ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಸೆಪ್ಟೆಂಬರ್ 22, 2016

ಗರ್ಭದಲಿ ನಾನೊಬ್ಬನೇ




ನವಮಾಸಗಳು ಅಮ್ಮನ ಗರ್ಭದಲಿ 
ಸುತ್ತಲೂ ರಕ್ತಮಾಂಸವು ಜಿನುಗುತಿರಲೂ 
ಉಂಡುಂಡು ಹೊಟ್ಟೆ ಉಬ್ಬರಿಸುವ ತನಕ.. 
ಆಗಾಗ ಅವಳ ಹೊಟ್ಟೆಗೆ ಒದೆಯುತ
ತೆವಳಾಡುತ ಯೋನಿಯಾಚೆಗಿನ ಬದುಕು ಗೊತ್ತಿಲ್ಲದ ಕತ್ತಲು..! 
ಬೀಜವಾಗಿ, ಕುಡಿಯಾಗಿ
ಚಿಗುರಾಗಿ ಬೆಳೆದು ಗರ್ಭದೊಳಗಿನ ಸ್ವರ್ಗವನು ಹಸನ ಮಾಡಿ
ಅಮ್ಮನಿಗೆ ಭಾರವಾಗಿ ಇಡೀ ಮನೆಯಲ್ಲಿ ನಾನೊಬ್ಬನೇ..! 
ಬುದ್ದಿಲದ್ದಿಗಳ ಹೇರಿಕೆ ಇಲ್ಲದ ಹಾಳೆಯಲಿ 
ಅಮ್ಮನು ಕೊಟ್ಟ ನಾಳದಲಿ ಬದುಕುತಾ
ಚಿಂತಿಸುತಾ.. ಸುಖವಾಗಿದ್ದೆ, ಹೆತ್ತವರ ಕನಸಾಗಿದ್ದೆ
ಎಲ್ಲರ ಪರಮಾತ್ಮನಾಗಿದ್ದೆ. 
ಅಂದು ಅಮ್ಮನ ಹೊಟ್ಟೆಯಲಿ ನಾನೊಬ್ಬನೇ..! 
ಅಸೂಹೆ ಪಟ್ಟಿರಬೇಕು ನನ್ನ ನಗುವಸುಖವ ನೋಡಿ. 
ಒಲ್ಲದ ಮನಸ್ಸಿನಲಿ ಹೊರಗೆಳೆದು ಹಾಕಿ, 
ಅಮ್ಮನ ಗರ್ಭವನು ಖಾಲಿಮಾಡಿ
ಕಾಣದ ಪ್ರಪಂಚದಲಿ ಒಲ್ಲದ ಮನಸ್ಸಿನಿಂದ ಕಣ್ಣುಬಿಟ್ಟು ನೋಡುತ್ತಿದ್ದೆ 
ಇಲ್ಲಿಯವರೆಗೆ ನಾನೆಲ್ಲಿದ್ದೆ ಅಂತ ಚಿಂತಿಸುತ್ತಿದ್ದೆ.


Posted By  ಶ್ರೀಧರ ಬನವಾಸಿ (ಫಕೀರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು