□■○● ಶಿಕ್ಷಕರಿಗೆ ●○■□
ಅಕ್ಷರಗಳನ್ನು ತಿದ್ದಿ ತೀಡಿ ಕಲಿಸಿ
ಆಶೀರ್ವದಿಸಿ ಕೈ ಹಿಡಿದು ನಡೆಸಿ
ಇಂದಿನ ನನ್ನಯ
ಈಸ್ಥಿತಿಗೆ ಕಾರಣ ಭೂತರಾದ
ಉರು ಹೊಡಿಸಿ, ಮರೆಯದಂತೆ
ಊಟ ಆಟದ ನಡುವೆ ಪಾಠವ
ಋಷಿ ಮುನಿಗಳ ಯಜ್ಞದಂತೆ
ಎಲ್ಲಾ ವಿಷಯಗಳ ಜೊತೆ ಜೀವನದ
ಏರಿಳಿತ ತಿಳಿಸಿ, ಎಂದೆಂದೂ
ಐದು ಜನರ ಬಾಳಿಗೆ ಬೆಳಕು
ಒದಗಿಸಲು ಸಹಾಯ ಮಾಡಲು
ಓದು ಬರೆಹಗಳನ್ನು ಆಸಕ್ತಿಯಿಂದ
ಔದಾರ್ಯ ಪೂರ್ವಕವಾಗಿ ಮನದ
ಅಂಗಳದಲ್ಲಿ ಇಳಿಸಿದ ಎಲ್ಲಾ ಶಿಕ್ಷಕರಿಗೆ ವಂದನೆ.
@✍🏻 ಉ.ವೇಣುಗೋಪಾಲ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.