ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಮಾರ್ಚ್ 22, 2017

ಅಮ್ಮನ ನೆನಪು ಕಾಡುತ್ತಿದೆ...



ಎಂಥಾ ಚೆಂದ ನನ್ನ ಅಮ್ಮ
ನೀವು ಇವಳ ಬಲ್ಲಿರೆ...
ಇವಳ ಮಾತು ಇವಳ ಮಮತೆ
ಮಧುರ ನೆನಪ ಚೆಲ್ಲಿರೆ...

ನಾನಿಹೆನು ಬಲುದೂರ
ಮರಳಿಬರಲು ಕಾತರ...
ಅಮ್ಮ ನಿನಗೆ ಹೇಳಲೇನು
ಮನದಲೆಷ್ಟು ಬೇಸರ...

ಅಮ್ಮ ನಿನ್ನ ಮಾತೇ ಮುತ್ತು
ನನ್ನ ಮನದ ತುಂಬೆಲ್ಲಾ...
ಕಾಡಿದೆ ನಿನ್ನ ಕೈತುತ್ತು
ನೀ ತುಂಬಿರುವೆ ಮನದಲೆಲ್ಲಾ...

ಅಮ್ಮ ನಿನ್ನ ನೆನಪು ನನ್ನ
ಪದೇ ಪದೇ ಕಾಡಿದೆ...
ಕಣ್ಣಂಚಿನಲಿ ಜಿನುಗುತಿದೆ
ನೆನಪ ಬಿಂದು ನಿನ್ನದೇ...
                                                                                                         Posted by Prashanth Urala. G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು