ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಜನವರಿ 31, 2016

ಕನ್ನಡ ಉಳಿಸಿ, ಕನ್ನಡ ಬೆಳಸಿ ಹಾಗೂ ಕನ್ನಡ ನಿತ್ಯ ಬಳಸಿ

ಕನ್ನಡ ಕಲಿಸಿ ಕನ್ನಡ ಉಲಿಸಿ
ಕನ್ನಡ ತನವನು ಭರಿಸಿ
ಕನ್ನಡ ಉಳಿಸಿ ಕನ್ನಡ ಬೆಳೆಸಿ
ಕನ್ನಡದಲೆ ವ್ಯವಹರಸಿ

ಕಟ್ಟಡದಲಿ ತೂಗಾಡುತಲಿರಲೀ
ಕನ್ನಡ ಬರೆಹದ ಫಲಕ
ಕನ್ನಡದಲೆ ಆಲೋಚನೆ ನಡೆದರೆ
ಭಾಷೆಗೆ ಭದ್ರದ ಚಿಲಕ

ನೆಲದುದ್ದಗಲಕು ಗುಡಿಗೋಪುರದಲಿ
ಅರಳಿವೆ ಕಲ್ಲಿನ ಸುಮವು
ಘಟ್ಟದ ವಿಸ್ಮಯ ವಿಶಿಷ್ಟ ಜೀವಿಗೆ
ವಿಶ್ವದಿ ಇಲ್ಲವು ಸಮವು

ಬೆಟ್ಟಬಯಲುಗಳು ಉಟ್ಟ ಬಟ್ಟೆಯದೋ
ಹಸುರಿರೆ ಕಣ್ಣಿಗೆ ಸಗ್ಗ
ಜಿಲ್ಲೆಜಿಲ್ಲೆಗಳ ಸೇರಿಸಿ ಹೊಲೆದಿದೆ
ಜೀವನದಿಗಳ ಹಗ್ಗ

ಕನ್ನಡ ಮಣ್ಣಿದು ತುಂಬಲು ಕಣ್ಣಲಿ
ಎದೆಯಲಿ ತೃಪ್ತಿಯ ತವರು
ಕನ್ನಡ ನೀರನು ಉದರವು ಸೇರಲು
ನಾಡಿಯು ಪಡೆವುದು ನವುರು

ಬೆಲ್ಲವೋ ಬತ್ತವೋ ರೈತನ ಚಿತ್ತವು
ಬದುಕಿನ ಬೆಳೆಗಳ ಬೆಳೆವ
ಪಲ್ಲೆ ಫಲಗಳ ಪುಷ್ಪ ಧಾನ್ಯಗಳ
ಬೆಳೆಯುತ ಹಸಿವದು ಕಳೆವ

ನಾಡಿನ ರಕ್ಷಣೆ ನೆಲದಭಿಮಾನಕೆ
ಎದುರಿಸಿ , ಹಿಡಿದಿರೆ ಕತ್ತಿ
ಮೆರೆದಿರೆ ಹುಲಿಗಳು ಮಡಿದಿರೆ ಕಲಿಗಳು
ಕನ್ನಡ ಮೇಲಕೆ ಎತ್ತಿ

ಬೀದಿಬದಿಗಳಲಿ ವಜ್ರ ರತ್ನಗಳು
ವಿಕ್ರಯಗೊಂಡಿರೆ ಹಿಂದೆ
ತಂತ್ರಜ್ಞಾನದಿ ನಾಡನು ಕಟ್ಟಿ
ವಿಶ್ವೇಶ್ವರರೇ ಮುಂದೆ

ಆಳಿದ ರಾಜರ ಜನಹಿತ ಕಾರ್ಯವು
ಇಂದಿಗು ಕೊಡುತಿದೆ ಫಸಲು
ಗಣಕಯಂತ್ರದ ತಂತ್ರ ಸಿದ್ಧಿಯಲಿ
ವಿಶ್ವಕೆ ತೋರಿದೆ ನೊಸಲು

ಮಾತೃ ಭಾಷೆಗೆ ಆದ್ಯತೆ ಕೊಟ್ಟಿರೆ
ಭಾಷೆಯ ಬೆಳೆವುದು ಸತ್ಯ
ಪೋಷಕ ಮಿತ್ರರೆ ಮಗಳ ಜತೆಯಲಿ
ಆಡಿರಿ ಕನ್ನಡ ನಿತ್ಯ

ಕನ್ನಡ ಕಲಿಯಲಿ ಬೆರೆಯುತ ನಲಿಯಲಿ
ನಾಡಿಗೆ ಬಂದಿಹ ಅನ್ಯ
ಹೊರಗಿನ ಜನಗಳೆ ಕನ್ನಡ ಮನಗಳ
ಕೆಡಿಸದೆ ಬಾಳಲು ಮಾನ್ಯ

ಕನ್ನಡ ಜನಗಳ ತುಂಬಿದ ಮನಗಳ
ಗೆಳೆತನ ಮಾಡಲು ಚೆಂದ
ನಾಡಿನ ಭಾಷೆಯ ಅಮೃತಶೀಷೆಯು
ಸವಿಯಲು ರುಚಿಕರ ಬಂಧ

ಕನ್ನಡ ದೇವಿಗೆ ನಮನವ ಸಲ್ಲಿಸಿ
ನಿಲ್ಲಿಪೆ ಕವನದ ಬಂಡಿ
ಕನ್ನಡ ರಕ್ಷಣೆ ಮಾಡಿರೆ ಮಂದಿಗೆ
ನಮಿಸಲು ಊರುವೆ ಮಂಡಿ  
                                                                            ರಚನೆ :

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು