ಕನ್ನಡವು 'ಶ್ರೀಮಂತ' ಸಾಹಿತಿಗಳನ್ನು ಪಡೆದಿದೆ ಎನ್ನಲು, ನಮ್ಮವರು ಪಡೆದಿರುವ ಜ್ಞಾನಪೀಠದ ಸಂಖ್ಯೆಯೇ ಸಾಕ್ಷಿ
ರಾಜಕಾರಣದಲ್ಲಿ ಜ್ಞಾನವಿರುವವನಿಗೇ ಪೀಠ ಒಲಿಯಬೇಕೆಂದಿಲ್ಲ.
ಈ ಪೀಠವೂ ಹಾಗೆಯೇ
ಆದಷ್ಟು ಬೇಗ ಒಂದಿಷ್ಟು ಪುಸ್ತಕಗಳನ್ನು ಬರೆದೊಗೆದರೆ, ನಿಮಗೂ ದೊರೆಯಬಹುದು
ನಾಟಕ ಬರೆದು ನಾಟಕವಾಡುವವರು ಬೇಗ ಪಡೆಯಬಹುದಾದದ್ದು
ಇಂಗ್ಲಿಷಿನಲ್ಲಿ ಸ್ಫುಟವಾಗಿ ಮಾತನಾಡುವವರ ಕನ್ನಡ ಸೇವೆಗೆ ಒಲಿಯುವ ಪ್ರಶಸ್ತಿ
ಅನೇಕ ಸಜ್ಜನ ಸಾಹಿತಿಗಳಿಗೆ ದೊರಕದೇ ಇರುವುದರಿಂದ ಅವರ ಹೆಸರು ಇನ್ನೂ ನಿಷ್ಕಳಂಕವಾಗಿದೆ
ಒಮ್ಮೆ ಇದು ದೊರೆತರೆ ನೀವು ಬಾಯಿಗೆ ಬಂದಂತೆ ಅಧಿಕೃತವಾಗಿ ಮಾತನಾಡುವ ಅವಕಾಶ ಪಡೆದುಕೊಳ್ಳಬಹುದು.
ಇದೊಂಥರ 'ಜಾಣ'ಪೀಠ
ಪುಸ್ತಕ ಗೀಚಿದರೆ ಸಾಲದು, ಬಾಚಿಕೊಳ್ಳುವ ಸಾಮರ್ಥ್ಯವೂ ಅಪೇಕ್ಷಿತವೇ
ಪೀಠ ಏರಿದ ಮೇಲೆ ಜ್ಞಾನವೆಲ್ಲ ಪೀಠದ ಕೆಳಗೆ...
ಲಾಬಿ ಮಾಡಿವರಿಗೆ ಲಾಭವಿದೆ
ಗಿಮಿಕ್ ಮಾಡಿದರೆ ಕಮಕ್ ಕಿಮಕ್ ಎನ್ನದೇ ಬರುವ ಗುಣವಿದೆ ಇದಕ್ಕೆ
ಸಮಗ್ರ ಸಾಹಿತ್ಯಕ್ಕೆ ದೊರೆಯುವಂಥದ್ದು, ಅಗ್ರ ಸಾಹಿತ್ಯಕ್ಕಲ್ಲ
ತೊಂಭತ್ತರ ದಶಕದವರೆಗೆ ಜ್ಞಾನವಂತರಿಗೇ ನೀಡಲಾಗುತ್ತಿತ್ತಂತೆ...
ಇದು ಒಮ್ಮೆ ದೊರೆತರೆ ಬರೆಯುವುದು ನಿಂತು ಹೋಗುವುದು.
-ವಿಶ್ವನಾಥ ಸುಂಕಸಾಳ