fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ನವೆಂಬರ್ 14, 2015

ಸಿದ್ದೇಶ್ವರ ದೇವಾಲಯ

1997ರಲ್ಲಿ ಜಿಲ್ಲೆಯಾಗಿ ಪರಿವರ್ತನೆಯಾದ ಹಾವೇರಿ ಐತಿಹಾಸಿಕವಾಗಿಯೂ ಪ್ರಸಿದ್ಧ ಜಿಲ್ಲೆ. ಜಿಲ್ಲೆಯ ಕದರ ಮಂಡಲಗಿಯಲ್ಲಿ ದ್ವಾಪರ
Haveri siddeswara temple, kannadaratna.com, ourtemples.in, ಕನ್ನಡರತ್ನ.ಕಾಂ, ಸಿದ್ದೇಶ್ವರದೇವಾಲಯ, ಹಾವೇರಿ.
ಯುಗದಲ್ಲಿ ಜನಮೇಜಯ ಕಟ್ಟಿಸಿದ ಮಾರುತಿ ದೇವಾಲಯವಿದ್ದರೆ,  ಕಾಗಿನೆಲೆಯಲ್ಲಿ ಕನಕದಾಸರ ಆರಾಧ್ಯದೈವ ಆದಿಕೇಶವ ದೇವಾಲಯವಿದೆ.
ಇದಲ್ಲದೆ ಮೋಟೆಬೆನ್ನೂರಿನಲ್ಲಿ ಮಲ್ಲಿಕಾರ್ಜುನ ದೇವಾಲಯ, ಸಂಗೂರಿನಲ್ಲಿ ಈಶ್ವರ, ವೀರಭದ್ರ ದೇವಾಲಯ, ಹಿರೇಬೆಂಡಿಗೇರಿಯಲ್ಲಿ ಕಾಳಪ್ಪನ ದೇಗುಲ, ಹುಲಗೂರಿನಲ್ಲಿ ಸಿದ್ಧಲಿಂಗ ದೇವಾಲಯಗಳಿವೆ. ಜಿಲ್ಲೆಯ ಅಬ್ಬಲೂರು ಸರ್ವಜ್ಞ ಕವಿ ಹುಟ್ಟಿದ ಊರು ಎಂದು ಹೇಳಲಾಗಿದೆ.  ಸಂತ ಶಿಶುನಾಳ ಷರೀಪರು ಶಿಗ್ಗಾಂವಿಯ ಬಾಡದಲ್ಲಿ ಹುಟ್ಟಿದವರು.
ಜಿಲ್ಲಾಕೇಂದ್ರ ಹಾವೇರಿ ಹಿಂದೆ ಪಾವರಿ, ಹಾವರಿ, ಹಾಹರಿ, ನಳಪುರಿ ಎಂಬ ಹೆಸರಿನಿಂದ ಕರೆಸಿಕೊಂಡಿತ್ತು. ಚಾಳುಕ್ಯ, ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲದಲ್ಲಿ ಹಾವೇರಿ ಪ್ರಸಿದ್ಧ ನಗರವಾಗಿತ್ತೆಂದು ಇತಿಹಾಸ ಹೇಳುತ್ತದೆ.
ಪಟ್ಟಣದಲ್ಲಿ ಸಿದ್ದೇಶ್ವರ, ನರಸಿಂಹ, ವೀರಭದ್ರ ಮತ್ತು ಕಲ್ಲೇಶ್ವರ ದೇವಸ್ಥಾನಗಳಿವೆ. ಈ ಪೈಕಿ ಸಿದ್ದೇಶ್ವರ ದೇವಸ್ಥಾನ ಶಿಲ್ಪಕಲೆಯ ದೃಷ್ಟಿಯಿಂದ ಭವ್ಯವಾಗಿದೆ. ಕಲ್ಯಾಣ ಚಾಳುಕ್ಯರ ಕಾಲದ ವಾಸ್ತುಶಿಲ್ಪವನ್ನೊಳಗೊಂಡ ಈ ದೇಗುಲದ ಭಿತ್ತಿಗಳ ಸಾಲು ಪಟ್ಟಿಕೆಗಳಲ್ಲಿರುವ ಸೂಕ್ಷ್ಮ ಕುಸುರಿ ಕೆತ್ತನೆ ಆಕರ್ಷಕವಾಗಿದೆ.
ದೇಗುಲದ ಗೋಪುರ ಏಕಕೂಟವಾಗಿದ್ದು, ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳ ಸಂಗಮವಾಗಿ ಅಚ್ಚುಕಟ್ಟಾಗಿದೆ.
ದೇವಾಲಯದಲ್ಲಿ ಉಮಾಮಹೇಶ್ವರ, ಮಹಾಲಕ್ಷ್ಮಿ, ಸೂರ್ಯ ಮತ್ತು ನಾಗ-ನಾಗಿಣಿ ವಿಗ್ರಹಗಳಿವೆ. ಶಿವಲಿಂಗವನ್ನು ಹಿಡಿದಿರುವ ವಿಷ್ಣುವಿನ ಮೂರ್ತಿ ಹಾಗೂ ಅಷ್ಟ ಮಾತೃಕೆಯರ ನೃತ್ಯಭಂಗಿಯ ಶಿಲ್ಪಗಳು ಅಪರೂಪದ್ದಾಗಿವೆ.
ಈ ದೇವಾಲಯದಲ್ಲಿಯೂ ಮುಖಮಂಟಪ, ಸುಖನಾಸಿ, ಭುವನೇಶ್ವರಿ ಹಾಗೂ ಗರ್ಭಗೃಹವಿದೆ.
ನರಸಿಂಹ ದೇವಾಲಯದ ಭಮುಭಾಗದಲ್ಲಿ ಕಲಾತ್ಮಕ ಕಂಬಗಳಿವೆಯಾದರೂ ಭಿತ್ತಿಗಳು ಸಾದಾ ಕಲ್ಲಿನ ನಿರ್ಮಾಣವಾಗಿದ್ದು ಕಲಾತ್ಮಕ ವಿಶೇಷತೆಗಳಿಲ್ಲ. ಆದರೆ ತಳಪಾಯದ ಕಲ್ಲಿನ ಮೇಲಿರುವ ಪಟ್ಟಿಕೆಯಲ್ಲಿ ಸೂಕ್ಷ್ಮ ಕೆತ್ತನೆಗಳಿವೆ.

     ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.