ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಏಪ್ರಿಲ್ 24, 2023

ಮಕ್ಕಳ ಬೇಸಿಗೆಯ ರಜೆ (children's Summer holidays)

>>> spn3187 <<<

ಪರೀಕ್ಷೆಗಳು ಮುಗಿದು 
ಆಟಕ್ಕಾಗಿ ಉತ್ಸುಕ ಬಾಲಕರು,

ಬೇಸಿಗೆ ಶಿಬಿರಗಳಿಗೆ ಕಳುಹಿಸಿ 
ಕೈ ತೊಳೆವ ಪಾಲಕರು,

ಮಕ್ಕಳ ಜೊತೆಯಲಿ 
ಒಡನಾಟವಿರದ ತಂದೆತಾಯಿ,

ಅದಕೆಂದೆ ಮಕ್ಕಳಾಗಿಹರು 
ಪುಸ್ತಕದ ಬದನೆಕಾಯಿ.. 
                  https://t.me/spn3187/42706 )                          
█▓▒▒░░░⮊⯮ ಕೃಪೆ: 🙶@ಎನ್.ಕೆ.ಪಾಟೀಲ🙷 ⮈░░░▒▒▓█

ಶುಕ್ರವಾರ, ಏಪ್ರಿಲ್ 21, 2023

ಮತದಾನ ಜಾಗೃತಿ ಅಭಿಯಾನ (Voting awareness campaign)

ಒಂದೂರಿನ ಚುನಾವಣೆಯಲ್ಲಿ ಸ್ಪರ್ಧಿಗಳು

1) ನೀರಿನ ಲೋಟ 
2) ವಜ್ರ ಖಚಿತ ಉಂಗುರ 
ನೀರಿನ ಲೋಟ :
ದಿನ ಬಳಸುವ ವಸ್ತುವೆಂದು ಎಲ್ಲರಿಗೂ ಒಲವಿತ್ತು....

ವಜ್ರ ಖಚಿತ ಉಂಗುರ :
ಆಗ ಬಂದ ವಜ್ರ ಖಚಿತ ಉಂಗುರ ತಾನೂ ಸ್ಪರ್ಧೆಗೆ ನಿಂತಿತು..
ಚಿನ್ನದ ವ್ಯಾಪಾರಿಗಳು ಚಿನ್ನವನ್ನು ನೋಡಿದರು..
ವಜ್ರದ ಗಣಿಯ ಕಾರ್ಮಿಕರು ತಾವೇ ನಿಂತಂತೆ ಸಂಭ್ರಮಿಸಿದರು...
ನಾರಿಯರು ಅದನ್ನು ಧರಿಸಿದಷ್ಟೇ ಆನಂದಿಸಿದರು..

ಲಿತಾಂ@spn3187

ವಜ್ರ ಖಚಿತ ಉಂಗುರ ಗೆದ್ದಿತ್ತು,

ಲೋಟ ಠೇವಣಿ ಕಳೆದುಕೊಂಡಿತ್ತು.




ವಾರ ಕಳೆಯಿತು.......
       ಉಂಗುರ ಬ್ಯಾಂಕಿನ ತಿಜೋರಿ ಸೇರಿತು. ಜನರು ಹುಡುಕಾಡಿದರೂ ಯಾರ ಕೈಗೆ ಸಿಗಲಿಲ್ಲ... ಬಾಯಾರಿತೆಂದು ಜನರಿಗೆ ನೀರು ಕುಡಿಯುವುದಕ್ಕಾಗಿ ಲೋಟ ಮುಟ್ಟಲು ಮನಸ್ಸಿಲ್ಲ...

( ವ್ಯಕ್ತಿ ಯಾರೇ ಇರಲಿ, ನಿಸ್ವಾರ್ಥದಿಂದ ಜನರಿಗೆ ಸೇವೆ ಮಾಡುವವರನ್ನು ಆಯ್ಕೆ ಮಾಡಿ.... )

ಮಂಗಳವಾರ, ಏಪ್ರಿಲ್ 18, 2023

ಗೂಗಲಿನ 32 ನೇ ಪುಟದ ವಿಚಿತ್ರ - ಸಮಯ


Google ನಲ್ಲಿ ಟೈಪ್ ಮಾಡಿ: "Time " ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ.  ನಂತರ ಗೂಗಲ್ ಹುಡುಕಾಟ ಫಲಿತಾಂಶದಲ್ಲಿ ಪ್ರಸ್ತುತ ನಿಮ್ಮ ಸಮಯದ ಮಾಹಿತಿ ತಿಳಿಸುತ್ತದೆ. ಇದೇ ಗೂಗಲ್ ನ ಇನ್ನೊಂದು ವಿಶೇಷ ಪುಟ....

ಭಾನುವಾರ, ಏಪ್ರಿಲ್ 16, 2023

ಮದುವೆಯ ಆ ಮೂರು ಗಂಟು

     ಸಂಪ್ರದಾಯದ ಮದುವೆಯ ಸಂದರ್ಭದಲ್ಲಿ ತಾಳಿ ಕಟ್ಟುವ ಸಂಪ್ರದಾಯ ಬಹಳ ವಿಶೇಷ. ಮದುವೆ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ತಾಳಿ ಕಟ್ಟುವ ಶಾಸ್ತ್ರವಿರುತ್ತದೆ. ತಾಳಿಯನ್ನು ಮದು ಮಗಳಿಗೆ ಕಟ್ಟುವ ಮುನ್ನ, ಅದನ್ನು 3 (ಮೂರು) ಅಥವಾ 5(ಐದು) ಮುತ್ತೈದೆಯರು ಮುಟ್ಟಿ ಹರಸುತ್ತಾರೆ. 'ಮದುಮಗಳು ಈ ತಾಳಿಯನ್ನು ಕಟ್ಟಿಸಿಕೊಂಡು, ನೂರ್ಕಾಲ ಸುಖವಾಗಿ ಬಾಳಲಿ, ನೆಮ್ಮದಿಯಿಂದ ಸಂಸಾರ ನಡೆಸಲಿ, ಹಲವು ಮಕ್ಕಳ ತಾಯಾಗಿ, ಯಶಸ್ವಿ ಗೃಹಿಣಿಯಾಗಿ ಜೀವನ ನಡೆಸಲಿ' ಎಂಬ ಆ ಮುತ್ತೈದೆಯರ ಹರಕೆಯಾಗಿರುತ್ತದೆ.
     ವರ ವಧುವಿನ ಕೊರಳಿಗೆ ತಾಳಿ ಕಟ್ಟುತ್ತಾನೋ ಆವಾಗ ಅವರಿಬ್ಬರು ಗಂಡ ಹೆಂಡತಿಯಾಗುತ್ತಾರೆ. ವರ ವಧುವಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ. ಎಲ್ಲರೂ ಅವರನ್ನು ಆಶೀರ್ವದಿಸುತ್ತಾರೆ. ಹಾಗಾದರೆ ವರನು 1) ಧರ್ಮೇಚ, 2) ಅರ್ಥೇಚ, 3) ಕಾಮೇಚ ಎಂದು ಹೇಳಿ ವಧುವಿನ ಕೊರಳಿಗೆ ಕಟ್ಟುವ ತಾಳಿಗೆ ಮೂರು ಗಂಟು ಹಾಕುತ್ತಾನೆ. ಆ ಮೂರು ಗಂಟಿನ ಅರ್ಥವನ್ನು ತಿಳಿಯೋಣ ಬನ್ನಿ.

ಧರ್ಮೇಚ: ಅಂದರೆ ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ . ಯಾವತ್ತೂ ನಾನು ಧರ್ಮಬದ್ಧವಾಗಿ, ನನ್ನ ಮಡದಿಯನ್ನು ನೋಡಿಕೊಳ್ಳುತ್ತೇನೆ. ಅವಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.

ಅರ್ಥೇಚ: ಅಂದರೆ ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ. ನನ್ನ ಮಡದಿಗೆ ಯಾವುದರಲ್ಲೂ ಕೊರತೆ ಬರದಂತೆ, ಪ್ರತಿಯೊಂದು ಧನಕನಕದ ಸವಿಯನ್ನು ಆಕೆಯೊಂದಿಗೆ ಜೊತೆಯಾಗಿ ಸವಿಯುತ್ತೇನೆ. ಅವಳನ್ನು ಖುಷಿಯಾಗಿಟ್ಟುಕೊಳ್ಳುತ್ತೇನೆ.

ಕಾಮೇಚ: ಅಂದರೆ ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ತೀರಿಸಿಕೊಳ್ಳುತ್ತೇನೆ. ಈ ಮೂರನೇ ಗಂಟಿನ ಅರ್ಥವನ್ನು ಪ್ರತಿಯೊಬ್ಬರು ಸರಿಯಾಗಿ ಅರ್ಥೈಸಿಕೊಳ್ಳಲೇಬೇಕು. ಗಂಡು ಹೆಣ್ಣು ಎಂದ ಮೇಲೆ ಬಯಕೆಗಳು ಸಹಳ ಅಲ್ಲವೇ? ಆ ಬಯಕೆಗಳ ಈಡೇರುವಿಕೆ ಗಂಡ ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಸಂತೋಷದಿಂದ, ಪ್ರೀತಿ ಪ್ರೇಮದಿಂದ ಒಟ್ಟಿಗೆ ಈಡೇರಿಸಿಕೊಂಡು ಕಾಮೇಚ ಎನ್ನುವ ಮೂರನೇ ಗಂಟಿನ ಮಹತ್ವವನ್ನು ಕಾಪಾಡಬೇಕು.

1.. ಜಾಹೀರಾತು

2.ಜಾಹೀರಾತು