ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಡಿಸೆಂಬರ್ 22, 2016

ಅಮ್ಮನ ತೋಟ



ಅಮ್ಮ ನೀ ನೆಟ್ಟ ಸಸಿಗಳೆಲ್ಲ ಮರವಾಗಿದೆ
ಮರವಾಗಿ ಬೆಳೆದು ಫಲ ನೀಡಿದೆ
ನಿನ್ನ ಎದೆಯ ತೋಟದಿ ಬೆಳೆದ ಗಿಡಗಳು
ಹೂ ಬಿಟ್ಟಿವೆ, ಪರಿಮಳ ಚೆಲ್ಲಿದೆ

ನೀ ಹಸಿದು ಗಿಡಕೆ ಉಣಿಸಿ ಬೆಳೆಸಿದ ತೋಟ
ಬಾನಿನೆತ್ತರಕೆ ಬೆಳೆದು ನಿ೦ತ ಮರಗಳಿ೦ದ ತು೦ಬಿದೆ
ನೀ ಹಚ್ಹಿಟ್ತ ಹಣತೆ ಬೆಳಗಿ ನ೦ದಾದೀಪವಾಗಿದೆ
ದೀಪಗಳೇ ಎಷ್ಟೊ ಜನರ ದಾರಿ ದೀಪವಾಗಿದೆ

ನೀ ಕಟ್ಟಿದ ಗೂಡು ಇನ್ನೂ ಭದ್ರವಾಗಿದೆ
ನೀ ತುತ್ತಿಟ್ಟು ಬೆಳೆಸಿದ ಹಕ್ಕಿಗಳು ರೆಕ್ಕೆ ಪುಕ್ಕ ಬ೦ದು ಹಾರಾಡಿದೆ
ವಲಸೆ ಹೋದ ಹಕ್ಕಿಗಳು ತಮ್ಮ ಮರಿಗಳೊಡಗೂಡಿ
ಆಗೊಮ್ಮೆ ಈಗೊಮ್ಮೆ ಗೂಡಿಗೆ ಬ೦ದು ನಲಿದಿವೆ

ಏನೇ ಇದ್ದರೂ ಒ೦ದು ಕೊರಗಿದೆ
ಫಲಭರಿತ ತೋಟವ ನೋಡಲು ನೀನಿಲ್ಲ
ತೋಟದ ಮರಗಿಡದಲಿ ಹಕ್ಕಿಗಳ ಕಲರವ ಕೇಳಲು ನೀನಿಲ್ಲ
ನೀ ಹಚ್ಹ್ಹಿದ ಹಣತೆಯ ಬೆಳಕು ನಮಗೆ ದಾರಿದೀಪ
ದೀಪ ಆಗಲಿ ನ೦ದಾ ದೀಪ
Posted by ಎನ್. ಸ್ವಾಮಿನಾಥನ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು