ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಜುಲೈ 10, 2016

ನುಡಿಮುತ್ತು - 36



ಯಾರು ಅಸಂತುಷ್ಟಿಯಿಂದ ಮುಕ್ತರಾಗುತ್ತಾರೋ ಅವರಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲಿದೆ. –ಭಗವಾನ್ ಬುದ್ದ,  



ದುಷ್ಟರಿಂದಲೂ ದೂರ ಇರಬೇಕು!
ಕೆಲವೊಂದು ಸಲ ನಾವು ಪ್ರೀತಿಸಿದವರು ನಿರಕಾರಿಸಿದ ಮೇಲೆ ಅವರಿಂದಲೂ
ದೂರ ಇರಬೇಕು
ಮೊದಲಿಗಿಂದ ಎರಡನೆಯದು ತುಂಬಾ ಒಳ್ಳೆಯದು!
ಆಯಾ ಪ್ರಾಣಿಗಳು ಅವುಗಳ ತರಾನೇ ನಡೆದುಕೊಂಡರೆ ಮನುಷ್ಯ ಮಾತ್ರ ಎಲ್ಲಾ ಪ್ರಾಣಿಗಳಾಗೆ ವರ್ತನೆ ಮಾಡ್ತಾನೆ!

ಕಾರಣವಿರಲಿ,
ಕಾರಣವಿಲ್ಲದೆ ಇರಲಿ,
ನಗಿ, ಆಗ ನಿಮ್ಮನ್ನು ನೋಡಿ
ಇತರರೂ ನಗುತ್ತಾರೆ.
- ಟಿ.ಪಿ.ಕೈಲಾಸಂ 

ಪ್ರಣತೆಯೊಂದು ತಾ ಉರಿದುರಿದು
ತನ್ನನೆ ತಾ ಸುಟ್ಟು ಕೊಂಡು ಬೆಳಕ ಬೀರ್ವ
ನಿಸ್ವಾರ್ಥತಮ ಜ್ಯೋತಿ ತತ್ವ ಮನದ ಅಂಧಕಾರವ ನೀಗಿ
ಅಲ್ಲಿರುವ ಸ್ನೇಹ ಪ್ಪ್ರೀತಿಗಳ ಕಾಣಿಸಲಿ
ದೀಪದಿಂದ ದೀಪ ಬೆಳಗಲಿ
ಮಾನವತ್ವದ ಕೊಂಡಿ ಬೆಸೆಯಲಿ



ನಂಬಿ ಅಥವಾ ಬಿಡಿ ಭೂಮಿ ಎಲ್ಲರಿಗು ವಾಸಿಸಲು ಸಾಕಾಗುವಷ್ಟು
ನೆಲವನ್ನು ಒದಗಿಸಿದೆ. ಆದರೆ ಮನುಷ್ಯ ಮನುಷ್ಯನನ್ನೇ ನಿರಾಶ್ರಿತ
ಸ್ಥಿತಿಗೆ ತಳ್ಳುತಿದ್ದಾನೆ
" ಸ್ವಾಮಿ ವಿವೇಕಾನಂದ"


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ. –ಮಹಾತ್ಮ ಗಾಂಧಿ
 

ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು. –ಉಪನಿಷತ್ತುಗಳು


ಸತ್ಯ ಮತ್ತು ನ್ಯಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಮನುಷ್ಯನ ಸಭ್ಯತೆ ಹಾಗೂ ಸಜ್ಜನಿಕೆಯ ಒಂದು ಅಂಗ.

ಸಮುದ್ರದಲ್ಲಿ ಸುರಿದ ಮಳೆ, ಹಸಿವಿಲ್ಲದವನಿಗೆ ನೀಡಿದ ಭೋಜನ, ಧನವಂತನಿಗೆ ಕೊಟ್ಟ ದಾನ, ದರಿದ್ರನಿಗೆ ಬಂದ ಯೌವನ ಇವೆಲ್ಲ ವ್ಯರ್ಥವೇ ಸರಿ

ಕೈ ಮೇಲಿನ ಗೆರೆಗಳು ನಿನ್ನ ಭವಿಷ್ಯ ರೂಪಿಸುತ್ತವೆ ಎಂದು ನಂಬದಿರು, ಗೆರೆಗಲೇನು ಬಂತು,
ಕೈ ಗಳೇ ಇಲ್ಲದವರಿಗೂ ಉತ್ತಮ ಭವಿಷ್ಯ ಇರುತ್ತದೆ
ಎಂಬುದನ್ನು ಮರೆಯದಿರು.
ನಿನ್ನ ಬಗ್ಗೆ ನಿನಗೆ ವಿಶ್ವಾಸವಿರಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು