ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಜನವರಿ 31, 2017

ಕನ್ನಡ ನುಡಿ, ಕನ್ನಡ ತಾಯಿ, ಕನ್ನಡಿಗರು

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ
ಕರುನಾಡ  ನಾಡನುಡಿ,
ಕನ್ನಡಿಗರಿಗದು  ಕನ್ನಡಿ.
ಮಾತನಾಡಿದರದು  ಮುತ್ತಿನಂಗಡಿ,
ಅದುವೇ ನಮ್ಮ “ಕನ್ನಡ” ನುಡಿ.
ಮಾಣಿಕ್ಯವೀಣೆ  ಪಿಡಿದಿಹಳು  ಕೈಯಲಿ,
ಮಂದಹಾಸದ  ನಗುವಿಹುದು  ಮುಖದಲಿ,
ಕರೆದು  ಕೊಡುತಿಹಳು  ಅಭಯಹಸ್ತವನಿಲ್ಲಿ,
ಅವಳೇ  ನಮ್ಮ  “ಕನ್ನಡಾಂಬೆ”.
ನೆಲಸಿಹರು  ಕನ್ನಡನಾಡಿನಲಿ,
ನಡೆದಾಡುವರು  ದೇಶದೆಲ್ಲೆಡೆಯಲಿ,
ನಕ್ಕುನಲಿದಾಡುತಿಹರು  ಆ  ಹೊರನಾಡುಗಳಲಿ,
ಕನ್ನಡದ  ಕಂಪನು  ಕೋರೈಸುತಲಿ.
ಅವರೇ ನಮ್ಮ “ಕನ್ನಡಿಗರು”.
ಹಚ್ಚಿಸಿದರು ಕನ್ನಡದ ಹಣತೆಯನು,
ಬೆಳಗಿಸಿದರು ಕನ್ನಡದ ಬೆಳಕನು,
ಕೊಂಡಾಡಿದರು ಕನ್ನಡದ  ಕವಿಗಳನು,
ಅರ್ಪಿಸಿದರು  ಎಲ್ಲಡೆಯಲ್ಲೂ  “ಔದಾರ್ಯವನು”.
ಅವರೇ ನಮ್ಮ “ಕನ್ನಡಿಗರು”.                      

=> ಪ್ರಕಟಗೊಂಡಿದ್ದು  by daams(ತನು-ಮನ) ಈಗ ಮರು ಪ್ರಕಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು