fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಮಾರ್ಚ್ 22, 2021

"ನನ್ನಪ್ಪ"


ಹೆಗಲಲ್ಲಿ ಹೊತ್ತು,
ಹಾದಿ ಬೀದಿಯಲ್ಲಿ ರಾಜನಂತೆ,
ಹೊತ್ತು ತಿರುಗಿದವನು. ಕಷ್ಟವ 
ತಾನುಂಡು,ಸುಖದಲ್ಲಿ ಪೊರೆದವ,   ನನ್ನಪ್ಪ.

ತುತ್ತು ತುತ್ತಿಗೆ ಪರದಾಡಿ,
ಅಮೃತವ ನನಗಿಕ್ಕಿ.
ನೋವಿನ ಭಾದೆ ಸರಿಸಿ,
ಎಲ್ಲರಂತೆ ಸಲಹಿದವ,    ನನ್ನಪ್ಪ.

ಸಾಲವ ಲೆಕ್ಕಿಸದೆ,
ಧನಿಕರಿಗೆ ಹೊಲವಿಟ್ಟು,
ವಿದ್ಯಾಮೃತವನಿತ್ತು, 
ಸಮಾಜದಲ್ಲೊಂದು ಮೂರ್ತಿ ಕಡೆದವ    ನನ್ನಪ್ಪ.

ಜಾತಿ ಧರ್ಮದ ಸೋಗಿಲ್ಲದೆ,
ಪ್ರೀತಿ ವಿಶ್ವಾಸವ ಬಿತ್ತಿ,
ಕರುಣಾಮಯಿಯಾಗು,
ಎಂದರಸಿ ಬೆಳೆಸಿದವ,    ನನ್ನಪ್ಪ.

ಸೊಗಳಾಡಿ ಮಾತನಾಡದ,
ದುಷ್ಟರ ಕಡುವೈರಿ.
ಕಷ್ಟದಲ್ಲೂ ಮರುಗಿದರು,
ಭ್ರಷ್ಟತೆಗೆ ಕೈ ಚಾಚದವ,
ನಿಷ್ಟುರ ನುಡಿಯುವ    ನನ್ನಪ್ಪ.

ಮೌನದಲ್ಲಿ ಮಾತಾಗಿ,
ನೋವಿನಲ್ಲೂ ಮುಖ ಅರಳಿಸಿ,
ನಗುವ,ನಗು ಮೊಗದ ನಂದಾದೀಪ.
ಬಾಳಿಗೆ ಬೆಳಕಾದ ನನ್ನಿ ಆಶಾಕಿರಣ,    ನನ್ನಪ್ಪ.

                                                                                       ✍  ರಚನೆ:ಚೌಡ್ಲಾಪುರ ಸೂರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು