fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಆಗಸ್ಟ್ 24, 2019

ಕಾವಿ

ಮನದ ಕಾವು ಆರಿದ ಮೇಲೆ ತೊಡುವ ಬಟ್ಟೆ
ಕಾಷಾಯ ವೇಷ
ಕೋವಿ ಯುದ್ಧಕ್ಕೆ; ಕಾವಿ ಶಾಂತಿಗೆ
ತ್ಯಾಗದ ಪ್ರತೀಕವಿದು
ಯಾವ ಕಾವಿಯೊಳಗೆ ಯಾವ ಹಾವಿದೆಯೊ ಬಲ್ಲವರಾರು?
ಕಾವಿ ತೊಟ್ಟವರೆಲ್ಲ ತ್ಯಾಗಿಗಳಲ್ಲ, ನಿತ್ಯಾನಂದ ಸ್ವಾಮಿಯೂ ಆಗಿರಬಹುದು
ಕಾವಿ ತೊಟ್ಟರೇನು ಬಂತು, ಮನದ ಕಾವು ತ್ಯಜಿಸದಿದ್ದರೆ?
ಭಾರತದಲ್ಲಿ ಇದಕ್ಕೆ ಒಳ್ಳೆ ಮಾರ್ಕೆಟ್ ಇದೆ
ಸರ್ವವನ್ನೂ ತ್ಯಜಿಸಿದವನು ಧರಿಸುವಂಥದ್ದು. ಆದರೆ ಇದನ್ನು ತೊಟ್ಟ ಮೇಲೆ ಎಲ್ಲವೂ ಅಂಟಿಕೊಳ್ಳುತ್ತದೆ
ವೋಟ್ ಬ್ಯಾಂಕ್ ಶೇಖರಣಾ ಮಾಧ್ಯಮ
ಕಾವಿ ಕಂಡಲ್ಲಿ ಅಡ್ಡಬೀಳುವುದರಿಂದ ರಾಜಕಾರಣಿಗಂತೂ ಲಾಭವಿದೆ
ಉದರ ನಿಮಿತ್ತ ಕಾವಿ ತೊಟ್ಟವರು ಬೇರೆಯವರನ್ನು ಬಾವಿಗೆ ಬೀಳಿಸುತ್ತಾರೆ
ಅಧ್ಯಾತ್ಮದತ್ತ ಹೊರಳಿದವರ ಗಣವೇಷ
ಇದು ತುಂಬ ಸೋವಿ
ಕಾಮಿಗಳು ಅವಿತುಕೊಳ್ಳುವ ಸುರಕ್ಷಿತ ಅಡಗು ತಾಣ

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು