ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಜುಲೈ 30, 2015

"ಎಪಿಜೆ ಅಬ್ದುಲ್ ಕಲಾಂ" ನಿಮಗೊಂದು ನನ್ನ ಸಲಾಂ

ಗಗನಕ್ಕೇರಿತು ಭಾರತದ ವರ್ಚಸ್ಸು
ಇದಕ್ಕೆ ಕಾರಣ ನಿಮ್ಮಲಿದ್ದ ತೇಜಸ್ಸು

ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಜ್ಞಾನದ ಬೋಧನೆಯಲಿ ನಿಮ್ಮಲಿ ಕಂಡೆ ಶ್ರದ್ದೆ
ನಿಮ್ಮ ಪ್ರಶಂಸೆಗಳನ್ನೂ ಕೇಳಿ ನಾ ಜಾರಿ ಬಿದ್ದೆ

ಶಿಕ್ಷಕ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ವಿಜ್ಞಾನ ಕ್ಷೇತ್ರದಲ್ಲಿ ನೀವು ಮಹಾಓಜ
ನಿಮ್ಮನು ಯುವಜನತೆ ಅನುಸರಿಸುವುದು ಸಹಜ

ವೈದ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಆಯಿತು ನಿಮ್ಮ ಸಹಾಯದಿಂದ ಉಪಗ್ರಹಗಳ ಉಡಾವಣೆ
ಅಂತರಿಕ್ಷದಲ್ಲಿ ಈಗಿದೆ ನಮ್ಮ ಉಪಗ್ರಹಗಳ ಒಂದು ದೊಡ್ಡ ಬಡಾವಣೆ

ಕ್ಷಿಪಣಿ ಮನುಷ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಕಲ್ಪವೃಕ್ಷ ದಂತೆ ನಿಮ್ಮ ಮನ
ಅಕ್ಟೋಬರ್ ೧೫ ವಿಶ್ವ ವಿದ್ಯಾರ್ಥಿ ದಿನ

ಸಾಮಾನ್ಯ ಮನುಷ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಅನುಮಾನವಿಲ್ಲದೆ ಎಲ್ಲರು ಸೂಚಿಸಿದರು ಸಮ್ಮತಿ
ಏಕೆಂದರೆ ನೀವು ಭಾರತ ಕಂಡ ವಿಶಿಷ್ಟವಾದ ರಾಷ್ಟ್ರಪತಿ

ಜನರ ರಾಷ್ಟ್ರಾಧ್ಯಕ್ಷ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ನಿಮ್ಮಂತವರು ಜನಿಸುವುದೇ ಒಮ್ಮೊಮ್ಮೆ
ಹಾಗಾಗಿ ಮರಳಿ ಬನ್ನಿ ಮತ್ತೊಮ್ಮೆ

ದೇವತಾ ಮನುಷ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

@ನಮ್ಮ ಮಿತ್ರ ವಿನೋದ ಪ್ರಭು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು