ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶುಕ್ರವಾರ, ಆಗಸ್ಟ್ 15, 2014

ನಾವು ನಮ್ಮ ಜನ

ಸ್ವಾತಂತ್ರ ಬಂದು ಅರವತ್ತೆಳು ನಮಗೆ ಈ ನಮ್ ದೇಶಕೆ 
ನೀರು, ಆಹಾರ, ಸೂರು ಇಲ್ಲ ಕೋಟಿ ಕೋಟಿ ಬಡ ಜೀವಕ. !!ಪ!!

ನಮ್ಮ ತಾಯಿ ಭರತ ಮಾತೆಯು ಶಾಂತಿ ಸ್ವರೂಪಿಣಿ ಭಾರತಾಂಬೆಯು 
ಹಿಂದೂ, ಕ್ರೈಸ್ತ, ಮುಸಲ್ಮಾನರು ಸಾಮರಸ್ಯದಿ ಬದುಕುವರು 
ಜಾತಿ ಹೆಸರಲಿ ನೀತಿಗೇಡಿಗಳು ಸಾಮರಸ್ಯವ ಕದಡಿದರು 
ಭಾವೈಕ್ಯ ಗೂಡಿಗೆ ಕಲ್ಲು ಹೊಡೆದರು ಧರ್ಮದ ನೆಲೆಯಲ್ಲಿ ದೇಶ ಒಡೆದರು 
ಕಿಚ್ಚು ಹಚ್ಚಿದರು ಹೊತ್ತಿ ಉರಿಸಿದರು ಸಾವಿರ ಸಾವಿರ ಜೀವನ ಕೊಂದರು !!ಪ!!

ತಿಂಗಳಿಗೊಮ್ಮೆ ಬೆಲೆಗಳ ಏರಿಕೆ ತಿನ್ನುವ ಅನ್ನವು ಕಲಬೆರಕೆ 
ಅಗ್ಗದ ದರದಲಿ ಆಹಾರಧಾನ್ಯವು ಮೈಬಗ್ಗಿಸಿ ದುಡಿಯದ ಜೀವನವು 
ಊರಿಗೊಂದು ಸಮಾವೇಶ ಬಾಡಿಗೆ ಜನಗಳ ಜಯಘೋಷ 
ಎಂಜಲು ಕಾಸಿಗೆ ಓಟು ಮಾರುವರು ಹೆಂಡ-ಸಾರಾಯಿಗೆ ದಾಸರಾಗುವರು 
ಹೀಗಿದೆ ನೋಡಿ ನಮ್ ದೇಶ ಗಂಟೆಗೆ ಒಂದು ಹಗಲುವೇಷ !!ಪ!!

ನೆಹರು ಗಾಂಧೀಜಿ ಅಣ್ಣಾ ಅಟಲ್‌ಜೀ ದೇಶ ಕೋಶಕೆಲ್ಲ ಏಕರು 
ನೋಡಿರೀಗ ದೇಶ ಕೋಶವೆಲ್ಲ ತುಂಬಿ ತುಳುಕುವರು ಭ್ರಷ್ಟರು 
ಪ್ರಜಾಪ್ರಭುತ್ವದ ಕತ್ತು ಹಿಸುಕಿದರು ಭ್ರಷ್ಟಾಚಾರವ ಕಟ್ಟಿ ಬೆಳೆಸುವರು 
ಭಯೋತ್ಪಾದಕರು ನುಸುಳಿ ಬಂದರೂ... ಗಡಿಯಲಿ ಯೋಧರ ಕತ್ತು ಸೀಳಿದರೂ... 
ಕೈಕಟ್ಟಿ ಕುಳಿತಿದೆ ನಮ್ಮಜನ ದೇಶನಾಳುವ ರಾಜಕಾರಣ !!ಪ!!

ಕರೆಂಟು, ಬೀಜ, ಗೊಬ್ಬರ ಬೇಕು ಬೆಳೆಗೆ ಬೆಲೆಯು ಸಿಕ್ಕರೆ ಸಾಕು 
ಸ್ವಾವಲಂಬಿ ಜೀವನಕೆ ಸಾಲಮನ್ನ ಏತಕೆ ಬೇಕು? 
ದುರಾಭಿಮಾನವ ನೀಗಿಸಿ ದೇಶಾಭಿಮಾನವ ಬೆಳೆಸೋಣ 
ಸ್ವಾಭಿಮಾನವ ಮೈಗೂಡಿಸಿ ಸಾಮರಸ್ಯದಿ ಬದುಕೋಣ 
ಭ್ರಷ್ಟಾಚಾರವ ತೊಲಗಿಸಿ ಭವಿಷ್ಯ ಭಾರತ ಕಟ್ಟೋಣ !!ಪ!!
                                                                                                                   ----> ಕೆ.ಆರ್,ಹಿರೆಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು