ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಆಗಸ್ಟ್ 31, 2020

ನಾ ಆಡುವ ನುಡಿಯು ಕನ್ನಡ

ಕನ್ನಡ ಕನ್ನಡ ಕನ್ನಡ
ನಮ್ಮಯ ಭಾಷೆಯು ಕನ್ನಡ|
ಎಕ್ಕಡ ಎನ್ನಡ ಏತಕೆ 
ಆಡಲು ಸಾಲದೇ ಕನ್ನಡ ||ಪಲ್ಲವಿ||

ನಾ ಆಡುವ ನುಡಿಯು ಕನ್ನಡ
ನಾ ಹಾಡುವ ಹಾಡು ಕನ್ನಡ|
ನಾ ಬಾಳುವ ನಾಡು ಕನ್ನಡ
ನಾ ಉಸಿರಾಡುವ ಗಾಳಿಯು ಕನ್ನಡ||೧||

ಕನ್ನಡವೆನೆ ಕುಣಿದಾಡುವೆನು
ಕನ್ನಡವೆನೆ ಕೂಗಾಡುವೆನು|
ಕನ್ನಡ ನಾಡಲ್ಲೆ ಮೆರೆಯುವೆನು
ಕನ್ನಡ ಮಣ್ಣಲ್ಲೆ ಮಡಿಯುವೆನು||೨||

ನಮ್ಮಯ ತಾಯಿಯು ಕನ್ನಡ
ನಮ್ಮಯ ನುಡಿಯು ಕನ್ನಡ|
ನಮ್ಮಯ ನಾಡೇ ಕನ್ನಡ
ನಮ್ಮಯ ನೆಲೆಯೆ ಕನ್ನಡ||೩||

ಕುವೆಂಪು ಬರೆದ ಕನ್ನಡ
ರಾಜಣ್ಣ ಹಾಡಿದ ಕನ್ನಡ|
ಕರುನಾಡಿನ ಜನ ನುಡಿದ ಕನ್ನಡ
ನಮ್ಮಯ ಬದುಕೆ ಕನ್ನಡ||೪||

ಜನಮನ ತಣಿಸಿದ ಕನ್ನಡ
ತನುಮನ ಬಣ್ಣಿಸಿದ ಕನ್ನಡ|
ಶಾಸ್ತ್ರೀಯಪಟ್ಟ ಧರಿಸಿದ ಕನ್ನಡ
ಧರೆ ಏರಿದ ಭಾಷೆಯು ಕನ್ನಡ||೫||

ದೊರೆಗಳು ಆಳಿದ ಕನ್ನಡ
ಕವಿಗಳು ಹೊಗಳಿದ ಕನ್ನಡ|
ರವಿ ಸೂಸಿದ ಕಿರಣವೆ ಕನ್ನಡ
ಕನ್ನಡ ಕಸ್ತೂರಿ ಕನ್ನಡ||೬||

ಬೆಳದಿಂಗಳು ಉಣಿಸಿದ ಕನ್ನಡ
ಕಾವೇರಿ ತಣಿಸಿದ ಕನ್ನಡ|
ಶ್ರೀಗಂಧ ಸುಗಂಧ ಕನ್ನಡ
ಕರುನಾಡೇ ಕೂಗಿದ ಕನ್ನಡ||೭||

ವಿಜಯನಗರ ಐಸಿರಿಯ ಕನ್ನಡ
ಹಚ್ಚ ಹಸಿರಿನ ಕನ್ನಡ|
ಶಿಲ್ಪಕಲೆಗಳ ಕನ್ನಡ
ನಮ್ಮಯ ಹೆಮ್ಮೆಯ ಕನ್ನಡ||೮||

ಕೋಗಿಲೆ ಹಾಡಿದ ಹಾಡು ಕನ್ನಡ
ನವಿಲು ಮಾಡಿದ ನರ್ತನೆ ಕನ್ನಡ|
ನಾ ಮೆಟ್ಟುವ ನೆಲವೇ ಕನ್ನಡ
ನಾ ಹುಟ್ಟುವ ಮಡಿಲೇ ಕನ್ನಡ||೯||
ಕೃಪೆ : ==> ಪ್ರಸನ್ನK

ಶನಿವಾರ, ಆಗಸ್ಟ್ 22, 2020

ಅಮ್ಮನಾಗುವ ಪರಿ..

ಕನಸುಗಳು ಸುರುಳಿಯಂತೆ ಸುತ್ತಿಕೊಳ್ಳಲು ನಾಂದಿ
ತಿಂಗಳ ಹೊರಗು ಆಗದಿರೆ ಅವಳಿಗೆಲ್ಲಿಲ್ಲದ ನಲಿವು
ಬರುವ ಕಂದನ ಇನ್ನಿಲ್ಲದ ಕಲ್ಪನೆಯಲ್ಲೆ ನೆನೆನೆನೆದು.

ಒಳಗೊಳಗೆ ಹರ್ಷ ಮುಸಿ ಮುಸಿ ನಗು
ಕಣ್ಣಲ್ಲಿ ಮಿಂಚು ಕೊಂಚ ನಾಚಿಕೆ ಬಿನ್ನಾಣದ ಬೆಡಗು
ಮೊಳಕೆಯೊಡೆಯುತ್ತಿರುವ ಸಂಗತಿ ಗಂಡನಿಗೆ ಹೇಳಲು.

ಮೌನ ಗೌರಿಯ ಬಂಡವಾಳ ಅದಾಗೆ ತಿಳಿಯಲು
ಕೋಣೆಯಿಂದೀಚೆ ಬರದಷ್ಟು ಕ್ಲಿಷ್ಟ ಗಳಿಗೆ
ಅನುಭವದ ಸುಃಖ ಅನುಭವಿಸಿದವರಿಗಷ್ಟೇ ಗೊತ್ತು

ಒಂದೊಂದು ಕ್ಷಣ,ದಿನ,ತಿಂಗಳು ದೊಡ್ಡ ಪ್ರಾಜೆಕ್ಟು
ಸುಸ್ತು ಸಂಕಟ ಕಿರಿ ಕಿರಿ ದೇಹ ಸಖತ್ ಹೈರಾಣ
ಎಲ್ಲವನ್ನೂ ಸಹಿಸುವಳು ಬರುವ ಕಂದಮ್ಮನಿಗಾಗಿ.

ನವ ಮಾಸ ನವ ಯುಗದಂತೆ ನಗು ನಗುತ ಕಳೆದು
ಎಲ್ಲೆ ಮೀರಿದ ಅಸಾಧ್ಯ ನೋವಿನೊಡೆತವ ಮುಕ್ಕಿ ಮುಕ್ಕಿ
ಭುವಿಗೆ ತನ್ನುಧರದ ಛಾಯೆ ನೀಡುವಳು ತಾಯಿಯ ಪಟ್ಟ ಧರಿಸಿ.

ಕಂದನ ಆಕ್ರಂದನ ತನುಮನದಲ್ಲಿ ಖುಷಿಯ ರಿಂಗಣ
ತೆಕ್ಕೆಯಲಿರಿಸಿ ಲೊಚಗುಟ್ಟುವ ಬಾಯಿಗೆ ತನ್ನೆದೆಯನೊತ್ತಿ ಹರಿಸುವಳು ಅಮೃತ
ಮಾತೃತ್ವದ ಅಮಲಿನ ಸುಃಖ ನಖಶಿಕಾಂತ ಬೆರಗಲಿ.

ಕನಸು ಮನಸಿನಲ್ಲೂ ಕಂದನದೆ ಯೋಚನೆ ಕಣಕಣದಲೆಲ್ಲ
ಒಂದರೆಗಳಿಗೆ ಬಿಟ್ಟಿರಲಾಗದಷ್ಟು ಕಕ್ಕುಲತೆ ತನು ಮನದ ತುಂಬ
ಜೀವ ತೇದು ಬೆಳೆಸುವಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಯಾರಿಹರು ಸರಿಸಾಟಿ!

