ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಡಿಸೆಂಬರ್ 15, 2021

ಅ-ಅಃ ಅಕ್ಷರಬಳ್ಳಿ ಕವನಗಳು

ಪ್ಪನು ಮಾಡಿದ ಚೌತಿಯ ಪ್ರತಿಮೆಗೆ
ನೆಯ ಸೊಂಡಿಲ ಮೊಗವಿತ್ತು
ಲಿಯನ್ನೇರಿದ ಯಾರಿದು ಎಂದೆನು
ಶ್ವರಸುತನೆಂದನು ಅಪ್ಪ
ಮಾಕುಮಾರನ ಚೆಲುಹಬ್ಬದದಿನ
ಟಕೆ ಬಂದರು ಅತಿಥಿಗಳು
ಲೆಯನ್ನಿರಿಸಿ ಅನ್ನವ ಬಡಿಸಲು
ಕಾಗ್ರತೆಯಲಿ ಜನರುಣಲು
ದು ಬಗೆಯ ಸಿಹಿಭಕ್ಷ್ಯಗಳಿದ್ದುವು
ಗ್ಗರಣೆಯ ಹುಳಿಮೊಸರಿತ್ತು
ಡುವ ತಿಳಿಪಾಯಸವನು ಮೆಲ್ಲುತ
ತಣದೂಟವ ಹೊಗಳಿದರು
ಅಂದದ ಊಟದ ನಂತರ ಅಡಿಕೆಯ
ಅಃ ಎಂದರು ಜನ ಸವಿಯುತಲಿ
ಬಾ ನವಿಲೆ...
ರೆಯುವೆ ನಿನ್ನ ಕಣ್ಮಣಿಯನ್ನ
ಕಾಡಿಗೆ ಕಣ್ಣಿನ ನವಿಲೇ
ಕಿಟಿಕಿಯಾಳಿಂದ ಬಾ ಮುದದಿಂದ
ಕೀಟಲೆ ಮಾಡೆನು ನಾ ನಿನಗೆ
ಕುಡಿಯಲು ಹಾಲು ತರಲೇನ್ಹೇಳು
ಕೂಗುತ ನಲಿಯುತ ಬಂದುಬಿಡು
ಕೆಣಕುವುದಿಲ್ಲ ಮೋಸವಿದಲ್ಲ
ಕೇಕೇ ಗಾನವ ಮಾಡುತಿರು
ಕೈಯಲ್ಲಿರುವ ಹಣ್ಣನು ಕೊಡುವೆ
ಕೊರಳನು ಬಾಗುತ ಬಾ ಬಾ ಬಾ
ಕೋರಿಕೆಯನ್ನ ನೀ ಸಲಿಸೆನ್ನ
ಕೌತುಕ ಪಡುವೆನು ನಿನಗಾಗಿ
ಕಂದನ ಕರೆಯಿದು ಪ್ರೇಮದ ಕುರುಹಿದು
ಕಃ ಎನ್ನದೆ ಬಾ ಕುಣಿ ಕುಣಿ ।।


(ಈ ಎರಡೂ ಕವಿತೆಗಳನ್ನು, ಮೊನ್ನೆ ಊರಿಗೆ ಹೋಗಿದ್ದಾಗ ಹಳೇ ಪುಸ್ತಕವೊಂದರಲ್ಲಿ ಓದಿದೆ. ಇವನ್ನು ಬರೆದ ಕವಿ ದಿವಂಗತ ಮುಂಡಾಜೆ ರಾಮಚಂದ್ರ ಭಟ್‌. 1947ರಿಂದ ಸುಮಾರು 1965ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ರಾಮಚಂದ್ರ ಮಾಷ್ಟ್ರು ಸಂಗೀತದಲ್ಲೂ ಪರಿಣತರಾಗಿದ್ದರಂತೆ. ಮಕ್ಕಳಿಗಾಗಿ ಸುಂದರ ಕವಿತೆಗಳನ್ನು ರಚಿಸಿದ ಇವರ ಪ್ರಕಟಿತ ಸಂಕಲನಗಳೆಂದರೆ 'ತಮ್ಮನ ಕವಿತೆಗಳು", 'ಪೀಪೀ", 'ಪುಟ್ಟನ ಪಿಟೀಲು" ಇತ್ಯಾದಿ. ಇವರ 'ರೈಲು ಪ್ರವಾಸದ ಕನಸು" ಎಂಬ ಒಂದು ಕವಿತೆಯಂತೂ ಬಹಳ ಚೆನ್ನಾಗಿದೆ.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು