ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಡಿಸೆಂಬರ್ 31, 2018

ನಾಡಿನೊಳಗೆ ನಾಡು ನಮ್ಮ ಕನ್ನಡ ನಾಡು

ನಾಡಿನೊಳಗೆ ನಾಡು ನಮ್ಮ ಕನ್ನಡ ನಾಡು
ಅಂದದ ನಾಡು, ಶ್ರೀಗಂದದ ಬೀಡು,
ಏಕತೆ ಭಾವೈಕ್ಯತೆಯಿಂದ ಕೂಡಿದ ನಾಡು,
ನಮ್ಮ ಚಲುವ ಕನ್ನಡ ನಾಡು..

ಜಾತಿ ಮತಗಳೆಂಬ ಬೇಧವಿಲ್ಲದ ನಾಡು,
ಮೇಲು ಕೀಳೆಂಬ ಭಾವವಿಲ್ಲದ ಬೀಡು,
ನೀತಿ ನಿಯಮ, ಕಲೆ ಸಂಸ್ಕೃತಿಯು,
ನೆಲೆಸಿರುವ ಏಕೈಕ ನಾಡು ಈ ಕರುನಾಡು..

ಹಸಿರು ಸಹ್ಯಾದ್ರಿಯಿಂದ ಕೂಡಿದ ನಾಡು,
ವೀರಧಿರರಾಳಿದ, ವರ ಸಾಧು ಸಂತರ,
ಸಂಗೀತ, ಸಾಹಿತ್ಯ, ಕಲೆ ಚಿತ್ರಕಲೆಯ,
ನೆಲೆಬೀಡು ಈ ನಮ್ಮ ಕರುನಾಡು..

ಒಮ್ಮೆಯಾದರೂ ನೋಡು ನಮ್ಮ ನಾಡು,
ಅಂದ ಚಂದದ ನಮ್ಮ ಕನ್ನಡ ನಾಡು...

ಕೃಪೆ - ಜ್ಯೋತಿ ಭಟ್

ಭಾನುವಾರ, ಡಿಸೆಂಬರ್ 30, 2018

ಡಾ|| ವಿಷ್ಣುವರ್ಧನ್ ರವರ ಸ್ಮರಣಾರ್ಥ (2018)

ಕನ್ನಡದ ಉಳಿವಿಗೆ ಹೋರಾಟಗಳು ಬೇಕಿಲ್ಲ...,
ಕರುನಾಡಿನಲ್ಲಿರುವವರು ಕನ್ನಡ ಮಾತನಾಡಿದರೆ ಸಾಕು.... 
                                                                                                           ==> ಡಾ|| ವಿಷ್ಣುವರ್ಧನ 

ಡಾ|| ವಿಷ್ಣುವರ್ಧನ ರವರ ನೆನಪಿಗಾಗಿ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯವರು ಸನ್ 2013 ರಲ್ಲಿ ರೂ.5 ಮುಖಬೆಲೆಯುಳ್ಳ ಅಂಚೆಯನ್ನು ಬಿಡುಗಡೆಗೊಳಿಸಿದ್ದಾರೆ.

ಸೋಮವಾರ, ಡಿಸೆಂಬರ್ 24, 2018

ಪ್ರತಿಫಲ

ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಿಂದುಂಟಾಗುವ ಫಲ
ಕಲ್ಲು ಹೊಡೆದಿದ್ದ ಕೈ ಪ್ರತಿಯಾಗಿ ಉದುರಿದ ಹಣ್ಣು
ಮಾಡಿದ್ದುಣ್ಣುವ ಮಹರಾಯರ ಮಹತ್ಕಾರ್ಯಗಳ ಫಲ
ಗೋಡೆಗೆ ಬಡಿದ ಚೆಂಡು
ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೇ ಕರ್ಮ ಮಾಡು ಎಂದು ಕೃಷ್ಣ ಅರ್ಜುನನಿಗೆ ಹೇಳಿರುವುದರಿಂದ ನಾವಿದಕ್ಕೆ ತಲೆಕೆಡಿಸಿಕೊಂಡಿಲ್ಲ
ಕಲಿಯುಗದಲ್ಲಿ ಪ್ರವೃತ್ತಿಯ ಪ್ರೇರಕವೇ ಇದು
ಪ್ರತಿಫಲಾಪೇಕ್ಷೆಯಿಲ್ಲದೇ ಯಾರಾದರೂ ಉಪಕಾರ ಮಾಡಿದರೆ ಅದು ಅಕಸ್ಮಾತ್ತಾಗಿ ಆಗಿರುವ ಸಂಭವವೂ ಇದೆ
ಇದರ ಲಭ್ಯತೆಯನ್ನನುಸರಿಸಿ ಕಾರ್ಯ ಮಾಡಬೇಕೋ ಬೇಡವೋ ಎಂಬುದರ ನಿರ್ಣಯವಾಗುತ್ತದೆ.
ಎಷ್ಟು ಸಿಗುತ್ತೆ ? ಎಂದರೆ ಇದೇ ಅರ್ಥ
ಕೆಲಸ ಮಾಡದಿದ್ದರೂ ಫಲ ಸಿಗುತ್ತೆ ಸರ್ಕಾರಿ ಅಧಿಕಾರಿಗಳಿಗೆ
ದೇವರಿಗೆ ನೈವೇದ್ಯ ಮಾಡಿದ್ದರ ಫಲವೆಂದರೆ, ಅದನ್ನು ನಾವು ಮತ್ತೆ ನೈವೇದ್ಯ ಮಾಡುವುದೇ
ಪ್ರತಿಫಲಕ್ಕಾಗಿ ಕಾಯುತ್ತಾ 'ಕುಳಿತುಕೊಳ್ಳುವುದಕ್ಕಿಂತ' ಕಾಯುತ್ತಾ ಮಲಗುವುದು ಹೆಚ್ಚು ವಾಸಿ
ಲಕ್ಷಗಟ್ಟಲೆ ದಾನ ಕೊಟ್ಟವಗೆ ಸನ್ಮಾನ ಮಾಡುವುದೇ ಅತನಿಗೆ ಪ್ರತಿಫಲ

-ವಿಶ್ವನಾಥ ಸುಂಕಸಾಳ

1.. ಜಾಹೀರಾತು

2.ಜಾಹೀರಾತು