ತನ್ನೆತ್ತರಕೆ ಕಂದ ಬೆಳೆದು ನಿಂತರೂ ಇನ್ನೂ ಹಸು ಗೂಸು
ಕಂಡವರು ದೊಡ್ಡವರಾದರೆಂದರೆ ಹುಸಿ ಮುನಿಸು ತೋರುವಳು
ತನಗೆ ಮಾತ್ರ ವಯಸ್ಸಾಯಿತೆಂದು ಚಿಕ್ಕ ಮುಖ ಮಾಡಿ ಹಲುಭುವಳು ಕಾಲನ ಕರೆಗೆ.

ಮೊಳಕೆಯೊಡೆಯುವ ಮೊದಲೆ ಕನಸ ಕಟ್ಟುವ ಅಮ್ಮ
ನನಸಾದ ಕನಸ ಸೌದದಲಿ ಕಂದನ ಕೂಡಿಸಿ ಬೀಗುವ ಪರಿ
ನಿಸ್ವಾರ್ಥ ತೇಜೋಮಯಿಗೊಂದೇ ಸಾಧ್ಯ ಅವಳೆ ಅಮ್ಮನೆಂಬ ಅಣಿ ಮುತ್ತು

ಗಣೇಶನಿಗಿರುವ ವಿವಿಧ ಹೆಸರುಗಳು

         ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. ಪ್ರತಿ ಹೆಸರು ಬೇರೆ ಬೇರೆ ಅರ್ಥವನ್ನು ಹೊಂದಿದೆ. ಗಣೇಶ, ಗಣಪತಿ, ವಿನಾಯಕ ಎಂಬುದರ ಜೊತೆಗೆ ಗಣೇಶನಿಗಿರುವ ಇತರ ಹೆಸರುಗಳಲ್ಲಿ ಕೆಲವು ಈ ಕೆಳಗಿನಂತಿವೆ..
  1. ಅಮೇಯ (अमेय) - ಅಂತ್ಯವಿಲ್ಲದವನು.
  2. ಅನಂಗಪೂಜಿತ (आनंगपूजीता) - ಆಕಾರವಿಲ್ಲದವನು.
  3. ಓಂಕಾರ (ॐ कार) - ಓಂ ಆಕಾರದಲ್ಲಿರುವ ಶರೀರವುಳ್ಳವನು.
  4. ಬಾಲಚಂದ್ರ (बालचंदृ) - ಚಂದ್ರನನ್ನು ತಲೆಯಲ್ಲಿ ಧರಿಸಿದವನು.
  5. ಚಿಂತಾಮಣಿ (चिंतामणि) - ಚಿಂತೆಗಳನ್ನು ನಾಶಮಾಡುವವನು.
  6. ಗಜಕರ್ಣ (गजकर्ण) - ಆನೆಯ ಕಿವಿಯಂತೆ ಕಿವಿಯನ್ನು ಹೊಂದಿದವನು.
  7. ಗಜಾನನ (गजानन्) - ಆನೆಯ ತಲೆಹೊಂದಿದವನು.
  8. ಗಜವದನ (गजवदन्) - ಆನೆಯಂತೆ ಮುಖವುಳ್ಳವನು.
  9. ಗಜಾಧ್ಯಕ್ಷ (गणध्यक्शमा) - ಗಣಗಳ ಗುಂಪಿಗೆ ನಾಯಕನಾದವನು.
  10. ಗಣಪತಿ (गणपती) - ಗಣಗಳ ಒಡೆಯನಾದವನು.
  11. ಗಣನಾಯಕ ( गणनायक्) - ಗಣಗಳ ನಾಯಕ.
  12. ಏಕದಂತ (एकदंत) - ಒಂದೇ ದಂತವನ್ನು ಹೊಂದಿದವನು.
  13. ಲಂಬೋದರ (लंबोदर) - ದೊಡ್ಡ ಹೊಟ್ಟೆಯನ್ನು ಹೊಂದಿದವನು.
  14. ಮೂಷಿಕ ವಾಹನ (मूषिक वाहन) - ಇಲಿಯನ್ನು ವಾಹನವಾಗಿಸಿಕೊಂಡವನು.
  15. ಶೂರ್ಪಕರ್ಣ (शूर्पकर्ण) - ಅಗಲವಾದ ಕಿವಿಯುಳ್ಳವನು.
  16. ಸುಮುಖ (सुमुख) - ಸುಂದರವಾದ ಮುಖವುಳ್ಳವನು.
  17. ವಕ್ರತುಂಡ (वक्रतुंड) - ಮುರಿದ ದಂತವುಳ್ಳವನು (ಡೊಂಕಾದ ಸೊಂಡಿಲು ಉಳ್ಳವನು).
  18. ವಿಘ್ನಹರ್ತ (विघ्नहर्त) - ತೊಂದರೆಗಳನ್ನು ನಿವಾರಿಸುವವನು.
  19. ವಿಘ್ನ ವಿನಾಶಕ (विघ्न विनाशक) - ವಿಘ್ನಗಳನ್ನು ನಾಶಮಾಡುವವನು.
  20. ವಿಘ್ನೇಶ ಅಥವಾ ವಿಘ್ನೇಶ್ವರ ( विग्णेशवर) - ವಿಘ್ನಗಳನ್ನು ನಿವಾರಿಸುವವನು.
  21. ವಿಕಟ ( विकट) - ವಿಲಕ್ಷಣ ರೂಪವನ್ನು ಹೊಂದಿದವನು.
  22. ವಿನಾಯಕ (विनायक) - ವಿಘ್ನಗಳನ್ನು ನಿವಾರಿಸುವವನು.
  23. ವಿಶ್ವಧರ ( विश्वधर)     ಅಥವಾ ಜಗದೋದ್ಧಾರ ( जगदॊद्धार) - ಜಗತ್ತನ್ನು ಪಾಲಿಸುವವನು.
  24. ವಿಶ್ವವಂತ ( विश्ववंत)   ಅಥವಾ ಜಗನ್ನಾಥ ( जगन्नाथ) - ಜಗತ್ತಿಗೆ ಒಡೆಯ ಬೆನಕ.
  25. ಶ್ರೀ ಸಿದ್ಧಿ ವಿನಾಯಕ - ಅಪೇಕ್ಷೆಗಳನ್ನು ಈಡೇರಿಸುವವನು.

