fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಜನವರಿ 26, 2015

ಜನೇವರಿ 26

ಕಳ್ ಮಂಜನಿಗೆ ಸಾಸಕರಿಂದ ಫೋನ್ ಬಂತು. ನೋಡಲಾ ಮಂಜ, ಈ ಕಿತ ಗಣರಾಜ್ಯೋತ್ಸವ ಅದ್ದೂರಿಯಾಗೆ ಮಾಡಬೇಕು. ಟಿವಿನಾಗೆ ನಮ್ಮ ತಾಲ್ಲೂಕ್ ಸುದ್ದಿ ಬರಬೇಕು. ಈ ಕಿತ MP election ಗೆ ನಿಂತ್ಕಂತಿನಿ. ಲಕ್ಸ ಖರ್ಚಾದರೂ ಪರವಾಗಿಲ್ಲ ಕನ್ಲಾ ಯಲ್ಲಾ ಸಂದಾಕಿ arrangement ಮಾಡಲಾ, ಭಾನುವಾರ ಬ್ಯಾರೆ ಜನ ಜಮಾಯಿಸಬೇಕು ಅಂದರು. ಆಯ್ತಣ್ಣೊ ಅಂತೇಳಿ ಯಲ್ಲರನ್ನು ಕರೆದು ಹೇಳಿದ.

ನೋಡ್ರಲಾ ಈ ಕಿತ ಪೆಸೆಲ್ ಇರಬೇಕು ಅಂತ ಸಾಸಕರು ಹೇಳವರೆ....ಹಂಗೆ ಮಾಡಮಾ ಕನ್ರಲಾ ಅಂದ. ಯಲ್ಲರಿಗೂ ಒಂದೊಂದು ಕೆಲಸ ವಹಿಸಿದ. ಇಸ್ಕೂಲ್ ಮುಂದೆ ಮೈದಾನದಾಗೆ ಯಲ್ಲ arrangement ಮಾಡಿದ. ಸಿದ್ಲಿಂಗುಗೆ ಫೋನ್ ಮಾಡಿ ಬೆಂಗಳೂರಿನಿಂದ ಜನರನ್ನ ಕರೆಸ್ತೀನಿ ಅಂದ.
ಸಾಸಕರಿಂದ ಕಾಸ್ ಇಸ್ಕಂಡು ಪ್ರಚಾರ ಯಲ್ಲ ಮಾಡಿಸಿದ. ಬೆಂಗಳೂರಿಗೂ ಸಹ ಹೋಗಿ ಬಂದ.

ಭಾನುವಾರ ಬಂದೆ ಬುಡ್ತು. ಜನ ಸಿಕ್ಕ ಪಟ್ಟೆ ಜಮಾಯಿಸಿದರು. ಸಾಸಕರ ಕಾರ್ ಬಂತು. ಯಲ್ಲ arrangement ನೋಡಿ ದಂಗಾದರು. ನೀವು MP ಆಯ್ತೀನಿ ಅಂದ್ರಲಾ ಸಾ ಅದಕ್ಕೆ Delhi ತರ ಪೆರೇಡ್ ಅರೆಂಜ್ ಮಾಡಿವ್ನಿ ಅಂದ ಕಳ್ ಮಂಜ. ಮೈದಾನ ದಾಗೆ uniform ಹಾಕೊಂಡು Left Right ಅಂತ ಅಂಕಂಡು ಜನ ನಿಂತಿದರು. ಐದಾರು ತರಹದ ತಂಡಗಳು. ಒಂದೊಂದು ತಂಡದಲ್ಲಿ ಸುಮಾರು ಇಪ್ಪತ್ತು ಜನ ಇದ್ದರು.

ಕ್ಯಾಂಟರ್ ಗಾಡಿನ ಯಲ್ಲ ಕವರ್ ಮಾಡಿ ಸ್ತಬ್ಧದೃಶ್ಯ (tableau) ಮಾಡಿಸಿದ್ದ. ಇಮಾಮ್ ಸಾಬಿದು ಮಟನ್ ಸಾಗಿಸೊ ಲಗ್ಗೇಜ್ ಅಟೋ ಸಹ ಸ್ತಬ್ಧದೃಶ್ಯಕ್ಕೆ ಬಳಸಿದ್ದ. ಮೈಕ್ ಸೆಟ್ ನಲ್ಲಿ ಬರೀ ಕನ್ನಡ ಹಾಡು ಹಾಕಿಸಿದ್ದ. ಪೆರೇಡ್ ಸುರು ಆಯ್ತು. ಕ್ಯಾಂಟರ್ ಗಾಡಿಗಳು ಮುಂದೆ... ಅದರ ಹಿಂದೆ left right ಅಂತ military ಗಳ ತರನೆ ತಂಡಗಳು ಹೋದವು. ಕೈನಲ್ಲಿ plastic gun ಬ್ಯಾರೆ ಇದ್ದವು. ಸಾಸಕರು ಗೌರವ ವಂದನೆ ಸ್ವೀಕರಿಸಿದರು. ಮುಗಿತೇನಲಾ ಕೈ ನೊಯ್ತದೆ salute ಮಾಡಿ ಅಂತಿದ್ದರು. ಮೈಕಲ್ಲಿ ಮಾತ್ರ ನಾವಾಡುವ ನುಡಿಯೆ ಕನ್ನಡ ನುಡಿ ಹಾಡು ಬತ್ತ ಇತ್ತು....ಇಮಾಮ್ ಸಾಬಿ ಲಗ್ಗೇಜ್ ಅಟೋ ಅರ್ಧದಲ್ಲಿ ಮದ್ಯ ಕೆಟ್ಟು ಹೊಯ್ತು...ಅಮ್ಯಾಕೆ ತಳ್ಳಿ ಸೈಡಿಗೆ ನಿಲ್ಲಿಸಿದರು. ಸಾಸಕರು ಬಾವುಟ ಹಾರಿಸಿದರು. ಕಳ್ ಮಂಜ ಒಂದು ಗನ್ ತಕ್ಕಂಡು ಆಕಾಶಕ್ಕೆ ಮೂರು ಗುಂಡು ಹಾರಿಸಿದ. ಒಂದು bullet just miss ಆಗಿ ತೆಂಗಿನಮರಕ್ಕೆ ಬಿತ್ತು.

