ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಜುಲೈ 31, 2018

ಕೆಚ್ಚೆದೆಯ ಕಲಿಗಳ ನಾಡು

ಕೆಚ್ಚೆದೆಯ ಕಲಿಗಳ ಎಂಟೆದೆಯ ಬಂಟರ ನಾಡು
ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು
ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು
ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು – ಇದು ನಮ್ಮ ಕನ್ನಡನಾಡು
ಹಗೆಗಾರರನ್ನು ಹತ್ತಿಕ್ಕಿದ, ಒಳಿತಿಗಾಗಿ ಕಾಳಗವ ಮಾಡಿದ ನಾಡು
ಅರಿಮೆಯ ಗೂಡು, ಕಲಿಕೆಯ ಬೀಡು, ಚೆಲುವಿನ ನಾಡು
ಆನೆಗಳ ಬೀಡು, ಹಲಹಕ್ಕಿಗಳ ಗೂಡು, ಹುಲಿಯ ನಾಡು
ಕಲೆಗಳ ತವರೂರು, ಕುಣಿದಾಟ, ಜಾನಪದ ಸೊಗಡುಗಳ ನಾಡು – ಇದು ನಮ್ಮ ಕನ್ನಡನಾಡು
ಆಡಳಿತಕ್ಕೆ ಹೆಸರಾಗಿದ್ದ, ಬೇಡಿ ಬಂದವರಿಗೆ ಆಸರೆಯಿತ್ತ ನಾಡು
ರೈತ ಕುಂಬಾರ ಕಮ್ಮಾರ ಬಡಗಿಯಿಂದ ಅರಳಿದ ನಾಡು
ಪಲ್ಲವರು ಚೋಳರು ಬಡಗಣದವರನ್ನು ಹಿಮ್ಮೆಟ್ಟಿಸಿದ ನಾಡು
ನೆಲದ ಚೆಲುವನರಸಿ ಬರುವವರ, ಸುತ್ತಾಡುಗರ ನಲ್ಮೆಯ ನಾಡು – ಇದು ನಮ್ಮ ಕನ್ನಡನಾಡು
ಇಂದ – ಕಿರಣ್ ಮಲೆನಾಡು

ಮಂಗಳವಾರ, ಜುಲೈ 24, 2018

ಕತ್ತಲು


ದಿನಮಣಿ ದಿನನಿತ್ಯ ದಿಗಂತದಲ್ಲಿ ಅಸ್ತಂಗತನಾದಾಗ ಆವರಿಸುವಂಥದ್ದು
ನಕ್ಷತ್ರ ವೀಕ್ಷಣೆಗೆ ಇದೇ ಬೇಕು
ಹೊತ್ತು ಸಾಗಿಸಬೇಕು, ಅದಕೆ ಕತ್ತಲೆ ಬೇಕು - ಕೆ.ಎಸ್.
ಇರುಳು ಹೊರಳಿದ್ದರ ಫಲ
ಶೃಂಗಾರ ಅರಳುವ ಸಮಯ
ಮರ್ಯಾದೆಯು 'ಮರ್ಯಾದೆ'ಯನ್ನು ಮೀರುವ ಹೊತ್ತು
ಕೆಲವರು ಕರಡಿಗೆ 'ಜಾಮೂನು' ತಿನ್ನಿಸಲು ಹೊರಡುವ ಸಮಯ
ಥಿಯೇಟರ್ನಲ್ಲಿ ಕತ್ತಲಿರುವ ಜಾಗಕ್ಕೆ ವಿಶೇಷ ಬೇಡಿಕೆ
ಬೆಳಕಿನ ಮಹತ್ವ ಹೆಚ್ಚಿದ್ದು ಇದರಿಂದಲೇ
ಅಂಧಕಾರದ ಅಂದ ನೋಡಲು ಕಣ್ಣು ಬೇಕಿಲ್ಲ
ಬೆಳಕಿನ ಅಭಾವ ಕತ್ತಲೆಯೋ ಅಥವಾ ಕತ್ತಲೆಯ ಅಭಾವ ಬೆಳಕೋ...
ಇದನ್ನು ನೋಡುವುದಕ್ಕೆ ಬೆಳಕು ಬೇಡ
ಒಂದರ್ಥದಲ್ಲಿ ಇದು ಸ್ವಯಂ ಪ್ರಕಾಶ
ಕ್ಯಾಮೆರಾ ಫಿಲ್ಮ್ಗಳಲ್ಲಿನ ಫೋಟೋಗಳು ಬೆಳಕಿಗೆ ಬರೋದು ಇದರಲ್ಲಿಯೇ

-ವಿಶ್ವನಾಥ ಸುಂಕಸಾಳ

1.. ಜಾಹೀರಾತು

2.ಜಾಹೀರಾತು