ರೈತ ಬಾಂಧವರೇ, ಅಣ್ಣ ತಮ್ಮಂದಿರೇ,
ಭಾರತದ ಬೆನ್ನೆಲೆಲು ನೀವು,
ನೇಣಿಗೆ ಕೊರಳ ನೀಡದಿರಿ,
ಓ ನಮ್ಮ ಅನ್ನದಾತರೇ,
ಓ ನಮ್ಮ ರೈತರೇ
ಭೂತಾಯ ನಮಿಸಿ, ಬೆವರನ್ನು ಸುರಿಸಿ,
ನೀರನ್ನು ಹರಿಸಿ, ಬೆಳೆಯನ್ನು ಬೆಳೆಸಿ,
ಹಸಿವನ್ನು ನೀಗಿಸಿದ ಅನ್ನದಾತರೇ,
ಸಾವಿಗೆ ಶರಣಾಗದಿರಿ,
ಓ ನಮ್ಮ ರೈತರೇ,
ಈ ಮಣ್ಣಲ್ಲೇ ಹುಟ್ಟಿ, ಈ ಮಣ್ಣಲ್ಲೇ ಬೆಳೆದು,
ಮನುಕುಲಕೆ ಅನ್ನವ ನೀಡಿದ,
ಅನ್ನದಾತರೇ, ಬದುಕ ಕೊನೆಗಾಣಿಸದಿರಿ,
ಓ ನಮ್ಮ ರೈತರೇ,
ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆಂದು,
ಕೆಸರಲ್ಲಿ ಮಿಂದು, ಬೆಳೆಯನ್ನು ತಂದು,
ನಮ್ಮೊಂದಿಗೆ ಬೆರೆತು, ಕಷ್ಟ ಮರೆತು,
ಸುಗ್ಗಿ ಹಾಡು ಹಾಡಿ, ಹುಗ್ಗಿ ಊಟ ಮಾಡಿ
ನಲಿಯೋಣ ಅನ್ನದಾತರೇ,
ಓ ನಮ್ಮ ರೈತರೇ
ಕೃಪೆ : @ಮಂಗಳಾ ಕಬ್ಬರ, ಹುಬ್ಬಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.