fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಜನವರಿ 31, 2016

ಕನ್ನಡ ಉಳಿಸಿ, ಕನ್ನಡ ಬೆಳಸಿ ಹಾಗೂ ಕನ್ನಡ ನಿತ್ಯ ಬಳಸಿ

ಕನ್ನಡ ಕಲಿಸಿ ಕನ್ನಡ ಉಲಿಸಿ
ಕನ್ನಡ ತನವನು ಭರಿಸಿ
ಕನ್ನಡ ಉಳಿಸಿ ಕನ್ನಡ ಬೆಳೆಸಿ
ಕನ್ನಡದಲೆ ವ್ಯವಹರಸಿ

ಕಟ್ಟಡದಲಿ ತೂಗಾಡುತಲಿರಲೀ
ಕನ್ನಡ ಬರೆಹದ ಫಲಕ
ಕನ್ನಡದಲೆ ಆಲೋಚನೆ ನಡೆದರೆ
ಭಾಷೆಗೆ ಭದ್ರದ ಚಿಲಕ

ನೆಲದುದ್ದಗಲಕು ಗುಡಿಗೋಪುರದಲಿ
ಅರಳಿವೆ ಕಲ್ಲಿನ ಸುಮವು
ಘಟ್ಟದ ವಿಸ್ಮಯ ವಿಶಿಷ್ಟ ಜೀವಿಗೆ
ವಿಶ್ವದಿ ಇಲ್ಲವು ಸಮವು

ಬೆಟ್ಟಬಯಲುಗಳು ಉಟ್ಟ ಬಟ್ಟೆಯದೋ
ಹಸುರಿರೆ ಕಣ್ಣಿಗೆ ಸಗ್ಗ
ಜಿಲ್ಲೆಜಿಲ್ಲೆಗಳ ಸೇರಿಸಿ ಹೊಲೆದಿದೆ
ಜೀವನದಿಗಳ ಹಗ್ಗ

ಕನ್ನಡ ಮಣ್ಣಿದು ತುಂಬಲು ಕಣ್ಣಲಿ
ಎದೆಯಲಿ ತೃಪ್ತಿಯ ತವರು
ಕನ್ನಡ ನೀರನು ಉದರವು ಸೇರಲು
ನಾಡಿಯು ಪಡೆವುದು ನವುರು

ಬೆಲ್ಲವೋ ಬತ್ತವೋ ರೈತನ ಚಿತ್ತವು
ಬದುಕಿನ ಬೆಳೆಗಳ ಬೆಳೆವ
ಪಲ್ಲೆ ಫಲಗಳ ಪುಷ್ಪ ಧಾನ್ಯಗಳ
ಬೆಳೆಯುತ ಹಸಿವದು ಕಳೆವ

ನಾಡಿನ ರಕ್ಷಣೆ ನೆಲದಭಿಮಾನಕೆ
ಎದುರಿಸಿ , ಹಿಡಿದಿರೆ ಕತ್ತಿ
ಮೆರೆದಿರೆ ಹುಲಿಗಳು ಮಡಿದಿರೆ ಕಲಿಗಳು
ಕನ್ನಡ ಮೇಲಕೆ ಎತ್ತಿ

ಬೀದಿಬದಿಗಳಲಿ ವಜ್ರ ರತ್ನಗಳು
ವಿಕ್ರಯಗೊಂಡಿರೆ ಹಿಂದೆ
ತಂತ್ರಜ್ಞಾನದಿ ನಾಡನು ಕಟ್ಟಿ
ವಿಶ್ವೇಶ್ವರರೇ ಮುಂದೆ

ಆಳಿದ ರಾಜರ ಜನಹಿತ ಕಾರ್ಯವು
ಇಂದಿಗು ಕೊಡುತಿದೆ ಫಸಲು
ಗಣಕಯಂತ್ರದ ತಂತ್ರ ಸಿದ್ಧಿಯಲಿ
ವಿಶ್ವಕೆ ತೋರಿದೆ ನೊಸಲು

ಮಾತೃ ಭಾಷೆಗೆ ಆದ್ಯತೆ ಕೊಟ್ಟಿರೆ
ಭಾಷೆಯ ಬೆಳೆವುದು ಸತ್ಯ
ಪೋಷಕ ಮಿತ್ರರೆ ಮಗಳ ಜತೆಯಲಿ
ಆಡಿರಿ ಕನ್ನಡ ನಿತ್ಯ

ಕನ್ನಡ ಕಲಿಯಲಿ ಬೆರೆಯುತ ನಲಿಯಲಿ
ನಾಡಿಗೆ ಬಂದಿಹ ಅನ್ಯ
ಹೊರಗಿನ ಜನಗಳೆ ಕನ್ನಡ ಮನಗಳ
ಕೆಡಿಸದೆ ಬಾಳಲು ಮಾನ್ಯ

ಕನ್ನಡ ಜನಗಳ ತುಂಬಿದ ಮನಗಳ
ಗೆಳೆತನ ಮಾಡಲು ಚೆಂದ
ನಾಡಿನ ಭಾಷೆಯ ಅಮೃತಶೀಷೆಯು
ಸವಿಯಲು ರುಚಿಕರ ಬಂಧ

ಕನ್ನಡ ದೇವಿಗೆ ನಮನವ ಸಲ್ಲಿಸಿ
ನಿಲ್ಲಿಪೆ ಕವನದ ಬಂಡಿ
ಕನ್ನಡ ರಕ್ಷಣೆ ಮಾಡಿರೆ ಮಂದಿಗೆ
ನಮಿಸಲು ಊರುವೆ ಮಂಡಿ  
                                                                            ರಚನೆ :

