| ರಜೆಯ ಮಜ ಮುಗಿಯಿತು |
| ಶಾಲೆ ಶುರು ಆಯಿತು |
| ಜಿಟಿ ಜಿಟಿ ಮಳೆಯಲಿ ಛತ್ರಿ ಹಿಡಿದು |
| ಶಾಲೆಗೆ ಹೋಗಲು ಬಲು ಖುಷಿಯು |
| ಅಮ್ಮನು ಕಟ್ಟಿದ ತಿಂಡಿಯ ಡಬ್ಬಿ ಕೈಯಲಿ ಹಿಡಿದು |
| ಅಪ್ಪನು ತಂದ ಹೊಸ ಬ್ಯಾಗು ಹೆಗಲಿಗೆ ಹಾಕಿ |
| ಯುನಿಫಾರ್ಮ್ ಧರಿಸಿ |
| ಶಾಲೆಗೆ ಹೋಗೋಣ |
| ನಮ್ಮ ಶಾಲೆಯ ಸುಂದರ |
| ಇದುವೆ ದೇವರ ಮಂದಿರ |
| ವಿದ್ಯೆ ನೀಡಿ ಬುದ್ಧಿ ಕೊಡುವ |
| ಗುರುವೆ ನಮ್ಮಯ ದೇವರು |
| ಅವರ ಪಾದಕೆ ಶಿರವ ಬಾಗಿಸಿ |
| ಭಕ್ತಿಯಿಂದಲಿ ನಮಿಸೋಣ |
| ಪಾಠ ಮುಗಿಸಿ ಆಟ ಆಡಲು |
| ಮೈದಾನಕ್ಕೆ ಜಿಗಿಯೋಣ |
| ಶಾಲೆಯ ಕೈ ತೋಟದಲ್ಲಿ |
| ಹೂವು ಹಣ್ಣನು ಬೆಳೆಸೋಣ |
| ನಿತ್ಯವು ಹಸಿರು ಕಾಣುವಂತೆ |
| ದಿನವೂ ನೀರುಣಿಸೋಣ |
| ಗುರುಗಳು ಕಲಿಸಿದ ಪಾಠವ ಕಲಿತು |
| ಅಮ್ಮನ ಮಡಿಲ ಸೇರೋಣ |
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ
ಶನಿವಾರ, ಸೆಪ್ಟೆಂಬರ್ 20, 2014
ಶಾಲೆಗೆ ಹೋಗೋಣ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.