಪ್ರಕೃತಿ ವಿಸ್ಮಯದಿಂದ ಆದರೆ, ಇನ್ನು ಮಲೆನಾಡ ಮಂದಿಗೆ ಎಂತಹ ಖುಷಿ ಕೊಡಬಹುದು ಈ ಪರಿವರ್ತನ ಕಾಲ ಅಲ್ಲವೇ?
ಆದರೆ, ಎಲ್ಲ ಕಡೆಯೂ ಕಾಡು ನಾಶ, ಕೃಷಿ ಭೂಮಿ ಒತ್ತುವರಿ, ನಗರೀಕರಣ, ಕಾರ್ಖಾನೆಗಳು ವಿಸರ್ಜಿಸುವ ತ್ಯಾಜ್ಯ, ವಾಹನಗಳ ತ್ಯಾಜ್ಯದ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಅವ್ಯಾಹತ ದರೋಡೆ ನಡೆಯುತ್ತಿರುವುದರಿಂದ, ನಾವು ಇಂದು ಬರೀ ಬಿರು ಬಿಸಿಲ ಬೇಸಿಗೆ ಕಾಲವೊಂದನ್ನೇ ಹೆಚ್ಚಾಗಿ ಅನುಭವಿಸುತ್ತಿದ್ದೇವೆ. ಪ್ರಕೃತಿಯನ್ನು ಉಳಿಸಲು, ಅದರ ಹಿತವಾದ, ವಿಸ್ಮಯ ಕಾಲಗಳ ಸವಿಯನ್ನು ಅನುಭವಿಸಲು ನಮ್ಮಲ್ಲೂ ಒಳ್ಳೆಯ `ಪರಿವರ್ತನೆ' ಆಗುವ ಕಾಲ ಬರಬಾರದೇ?
                                                                                  => ಈ ಅಂಕಣ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪುಟಗಳವೀಕ್ಷಣೆ ಮಾಡಿದವರು



ಶುಕ್ರವಾರ, ಮಾರ್ಚ್ 21, 2014

ಮರೆಯಲಾಗದ ನೆನಪು

ಅಳಿಸಲಾಗದ ಚಿತ್ರ ಪ್ರಕೃತಿ
ಕದಿಯಲಾಗದ ವಸ್ತು ವಿದ್ಯೆ
ಸೋಲಿಸಲಾಗದ ಶಕ್ತಿ ಸತ್ಯ
ಬಿಡಿಸಲಾಗದ ಬಂಧನ ಪ್ರೇಮ
ಮರೆಯಲಾಗದ ನೆನಪು ಸ್ನೇಹ.....