ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಮೇ 24, 2018

ಜ್ಞಾನಪೀಠ

ಕನ್ನಡವು 'ಶ್ರೀಮಂತ' ಸಾಹಿತಿಗಳನ್ನು ಪಡೆದಿದೆ ಎನ್ನಲು, ನಮ್ಮವರು ಪಡೆದಿರುವ ಜ್ಞಾನಪೀಠದ ಸಂಖ್ಯೆಯೇ ಸಾಕ್ಷಿ
ರಾಜಕಾರಣದಲ್ಲಿ ಜ್ಞಾನವಿರುವವನಿಗೇ ಪೀಠ ಒಲಿಯಬೇಕೆಂದಿಲ್ಲ. ಪೀಠವೂ ಹಾಗೆಯೇ
ಆದಷ್ಟು ಬೇಗ ಒಂದಿಷ್ಟು ಪುಸ್ತಕಗಳನ್ನು ಬರೆದೊಗೆದರೆ, ನಿಮಗೂ ದೊರೆಯಬಹುದು
ನಾಟಕ ಬರೆದು ನಾಟಕವಾಡುವವರು ಬೇಗ ಪಡೆಯಬಹುದಾದದ್ದು
ಇಂಗ್ಲಿಷಿನಲ್ಲಿ ಸ್ಫುಟವಾಗಿ ಮಾತನಾಡುವವರ ಕನ್ನಡ ಸೇವೆಗೆ ಒಲಿಯುವ ಪ್ರಶಸ್ತಿ
ಅನೇಕ ಸಜ್ಜನ ಸಾಹಿತಿಗಳಿಗೆ ದೊರಕದೇ ಇರುವುದರಿಂದ ಅವರ ಹೆಸರು ಇನ್ನೂ ನಿಷ್ಕಳಂಕವಾಗಿದೆ
ಒಮ್ಮೆ ಇದು ದೊರೆತರೆ ನೀವು ಬಾಯಿಗೆ ಬಂದಂತೆ ಅಧಿಕೃತವಾಗಿ ಮಾತನಾಡುವ ಅವಕಾಶ ಪಡೆದುಕೊಳ್ಳಬಹುದು.
ಇದೊಂಥರ 'ಜಾಣ'ಪೀಠ
ಪುಸ್ತಕ ಗೀಚಿದರೆ ಸಾಲದು, ಬಾಚಿಕೊಳ್ಳುವ ಸಾಮರ್ಥ್ಯವೂ ಅಪೇಕ್ಷಿತವೇ
ಪೀಠ ಏರಿದ ಮೇಲೆ ಜ್ಞಾನವೆಲ್ಲ ಪೀಠದ ಕೆಳಗೆ...
ಲಾಬಿ ಮಾಡಿವರಿಗೆ ಲಾಭವಿದೆ
ಗಿಮಿಕ್ ಮಾಡಿದರೆ ಕಮಕ್ ಕಿಮಕ್ ಎನ್ನದೇ ಬರುವ ಗುಣವಿದೆ ಇದಕ್ಕೆ
ಸಮಗ್ರ ಸಾಹಿತ್ಯಕ್ಕೆ ದೊರೆಯುವಂಥದ್ದು, ಅಗ್ರ ಸಾಹಿತ್ಯಕ್ಕಲ್ಲ
ತೊಂಭತ್ತರ ದಶಕದವರೆಗೆ ಜ್ಞಾನವಂತರಿಗೇ ನೀಡಲಾಗುತ್ತಿತ್ತಂತೆ...
ಇದು ಒಮ್ಮೆ ದೊರೆತರೆ ಬರೆಯುವುದು ನಿಂತು ಹೋಗುವುದು.

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು