fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ನವೆಂಬರ್ 01, 2015

ಕನ್ನಡ ರಾಜ್ಯೋತ್ಸವ

            ಸಿದ್ಲಿಂಗು ಫೋನ್ ಬಂತು ಕಳ್ ಮಂಜನಿಗೆ...ಮಂಜು, ನನ್ನ ಆಫೀಸಲೊಬ್ಬ ಸೆಲ್ವ ಅಂತ ಇದ್ದಾನಲ್ಲ, ಅವರ ಊರಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತಾರಂತೆ. ಒಂದು ಕಿತ ನಮ್ಮೂರಿಗೆ ಬಂದಿದ್ದಾಗ ನಿಮ್ಮೆಲ್ಲರ ಕಾರ್ಯಕ್ರಮ ನೋಡಿ ಖುಸಿ ಆಗಿ ಈಗ ಅವರ ಊರಲ್ಲಿ ನೀವೆ ಕಾರ್ಯಕ್ರಮ ಕೊಡಬೇಕೆಂದು ಕೇಳಿದ್ದಾನೆ, ನೀವೆಲ್ಲಾ ಸೇರಿ ಏನಾರೂ ಮಾಡ್ರಲಾ ಅಂದ. ಆಯ್ತಣ್ಣೊ ಯಲ್ಲರೂ ಪ್ರಾಕ್ಟೀಸು ಮಾಡ್ತೀವಿ ಅಂತೇಳಿ ಯಲ್ಲರಿಗೂ ಹೇಳಿದ. ಈ ಕಿತ ಹೆಂಗಸರು ಸಹ ಮಾಡಲಿ ಅಂತ ಅವರು ಸಹ ಡ್ಯಾನ್ಸು, ಡೊಳ್ಳು ಕುಣಿತ, ವೀರಗಾಸೆ ಯಲ್ಲ ಪ್ರಾಕ್ಟೀಸು ಮಾಡಿರು.


             ರಾಜ್ಯೋತ್ಸವ ಡೇಟ್ ಪಿಕ್ಸ್ ಆಯ್ತು. ಕಳ್ ಮಂಜನಿಗೆ ಸಿದ್ಲಿಂಗು ಪೋನ್ ಬಂತು. ಸೆಲ್ವ ಅವರ ಊರು ಮೆಟ್ಟುಪಾಳ್ಯ ಅಂತ ತಮಿಳುನಾಡಲ್ಲಿ ಕನ್ಲಾ, ಚೆನ್ನೈನಿಂದ ೬೦ ಕಿಲೋಮೀಟರ್ . ಚೆನ್ನೈಗೆ ನೀವೆ ಟಿಕೇಟ್ ತಕ್ಕಂಡು ಹೋದ್ರೆ ಅಲ್ಲಿಂದ ಅವರು ಕರೆದುಕೊಂಡು ಹೋಗ್ತಾರೆ. ಆಮ್ಯಾಕೆ ಅಲ್ಲಿ ಟಿಕೇಟ್ ದುಡ್ಡು ಯಲ್ಲಾ ಕೊಡ್ತಾರಂತೆ. ಅಲ್ಲಿ ಊಟ ತಿಂಡಿ ರೂಮು ಯಲ್ಲಾ ಅವರೆ ನೋಡಿಕೊಂತಾರೆ. ಭಾನುವಾರ ಬೆಳ್ಳಿಗೆ ಕಾರ್ಯಕ್ರಮ. ಶನಿವಾರ ಬೆಳ್ಳಿಗೆ ೮ ಘಂಟೆಗೆ ಚೆನ್ನೈ ಬಸ್ ಸ್ಟಾಂಡಿನಿಂದ ನಿಮ್ಮನ್ನು ಕರೆದುಕೊಂಡು ಹೋಗ್ತಾರೆ. ಬಿಳಿ ಬಣ್ಣದ ಟಿಟಿ ಗಾಡಿ ಬತ್ತದೆ. ನೀವೆಲ್ಲಾ ಶುಕ್ರವಾರ ರಾತ್ರಿನೇ ಹೊರಟು ಬುಡ್ರಿ ಅಂದ ಸಿದ್ಲಿಂಗು.



             ಆಯ್ತಣ್ಣೊ ಅಂತ ಕಳ್ ಮಂಜ ಯಲ್ಲರಿಗೂ ಹೇಳಿದ. ಯಲ್ಲರ ಹತ್ತಿರ ನೋಡ್ರಲಾ ನಿಮ್ಮ ಕಾರ್ಯಕ್ರಮನಾ ಹೊರನಾಡಲ್ಲಿ ಮಾಡುಸ್ತ ಇದ್ದೀನಿ. ಖರ್ಚು ಸ್ಯಾನೆ ಬತ್ತದೆ. ಆಮ್ಯಾಕಿಂದ ನೀವು ಪೇಮಸ್ ಆಗ್ತೀರಾ...ಇನ್ನ ಹೆಚ್ಚು ಕಾರ್ಯಕ್ರಮ ಯಲ್ಲಾ ಸಿಗ್ತದೆ...ಈಗ ಖರ್ಚಿಗೆ ಅಂತ ನೀವೆಲ್ಲಾ ನಾಲಕು ಸಾವಿರ ಮತ್ತೆ ಡ್ರಸ್ಸಿಗೆ ಒಂದು ಸಾವಿರ ಯಲ್ಲ ಐದು ಸಾವಿರ ಆಯ್ತದೆ ಅಂತ ಹತ್ತು ಜನಗಳಿಂದ ಐವತ್ತು ಸಾವಿರ ಕಿತ್ತ. ಅದ್ರಾಗೆ ೮ ಜನ ಹೆಂಗಸರು ಇಬ್ಬರು ಗಂಡಸರು ಇದ್ದರು.



             ಪಕ್ಕದೂರಲ್ಲಿ ಜಲಗೇರಮ್ಮನ ದೇವಸ್ಥಾನ ಇತ್ತು. ಅಲ್ಲಿ ಹೋಗಿ ಪೂಜಾರಿಗೆ ಐನೂರು ರೂಪಾಯಿ ಕೊಟ್ಟು ಭಕ್ತಾದಿಗಳು ಅಮ್ಮನವರಿಗೆ ಉಡಿಸುವ ಸೀರೆ ಗಳಲ್ಲಿ ಒಂದೆ ತರಹದ ಏಂಟು ಹರಿಶಿಣ ಬಣ್ಣದ ಕೆಂಪು ಬಾರ್ಡರ್ ಸೀರೆ ತಕ್ಕಂಡು ಬಂದ. ಗಂಡಸರಿಗೆ ಒಂದೊಂದು ಹಳದಿ ಜುಬ್ಬ ಕೆಂಪು ಪೈಜಾಮ ತಂದು ಯಲ್ಲರಿಗೂ ಕೊಟ್ಟ. ಯಲ್ಲ ಸೇರಿ ಒಂದು ಸಾವಿರ ಆಯ್ತು. ಶುಕ್ರವಾರ ಯಲ್ಲರನ್ನು ಅದೇ ಡ್ರಸ್ ನಲ್ಲಿ ಬರಬೇಕು ಅಂತ ಹೇಳಿದ್ದ. ಯಲ್ಲರೂ ಬಸ್ ಹತ್ತಿದರು. ನಾವೆಲ್ಲಾ ಕರ್ನಾಟಕ ರಕ್ಷಣ ವೇದಿಕೆಯವರು ಚಳುವಳಿಗೆ ಹೊಂಟಿದ್ದೀವಿ ಅಂತೇಳಿ ಬಡ್ಡಿಮಗ ಬಸ್ಸಿನಲ್ಲೂ ಟಿಕೇಟ್ ತೆಗೆದುಕೊಳ್ಳಲಿಲ್ಲ.