ಯಲ್ಲ ಆದಮ್ಯಾಕೆ ಸಾಸಕರು ಕಳ್ ಮಂಜನಿಗೆ ಕಾಸ್ ಕೊಟ್ಟು ಹೊಳಟರು. ಮಂಜ ಯಲ್ಲರಿಗೂ ಕಾಸ್ ಹಂಚಿ ಕಳಿಸಿದ. ಸಿವಮ್ಮನ ಹೋಟೆಲ್ ತವ ಯಲ್ಲ ಜನ ಕೇಳಿರು. military ನಾ ಎಲ್ಲಿಂದ ಕರೆಸಿದ್ಯಲಾ ಅಂತ...ಆಗ ಬಾಯಿ ಬುಟ್ಟ...ಲೇ ಬಡ್ಡೆತವ...ಅವರು military ಅಲ್ಲ ಕನ್ಲಾ...ಬೆಂಗಳೂರಲ್ಲಿ security ಕೆಲಸ ಮಾಡೋರು ಕನ್ಲಾ....ಸಿದ್ಲಿಂಗು ಆಫೀಸ್ ತವ ಸುತ್ತ ಮುತ್ತ ಯಲ್ಲ security gaurd ಗಳಿಗೆಲ್ಲಾ ರಜೆ ಇತ್ತಲ್ಲ ಅದಕ್ಕೆ ಅವರನ್ನೆಲ್ಲಾ ಕರೆಸಿದ್ದೆ uniform ಹಾಕಂಡ್ plastic gun ತಕ್ಕಂಡ್ ಬನ್ನಿ ಅಂತ. ಮತ್ತೆ ನೀನು ಗುಂಡು ಹಾರಿಸಿದ್ದು ಅಂದರು....ಅದಾ ಪೊಲೀಸ್ ಟೇಸನ್ ತವ ಬಾಗಿಲಲ್ಲಿ gunman ದು ಕನ್ಲಾ.....ನೆನ್ನೆ ರಾತ್ರಿ night duty ಮಾಡೋನು ತೂಕಡಿಸುವಾಗ ಹೊಡಕೊಂಡು ಬಂದೆ ಅಂದ.

ವಿಶೇಷ ಸುದ್ದಿ ಅಂತ TV9 ನವರು ತೋರಿಸುತ್ತ ಇದ್ದರು. ಕಳ್ ಮಂಜನಿಗೆ ಸಾಸಕರ ಫೋನ್ ಬಂತು....ಲೇ ಬಡ್ಡೆತ್ತದೆ ಬಾವುಟ ಯಾವುದಲಾ ಕಟ್ಟಿದೆ....ನಮ್ಮ ದೇಸದ್ದು ಅಲ್ವೇನಲಾ ಕಟ್ಟೋದು ಅಂದರು....ಅಣ್ಣೊ ಅದು ನಮ್ಮ ದೇಶದ್ದೆ ಅಂದ ಮಂಜ.....ಲೇ ಅದು ಹಷಣ ಕೆಂಪು ಕನ್ನಡ ಬಾವುಟ ಕಟ್ಟಿದಲ್ಲೊ...TV9 ಅದೆ ತೋರಿಸಿ ರುಬ್ಬುತ ಅವರೆ ಅಂದರು ಸಾಸಕರು...

ಅಣ್ಣೊ ನೀವೆ ಹೇಳಿರಿ ಗಣ "ರಾಜ್ಯೋತ್ಸವ" ಆಚಾರಣೆ ಮಾಡಮ ಅಂತ ಅದುಕ್ಕೆ ನಾನು ಆ ಬಾವುಟ ಕಟ್ಟಿಸಿದ್ದೆ ಅಂದ.
ಥೂ ನಿನ್ನ ಮಕ್ಕೆ ಕಾದ ಯಣ್ಣೆ ಉಯ್ಯ....
Posted by ಸವಿಗನಸು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು