fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ನವೆಂಬರ್ 28, 2017

ಧರ್ಮ - ಅಧರ್ಮ


ಧರ್ಮ ಮತ್ತು ಅಧರ್ಮದ
ಯುದ್ದದಲ್ಲಿ ಮೊದಲಿಗೆ
ಅಧರ್ಮಕ್ಕೆ ಜಯ ಕಂಡರೂ
ಕೊನೆಯಲ್ಲಿ ಧರ್ಮವೇ ಗೆಲ್ಲುವುದು.

ಶುಕ್ರವಾರ, ನವೆಂಬರ್ 24, 2017

ತಿಳಿ

ಅರಿಯುವಿಕೆಯ ಪ್ರಕ್ರಿಯೆ
ಜ್ಞಾನಿಗಳ ತಳಿಯಲ್ಲಿ ಬರುವ ವಂಶವಾಹಿ
ತಿಳಿದವನು ಯಾವತ್ತೂ ತಿಳಿತಿಳಿಯಾಗಿರುತ್ತಾನೆ
ಹೆಚ್ಚು ತಿಳಿದಂತೆಲ್ಲ ಕಷ್ಟಗಳೇ ಹೆಚ್ಚು
ನಿಜವಾದ ತಿಳುವಳಿಕೆ ಮೂಡುವುದು ಕಲಿಯುವುದು ಬಿಟ್ಟ ಮೇಲೆಯೇ
ಕುತೂಹಲದ ಕಣ್ಣಿನವಗೆ ತಿಳಿಯಲು ಎಲ್ಲೆಲ್ಲೂ ಅವಕಾಶವಿರುತ್ತದೆ
ಹೆಚ್ಚು ತಿಳಿ, ಕಡಿಮೆ ಕಳಿ
ಅರಿತವಗೆ ಅರಿಗಳೆಲ್ಲ ದೂರ
ಅನಿವಾರ್ಯತೆ ಮತ್ತು ಸೋಲು ತಂದು ಕೊಡುವ ಬಳುವಳಿ
ತೊಡಲು ಅರಿವೆ ಇಲ್ಲದಿದ್ದರೂ ಅರಿವುದನು ಬಿಡಬಾರದು
ಬೇರೆಯವರು ನಿಮ್ಮನ್ನು ದಡ್ಡ ಎಂದು ಹಳಿಯುವುದನ್ನು ತಪ್ಪಿಸಲು ತಿಳಿದುಕೊಳ್ಳುವುದೊಂದೇ ಪರಿಹಾರ
ಹಳಿ ತಪ್ಪದಂತೆ ತಡೆಯುವ ತಡೆ ಗೋಡೆ
ತಿಳಿದವ ಬೆಳೆವ

-ವಿಶ್ವನಾಥ ಸುಂಕಸಾಳ

ಬುಧವಾರ, ನವೆಂಬರ್ 22, 2017

ಅಮ್ಮ ಹಚ್ಚಿದೊಂದು ಹಣತೆ

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ ।।

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು
ದೂರದಲ್ಲಿ ತೀರವಿದೆ
ಎಂದು ತೋರಲು ।। ಅಮ್ಮ ।।

ಕೃತಕ ದೀಪ ಕತ್ತಲಲ್ಲಿ
ಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ ।। ಅಮ್ಮ ।।

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ತುಂಬಲು
ಮಿಡಿದ ಹಾಗೆ ವೀಣೆ ।। ಅಮ್ಮ ।।

ಸಾಹಿತ್ಯ – M R ಕಮಲ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

ಸೋಮವಾರ, ನವೆಂಬರ್ 20, 2017

ಬೇಟೆಗಾರ ಬಂದ



ಬೇಟೆಗಾರ ಬಂದ
ಬಿಲ್ಲು ಬಾಣ ತಂದ

ಕಾಡು ಹಂದಿ ಕೊಂದ
ಬೆಂದ ಹಂದಿ ತಿಂದ

ಹೊಟ್ಟೆ ನೋವು ಅಂದ
ಮರದ ಕೆಳಗೆ ಬಿದ್ದ
 
ಹುಲಿರಾಯ ಬಂದ
ಹೊಟ್ಟೆ ತುಂಬ  ತಿಂದ
 
ಹುಲಿರಾಯ ಬಂದ
ಹೊಟ್ಟೆ ತುಂಬ ತಿಂದ

ಶನಿವಾರ, ನವೆಂಬರ್ 18, 2017

ಆಧಾರ್ ಕಾರ್ಡ್ (Aadhar Card)

ಈಗ ಎಲ್ಲದಕ್ಕೂ ಆಧಾರ್ ಕಾರ್ಡ್ ಎಂಬುದು ಆಧಾರವೇ ಆಗುತ್ತಿದೆ.


ಸಿಮ್ (ಮೊಬೈಲ್‌ಗೆ) ಲಿಂಕ್ ಮಾಡುವುದು
ಇದು ಕೂಡ ಕಡ್ಡಾಯ. ಸಿಮ್ ಕಾರ್ಡ್ ತೆಗೆದುಕೊಂಡಾಗಲೇ ಆಧಾರ್ ಕಾರ್ಡ್ ಮೂಲಕವೇ ಮೊಬೈಲ್ ನಂಬರ್ ಆ್ಯಕ್ಟಿವೇಶನ್ ಮಾಡಿದವರಿಗೆ ಇದರ ಅಗತ್ಯ ಇರುವುದಿಲ್ಲ. ತುಂಬಾ ಹಿಂದೆ ಸಿಮ್ ಕಾರ್ಡ್ ಖರೀದಿಸಿದವರು ಲಿಂಕ್ ಮಾಡಲೇಬೇಕು. ಏನು ಮಾಡಬೇಕೆಂದರೆ, ಆಧಾರ್ ಕಾರ್ಡ್‌ನ ಪ್ರತಿ ಹಾಗೂ ನಿಮ್ಮ ಮೊಬೈಲ್ ಫೋನ್ ಜತೆಗೆ ಆಯಾ ಮೊಬೈಲ್ ಕಂಪನಿಗಳ (ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಐಡಿಯಾ, ಜಿಯೋ ಮುಂತಾದ) ಸೇವಾ ಕೇಂದ್ರಗಳಿಗೆ ಹೋದರೆ ಅವರೇ ಲಿಂಕ್ ಮಾಡುತ್ತಾರೆ. ಮಧ್ಯವರ್ತಿಗಳಿಗೆ ನಿಮ್ಮ ಆಧಾರ್ ಕಾರ್ಡ್ ಕೊಡಬೇಡಿ. ಸೇವಾ ಕೇಂದ್ರಗಳಲ್ಲಿ ನಿಮ್ಮ ಕೈಬೆರಳಿನ ಸ್ಕ್ಯಾನ್ ಮಾಡಲಾಗುತ್ತದೆ (ಇದು ಬಯೋಮೆಟ್ರಿಕ್ ಮಾಹಿತಿಯ ದೃಢೀಕರಣಕ್ಕಾಗಿ). ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಅಲ್ಲಿನ ಸಿಬ್ಬಂದಿಗೆ ಕೊಡಬೇಕು. ಒಂದೆರಡು ದಿನಗಳೊಳಗೆ ದೃಢೀಕರಣ ಸಂದೇಶ ಬರುತ್ತದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡುವುದು ಸಾಧ್ಯವಿಲ್ಲ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು
ಬ್ಯಾಂಕ್ ಖಾತೆ ಮತ್ತು ಮೊಬೈಲ್ ನಂಬರ್ ಒಂದನ್ನು ಬಿಟ್ಟು ಇನ್ನೊಂದು ಹೇಗೆ ಇರಲಾರದೋ, ಅದೇ ರೀತಿ ಈಗ ಆಧಾರ್ ಮತ್ತು ಬ್ಯಾಂಕ್ ಖಾತೆಗೂ ಅವಿನಾಭಾವ ಸಂಬಂಧವೇರ್ಪಟ್ಟಿದೆ. ಇದು ಅನಿವಾರ್ಯವೂ ಆಗಿದೆ. ಇದಕ್ಕಾಗಿ ಎಲ್ಲ ಬ್ಯಾಂಕುಗಳೂ ಕಾರ್ಯತತ್ಪರವಾಗಿದ್ದು, ಗ್ರಾಹಕರಿಗೆ ಮೊಬೈಲ್ ಸಂದೇಶಗಳನ್ನು ಕಳುಹಿಸುತ್ತಲೇ ಇವೆ. ನೆಟ್ ಬ್ಯಾಂಕಿಂಗ್ ವ್ಯವಸ್ಥೆಗೆ ನೋಂದಾಯಿಸಿಕೊಂಡವರು ಆನ್‌ಲೈನ್‌ನಲ್ಲಿಯೇ ಇವುಗಳನ್ನು ಲಿಂಕ್ ಮಾಡಿಕೊಳ್ಳಬಹುದು.

ನೆಟ್ ಬ್ಯಾಂಕಿಂಗ್ ಮೂಲಕ ಲಿಂಕಿಂಗ್ ಹೇಗೆ?
ನಿಮ್ಮ ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಿ. ಅದರ ಮೆನುವಿನಲ್ಲಿ ಆಧಾರ್ ಸೀಡಿಂಗ್, ಲಿಂಕ್ ಆಧಾರ್, ಆಧಾರ್ ಲಿಂಕಿಂಗ್ ಹೀಗೆ ಯಾವುದಾದರೂ ವಾಕ್ಯ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ನಮೂದಿಸಿ. ಆಧಾರ್‌ಗೆ ಅದಾಗಲೇ ಲಿಂಕ್ ಆಗಿರುವ ಮೊಬೈಲ್ ಫೋನ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ. ಆಧಾರ್ ವಿವರಗಳು ಕಾಣಿಸುತ್ತವೆ. ಆಧಾರ್‌ನಲ್ಲಿರುವ ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹೆಸರು, ಸ್ಪೆಲ್ಲಿಂಗ್ ಮತ್ತಿತರ ವಿವರಗಳು ತಾಳೆಯಾದರೆ ಲಿಂಕ್ ಆಗುತ್ತದೆ. ಇದು ಆನ್‌ಲೈನ್‌ನಲ್ಲಿ ನೀವೇ ಮಾಡಿಕೊಳ್ಳಬಹುದಾದ ವಿಧಾನ. ನೆಟ್ ಬ್ಯಾಂಕಿಂಗ್ ಖಾತೆ ಇಲ್ಲದಿದ್ದವರು ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಹೋಗಿ, ನಿಗದಿತ ಅರ್ಜಿಯನ್ನು ತುಂಬಿದರೆ ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ ಮಾಡಲಾಗುತ್ತದೆ. ಸರಕಾರದಿಂದ ಬರುವ ಯಾವುದೇ ರೀತಿಯ ಸವಲತ್ತುಗಳು ನಗದು ರೂಪದಲ್ಲಿ ಬರಬೇಕಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದು ಕಡ್ಡಾಯ.

ಆಧಾರ್ ಲಿಂಕ್: ಈ ಡೆಡ್‌ಲೈನ್ ನೆನಪಿಡಿ
*ಡಿಸೆಂಬರ್ 31, 2017*
  1. ಪ್ಯಾನ್ ಕಾರ್ಡ್,
  2. ಬ್ಯಾಂಕ್ ಖಾತೆಗಳು,
  3. ಪಿಪಿಎಫ್,
  4. ಪೋಸ್ಟ್ ಆಫೀಸ್ ಖಾತೆ,
  5. ಕಿಸಾನ್ ವಿಕಾಸಪತ್ರ,
  6. ನ್ಯಾಷನಲ್ ಸೇವಿಂಗ್ಸ್ ಸ್ಕೀಮ್,
  7. ಮ್ಯೂಚುವಲ್ ಫಂಡ್,
  8. ಎಲ್‌ಪಿಜಿ,
  9. ಪಿಂಚಣಿ ಯೋಜನೆಗಳು,
  10. ವಿದ್ಯಾರ್ಥಿ ವೇತನ
*ಫೆಬ್ರವರಿ 06, 2018*
ಮೊಬೈಲ್ ಸಿಮ್ ಕಾರ್ಡ್
***************************************
      ಈಗಿನ ಡಿಜಿಟಲ್ ಯುಗದ ಅನಿವಾರ್ಯತೆಗಳು ಪದೇ ಪದೇ ಮೊಬೈಲ್ ನಂಬರ್ ಬದಲಾಯಿಸದಂತೆಯೂ ನಿಮ್ಮನ್ನು ಕಟ್ಟಿ ಹಾಕುತ್ತಿವೆ. ಯಾಕೆಂದರೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಿಗೆ ಈ ಮೊಬೈಲ್ ನಂಬರ್‌ನ ಅಗತ್ಯವಿರುತ್ತದೆ. ಹೀಗಾಗಿ ಭಾರಿ ಆಫರ್‌ಗಳಿಗೆ ಮನಸೋತು ಸಿಮ್ ಕಾರ್ಡ್ ತೆಗೆದುಕೊಳ್ಳುವ ಮೊದಲು, ಒಂದು ಸಿಮ್ ಕಾರ್ಡ್ (ಮೊಬೈಲ್ ನಂಬರ್) ಶಾಶ್ವತವಾಗಿ ಇರುವಂತೆ ನೋಡಿಕೊಳ್ಳುವುದು ಈಗಿನ ಅಗತ್ಯ.

ಸೂಚನೆ: ಡೆಡ್‌ಲೈನ್ ಬಂದಾಗ ವಿಪರೀತ ಜನಜಂಗುಳಿ ಇರುವುದರಿಂದ ಈಗಲೇ ಇವನ್ನು ಮಾಡಿಸಿಟ್ಟುಕೊಳ್ಳಿ, ನೆಮ್ಮದಿಯಿಂದಿರಿ.
(ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ By ಅವಿನಾಶ್ ಬಿ. For 13 Nov 2017)

ಗುರುವಾರ, ನವೆಂಬರ್ 09, 2017

ರಾಮಯಾಣದ ಸ್ವಾರಸ್ಯ ಸಂಗತಿಗಳು 1

ರಾವಣನ ಸಾವಿಗೆ ಪಾರ್ವತಿ ಕಾರಣ
       ನಮಗೆ ತಿಳಿದಿರುವಂತೆ ಹತ್ತು ತಲೆಯ ದುಷ್ಟ ರಾವಣನ ಸಾವಿಗೆ ಕಾರಣ ಸೀತೆ. ಆದರೆ, ನಿಜವಾಗಿ ನೋಡಿದರೆ ಅವನ ಸಾವಿಗೆ ಸೀತೆ ನೆಪ ಮಾತ್ರ. ಅದಕ್ಕೆ ಮೂಲ ಕಾರಣ ಪಾರ್ವತಿಯ ಶಾಪ. ಈಶ್ವರ ರಾವಣನ ತಪಸ್ಸಿಗೆ ಮೆಚ್ಚಿ ಆತ್ಮಲಿಂಗ ಕೊಟ್ಟ ಎಂದು ಕೇಳಿದ್ದೇವೆ. ಆದರೆ ಪಾರ್ವತಿ ಶಾಪ ಕೊಟ್ಟಿದ್ದು ನಮಗೆ ಗೊತ್ತಿಲ್ಲ. ಆತ್ಮಲಿಂಗ ಪಡೆಯುವ ಕಸರತ್ತಿನಲ್ಲಿ ಒಮ್ಮೆ ಶಿವನನ್ನು ಮೆಚ್ಚಿಸಲು ರಾವಣ ಕೈಲಾಸ ಪರ್ವತವನ್ನೇ ಎತ್ತಿದ್ದ. ಆಗ ಪಾರ್ವತಿಗೆ ಬಹಳ ಹೆದರಿಕೆಯಾಗಿತ್ತಂತೆ. ರಾವಣನ ಮೇಲೆ ಸಿಟ್ಟುಗೊಂಡ ಆಕೆ, ನಿನಗೆ ಹೆಂಗಸಿನಿಂದಲೇ ಸಾವು ಎಂದು ಶಾಪ ಕೊಟ್ಟಳಂತೆ.                ಕೃಪೆ : ಕೆ.ಟಿ.ಆರ್

ಶುಕ್ರವಾರ, ನವೆಂಬರ್ 03, 2017

ವಾಟ್ಸ್ಯಾಪ್ (whatsapp) ಸಂದೇಶಗಳು


ಕುಂಬಾರನು ಮಾಡಿದ ಹಣತೆಗೆ,
..
ಗಾಣಿಗ ತಯಾರಿಸಿದ ಎಣ್ಣೆ ಹಾಕಿ,
..
ರೈತ ಬೆಳೆದ ಹತ್ತಿಯ ಬತ್ತಿಗೆ ಜ್ಯೋತಿ ಮುಟ್ಟಿಸಲು,
..
ಕುಲವಿಲ್ಲದ ಬೆಳಕು ನೋಡಾ
....
.... 
ನಮ್ಮ ಬಾಳಿನಲ್ಲಿ ಜ್ಞಾನದ ಜ್ಯೋತಿಯನ್ನು
..
ಈ ದೀಪಾವಳಿ ಹೊತ್ತಿಸಲಿ ಎಂದು ಹಾರೈಸುತ್ತೇನೆ...
*******************************************
ತಾಳ್ಮೆಗೂ ಒಂದು ಕೊನೆ ಇರುತ್ತೆ ಒಬ್ಬ ವ್ಯಕ್ತಿಯ ಮನಸ್ಸನ್ನು ನೋಯಿಸುತ್ತಾ ಇದ್ದರೂ
..
ಆ ವ್ಯಕ್ತಿ ನಮ್ಮನ್ನು ಕ್ಷಮಿಸುತ್ತಾ ಇರುತ್ತಾನೆ ಎಂದು ಮತ್ತೆ ಮತ್ತೆ ನೋವು ಕೊಡ್ತಾ ಇರೋದು
..
ಶತ ಮೂರ್ಖರ ಲಕ್ಷಣ..
..
ಕ್ಷಮಿಸುವ ವ್ಯಕ್ತಿ ಶ್ರೇಷ್ಠನಾಗುತ್ತಾನೆ
..
Www.spn3187.blogspot.in
..
ಹಿಂಸಿಸುವ ವ್ಯಕ್ತಿ ಕ್ಷಣ ಕ್ಷಣವು ಪಾಪದ ಕೊಡ ತುಂಬಿಸುತ್ತಾ ಸಾಗುತ್ತಾನೆ...
*******************************************
ಚಿರತೆ ವೇಗಕ್ಕೂ,
*
ಹುಲಿಯ ನೋಟಕ್ಕೂ
*
ಹೆದರದವ ಕೆಲವೊಮ್ಮೆ
*
ಬೆಕ್ಕಿನ ಅಡ್ಡಲಾಗುವಿಕೆಗೆ ಹೆದರುತ್ತಾನೆ
*
ನೀ ನಂಬಿದಂತೆ ಜೀವನ ಅಷ್ಟೇ
*******************************************
ದಾರಿ ತಪ್ಪಿದರೆ ಹಿಂತಿರುಗಿ ಸರಿ ದಾರಿಯನ್ನು ಕಂಡುಕೊಳ್ಳಬಹುದು
ಆದರೆ...
ಬಾಯಿ ತಪ್ಪಿದರೆ ಆಡಿದ ಮಾತು ಯಾವತ್ತೂ ಹಿಂತಿರುಗಿ ಬರುವುದಿಲ್ಲ.
*******************************************
ನಾಳೆಗಳ ನಂಬಿ ನಡೆಯುವವನಿಗೆ
ನಿನ್ನೆಗಳ ಚಿಂತೆ ಇರೋದಿಲ್ಲ..
.
ನಿನ್ನೆಗಳ ಚಿಂತೆಯಲ್ಲಿರುವವನಿಗೆ
ನಾಳೆಗಳ ಅವಕಾಸವೇ ಇರುವದಿಲ್ಲ..
..
Www.spn3187.blogspot.in
..
ಆಗುವುದೆಲ್ಲ ಒಳ್ಳೆಯಕ್ಕೆ
..
ಮನ ಮಾತಾದಾಗ
***************************************

ಬುಧವಾರ, ನವೆಂಬರ್ 01, 2017

ದಕ್ಷಿಣ ಭಾರತದ ನದಿಗಳು

  • ಮಹಾ ನದಿ
ಉಗಮ:ಚತ್ತೀಸಗಢ್ ರಾಜ್ಯದ ಜಗದಲ್ಪುರ ಜಿಲ್ಲೆಯ ಸಿವಾಹ. ಉಪನದಿಗಳು: ಟೆಲ್,ಹಾಸ್ಪೊ,ಶಿಯೋನಾಥ್. ಮಹಾನದಿಯನ್ನು ಒರಿಸ್ಸಾದ ಕಣ್ಣೀರು ಎಂದು ಕರೆಯುವರು. ಒರಿಸ್ಸಾದ ಸಾಂಬಲಾಪುರದ ಬಳಿ ಮಹಾನದಿಗೆ ಅಣೆಕಟ್ಟು ಕಟ್ಟಲಾಗಿದೆ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ಕಾವೇರಿ ನದಿ
ಉಗಮ: ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ಬೆಟ್ಟಗಳ ತಲಕಾವೇರಿ. ಉಪನದಿಗಳು: ಹೇಮಾವತಿ,ಅಕಾ೯ವತಿ, ಕಬಿನಿ,ಸುವಣಾ೯ವತಿ,ಶಿಂಷಾ. ಜಲಪಾತಗಳು: ಶಿವನ ಸಮುದ್ರ, ಹೊಗೇನಕಲ್ ಜಲಪಾತ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ಕೃಷ್ಣಾ ನದಿ
ಉಗಮ: ಮಹಾರಾಷ್ಟ್ರದ ಮಹಾಬಲೇಶ್ವರ ಉಪನದಿಗಳು: ಮಲಪ್ರಭಾ, ಘಟಪ್ರಭಾ, ಭೀಮಾ, ತುಂಗಭದ್ರಾ, ಮುಸಿ,ಕೊಯ್ನಾ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ನಮ೯ದಾ ನದಿ
ಉಗಮ: ಚತ್ತೀಸಗಢದ ಅಮರಕಂಟಕ. ಉಪ ನದಿಗಳು: ಬರ್ನರ್, ಶಕ್ಕರ್, ಹಿರಾನ್, ತಾವಾ. ಜಲಪಾತಗಳು: ದಧಿ೯, ದುವಂಧರ್, ಕಪಿಲ‍ಧಾರಾ ಇದು ಅರಬ್ಬೀ ಸಮುದ್ರವನ್ನು ಸೇರುತ್ತದೆ.