ಮಂಗಳವಾರ, ಜನವರಿ 26, 2016

ಅಶ್ವಥರಾಮ

ಅಂಕಿತ ನಾಮ: ಅಶ್ವತ್ಥರಾಮ
ಕಾಲ:
ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ

ಎನಗಿನ್ನೇತರಭಕ್ತಿ ಬಸವಾ ? ಎನಗಿನ್ನೇತರ ಮುಕ್ತಿ ಬಸವಾ.
ಎನಗಿನ್ನು ಶಬ್ದ ನಿಶ್ಶಬ್ದಸೂಚನೆಯಾಯಿತ್ತಯ್ಯಾ ಬಸವಾ,
ಸಂಗಯ್ಯಾ, ಬಸವನ ಗಮನದರಿವು ಎನಗೆಲ್ಲಿಯದು ? 

ಭಾನುವಾರ, ಜನವರಿ 24, 2016

ಪೀಕಲಾಟ

  • ಪೀಕ್ ಅವರ್ ಟ್ರಾಫಿಕ್ನಲ್ಲಿ ಸಿಕ್ಕಿಕೊಂಡವರ ಕತೆ
  • ಫೇಕ್ ಕಂಪನಿಗಳಲ್ಲಿ ಹಣ ತೊಡಗಿಸಿ ಕಳೆದುಕೊಂಡಾಗ...
  • ಪೀ... ಪೀ... ಪೀ... ಹಾರ್ನ್ ಕೇಳಿ ಕೇಳಿ ಆಗುವ ಸಂಕಟ
  • 'ಪಾಕ' ಮಾಡಲು ಬರದಿದ್ದರೂ ಮಾಡಬೇಕಾದ ಸಂದರ್ಭ ಬಂದಾಗ
  • ಕುಡಿದವರೇ ಲೋಟ ತೊಳೆದಿಡುವ ಸಂದರ್ಭ ಬಂದಾಗ ಉಂಟಾಗುವ ತೊಳಲಾಟ
  • ಅತ್ತ ಹೆಂಡತಿ, ಇತ್ತ ಪ್ರೇಯಸಿ
  • ಬಾಸ್ಗೆ ಆಟ; ನೌಕರನಿಗೆ ಪೀಕಲಾಟ
  • ಸಮಯಕ್ಕೆ ಬದ್ಧನಾದವನಿಗೆ ಮಲಬದ್ಧತೆಯೂ ಇದ್ದುಬಿಟ್ಟರೆ ಅವನು ಎದುರಿಸೋದು ಇದೇ
  • ಕ್ರಿಕೆಟ್ ಮ್ಯಾಚ್ ಇರುವ ದಿನವೇ ಪರೀಕ್ಷೆಗಾಗಿ ಓದುವ ಸಂದರ್ಭದಲ್ಲಿ
  • ಇರುವ ಒಂದೇ ಒಂದು ಸೀಟನ್ನೂ ನಿಮ್ಮ ಲೆಕ್ಚರರ್ಗೆ ಬಿಟ್ಟುಕೊಡಬೇಕಾದ ಸಂದರ್ಭ ಒದಗಿದಾಗ
  • ಪೆಚ್ಚು ಮೋರೆ ಹಾಕಬೇಕಾದಂಥ ಸಂದರ್ಭಕ್ಕೂ ಇದೇ ಹೆಸರು
  • ಪೇಟ ದೊಡ್ಡದು, ತಲೆ ಸಣ್ಣದು ಆದಾಗ ಅನುಭವಿಸುವ ಪೇಚಾಟ
  • ಹೆಂಡತಿ ತವರಿಗೆ ಹೋದಾಗಲೇ ನೆಂಟರು ಬಂದರೆ...
  • ಎಷ್ಟು ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಲೇ ಹೋದಾಗ ಆಗುವ ತಾಕಲಾಟ

ಶುಕ್ರವಾರ, ಜನವರಿ 22, 2016

ಅಮ್ಮನ ನೆನಪು ಕಾಡುತ್ತಿದೆ...



ಎಂಥಾ ಚೆಂದ ನನ್ನ ಅಮ್ಮ
ನೀವು ಇವಳ ಬಲ್ಲಿರೆ...
ಇವಳ ಮಾತು ಇವಳ ಮಮತೆ
ಮಧುರ ನೆನಪ ಚೆಲ್ಲಿರೆ...

ನಾನಿಹೆನು ಬಲುದೂರ
ಮರಳಿಬರಲು ಕಾತರ...
ಅಮ್ಮ ನಿನಗೆ ಹೇಳಲೇನು
ಮನದಲೆಷ್ಟು ಬೇಸರ...

ಅಮ್ಮ ನಿನ್ನ ಮಾತೇ ಮುತ್ತು
ನನ್ನ ಮನದ ತುಂಬೆಲ್ಲಾ...
ಕಾಡಿದೆ ನಿನ್ನ ಕೈತುತ್ತು
ನೀ ತುಂಬಿರುವೆ ಮನದಲೆಲ್ಲಾ...

ಅಮ್ಮ ನಿನ್ನ ನೆನಪು ನನ್ನ
ಪದೇ ಪದೇ ಕಾಡಿದೆ...
ಕಣ್ಣಂಚಿನಲಿ ಜಿನುಗುತಿದೆ
ನೆನಪ ಬಿಂದು ನಿನ್ನದೇ...
                                                 Posted by Prashanth Urala. G