             ಹೆಂಗೊ ಬೆಳ್ಳಿಗೆ ಏಳು ಘಂಟೆಗೆ ಚೆನ್ನೈ ತಲುಪಿರು. ಯಲ್ಲರೂ ಅಣ್ಣ ಹೊಟ್ಟೆ ಹಸಿವು ಅಂದರು. ತಡೀರಲಾ ಕಾರ್ಯಕರ್ತರು ಬತ್ತಾರೆ ಅಂತ ತಿಂಡಿನೂ ಕೊಡಿಸಲಿಲ್ಲ. ಅಮ್ಯಾಕೆ ಅವರೆ ಒಂದೊಂದು ದ್ವಾಸೆ ತಿಂದು ಕಳ್ ಮಂಜನಿಗೂ ಒಂದು ದ್ವಾಸೆ ಕೊಡಿಸಿದ್ರು. ಅಣ್ಣೊ ವಿಸರ್ಜನೆ ಅಂದ್ರು...ಕೈನಲ್ಲಿ ಕಲ್ಲು ಹಿಡಿದುಕೊಂಡ್ರೆ ತಡೆದುಕೊಳ್ಳಬಹುದು ಅಂತ ಐಡಿಯಾ ಬ್ಯಾರೆ ಕೊಟ್ಟ. ಕೊನೆಗೂ ಏಂಟಾಯಿತು. ಇವರಿಗೆ ತಮಿಳು ಭಾಸೆ ಬ್ಯಾರೆ ಬರಕ್ಕಿಲ್ಲ. ಒಂದು ಬಿಳಿ ಟಿಟಿ ಗಾಡಿ ಸ್ಲೋ ಮಾಡಿದ. ಇವರನ್ನೆ ನೋಡ್ತಾ ಇದ್ದ ಹೆಂಗೆ ಪೊಣೊ ಅಂದ... ಪೋಗ್ರಾಮ್, ಪೋಗ್ರಾಮ್ ಅಂದ. ವಾಂಗೊ ಅಂತ ಗಾಡಿಗೆ ಹತ್ತಿಸಿಕೊಂಡ ಯಲ್ಡು ಘಂಟೆ ಆದಮ್ಯಾಕೆ ಇಳಿಸಿದ.


             ಇಳಿದು ನೋಡುತ್ತಾರೆ. ದೊಡ್ಡ ದೇವಸ್ಥಾನ. ಎಲ್ಲ ಹಷಣ ಸೀರೆ ಉಟ್ಕೊಂಡಿರೊ ಜನ ಸುತ್ತ ಮುತ್ತ... ಐದು ಸಾವಿರ ರೂಪಾಯಿ ಕೇಳಿದ ಡ್ರೈವರ್. ಮಂಜ ಕೊಡಕಿಲ್ಲ ಅಂತ ಕ್ಯಾತೆ ತೆಗೆದ. ಹೆಂಗಸರೆಲ್ಲಾ ಹಳದಿ ಸೀರೆ ಗಂಡಸರು ಹಳದಿ ಜುಬ್ಬನಲ್ಲಿ ಇದ್ದಿದಕ್ಕೆ ಡ್ರೈವರ್ ಓಂ ಸಕ್ತಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ. ಕೊನೆಗೆ ಮಾತಾಡೊಕೆ ಭಾಸೆ ಬರದೆ ಮಂಜ ದುಡ್ಡು ಕೊಟ್ಟ. ಬೋರ್ಡು ಓದೋಣ ಅಂದ್ರೆ ಯಲ್ಲ ಕಡೆ ಜಿಲೀಬಿ ಅಕ್ಷರ. ಕೊನೆಗೆ ಸಿದ್ಲಿಂಗುಗೆ ಫೋನ್ ಮಾಡಿ ಮೆಟ್ಟುಪಾಳ್ಯ ತಲುಪಿ ಕಾರ್ಯಕ್ರಮ ಮಾಡಿರು. ಊರಿಗೆ ಬತ್ತಿದ್ದಂಗೆ ಯಲ್ಲರೂ ಕಳ್ ಮಂಜನ್ನ ನಂಬಿ ಮೆಟ್ಟುಪಾಳ್ಯಕ್ಕೆ ಹೋದವಲ್ಲ ನಾವು ಮೆಟ್ ನಾಗೆ ಹೊಡ್ಕೊಬೇಕು ಅಂತ ಅವನಿಗೆ ನಾಲಕ್ಕು ಇಕ್ಕಿ ಮಿಕ್ಕ ಕಾಸ್ ಕಿತ್ಕೊಂಡರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.