ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಆಗಸ್ಟ್ 11, 2015

ರೈತರಿಗೆ ಮನವಿ

ರೈತ ಬಾಂಧವರೇ, ಅಣ್ಣ ತಮ್ಮಂದಿರೇ, 
ಭಾರತದ ಬೆನ್ನೆಲೆಲು ನೀವು, 
ನೇಣಿಗೆ ಕೊರಳ ನೀಡದಿರಿ, 
ಓ ನಮ್ಮ ಅನ್ನದಾತರೇ, 
ಓ ನಮ್ಮ ರೈತರೇ

ಭೂತಾಯ ನಮಿಸಿ, ಬೆವರನ್ನು ಸುರಿಸಿ, 
ನೀರನ್ನು ಹರಿಸಿ, ಬೆಳೆಯನ್ನು ಬೆಳೆಸಿ, 
ಹಸಿವನ್ನು ನೀಗಿಸಿದ ಅನ್ನದಾತರೇ, 
ಸಾವಿಗೆ ಶರಣಾಗದಿರಿ, 
ಓ ನಮ್ಮ ರೈತರೇ,

ಈ ಮಣ್ಣಲ್ಲೇ ಹುಟ್ಟಿ, ಈ ಮಣ್ಣಲ್ಲೇ ಬೆಳೆದು, 
ಮನುಕುಲಕೆ ಅನ್ನವ ನೀಡಿದ, 
ಅನ್ನದಾತರೇ, ಬದುಕ ಕೊನೆಗಾಣಿಸದಿರಿ, 
ಓ ನಮ್ಮ ರೈತರೇ,

ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆಂದು, 
ಕೆಸರಲ್ಲಿ ಮಿಂದು, ಬೆಳೆಯನ್ನು ತಂದು, 
ನಮ್ಮೊಂದಿಗೆ ಬೆರೆತು, ಕಷ್ಟ ಮರೆತು, 
ಸುಗ್ಗಿ ಹಾಡು ಹಾಡಿ, ಹುಗ್ಗಿ ಊಟ ಮಾಡಿ 
ನಲಿಯೋಣ ಅನ್ನದಾತರೇ, 
ಓ ನಮ್ಮ ರೈತರೇ

ಕೃಪೆ @ಮಂಗಳಾ ಕಬ್ಬರ, ಹುಬ್ಬಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು