ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಕಾಲ: 1160
ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160.
ಕಳ್ಳತನ ಮಾಡುತಿದ್ದ ಪೆದ್ದಿ ಉರಿಲಿಂಗದೇವನ ಶಿಷ್ಯನಾಗಿ ಅವನ ನಂತರ ಅದೇ ಪೀಠದ ಮುಖ್ಯಸ್ಥನಾದ. ಅಸ್ಪೃಶ್ಯ ಜನಾಂಗದ ಪೆದ್ದಿ ವಿದ್ವಾಂಸನಾಗಿ, ಅನುಭಾವಿಯಾಗಿ, ಮಠದ ಮುಖ್ಯಸ್ಥನೂ ಆದದ್ದು ಆ ಕಾಲದ ಮಹತ್ವದ ಸಂಗತಿ. ಈತನ 366 ವಚನಗಳು ದೊರೆತಿವೆ. ಕರ್ನಾಟಕದಲ್ಲಿರುವ ಅಸ್ಪೃಶ್ಯ ಜನಾಂಗಗಳಿಗೆ ಸೇರಿದ ಮಠಗಳನ್ನು ಉರಿಲಿಂಗಪೆದ್ದಿಗಳ ಮಠವೆಂದೇ ಕರೆಯುವ ರೂಢಿ ಇದೆ.
ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ
ಎನಗೆ ಸಾಲೋಕ್ಯಪದವಯ್ಯಾ.
ನಿಮ್ಮ ಶರಣರ ಅರ್ಚನೆ ಪೂಜೆಯೇ
ಎನಗೆ ಸಾಮೀಪ್ಯಪದವಯ್ಯಾ.
ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ
ಎನಗೆ ಸಾರೂಪ್ಯಪದವಯ್ಯಾ.
ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ
ಎನಗೆ ಸಾಯುಜ್ಯಪದವಯ್ಯಾ.
ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.