           ಆಕೃತಿಯಲ್ಲಿ ಚಿಕ್ಕದಾಗಿರುವ ಗಣಪತಿಯ ವಿಗ್ರಹವನ್ನು ಬಾಲ ಗಣಪತಿ, ಬಾಲ ಗಣೇಶ ಎಂದೂ ಕರೆಯಲಾಗುತ್ತದೆ.

                                             2/2

ಮಂಗಳವಾರ, ಆಗಸ್ಟ್ 18, 2020

ಗೂಗಲಿನ 12 ನೇ ಪುಟದ ವಿಚಿತ್ರ - TooSmall Mode

ಪುಟ ಲೋಡ್ ಆದ ನಂತರ, ಲೋಗೋ, ಸರ್ಚ್ ಬಾರ್, “ಸರ್ಚ್” ಮತ್ತು “ನಾನು ಅತಿಯಾದ ಭಾವನೆ” ಗುಂಡಿಗಳು, ಅವುಗಳು ಪುಟದಿಂದ ತೇಲುತ್ತಿರುವವರೆಗೂ ಅಥವಾ ನೀವು ಹುಡುಕಾಟವನ್ನು ಟೈಪ್ ಮಾಡಿ ಅಲ್ಲಿಗೆ ಬೀಟಿಂಗ್ ಅನ್ನು ಪಡೆಯುವವರೆಗೆ ಖುಗ್ಗುತ್ತವೆ.

 spn3187


1.. ಜಾಹೀರಾತು

2.ಜಾಹೀರಾತು