fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಅಕ್ಟೋಬರ್ 22, 2019

ಅಮ್ಮ ಎಂದರೆ..

ಭ್ರೂಣ ಹೊತ್ತಳು, ಜೀವಕೆ ಜನ್ಮವಿತ್ತಳು
ಬದುಕು ಕಟ್ಟುವ ಕಲೆಯ ತಿಳಿಸಿ ಕೊಟ್ಟಳು..

ತುತ್ತು ಕೊಟ್ಟಳು, ಸವಿಯ ಮುತ್ತು ಕೊಟ್ಟಳು
ನಮ್ಮಯ ಗಾಯಕ್ಕೆ ತಾ ಅತ್ತುಬಿಟ್ಟಳು..

ಪ್ರೀತಿ ಕೊಟ್ಟಳು, ನೀತಿ ಹೇಳಿ ಕೊಟ್ಟಳು
ನಮ್ಮ ಮನದ ಭೀತಿಯನ್ನೇ ದೂರವಿಟ್ಟಳು..

ಧೈರ್ಯ ಕೊಟ್ಟಳು, ಸಕಲ ಸ್ಥೈರ್ಯ ಇಟ್ಟಳು
ಮನದಿ ಕ್ರೌರ್ಯವನ್ನು ತಾನು ಸುಟ್ಟು ಬಿಟ್ಟಳು..

ಮಮತೆ ಇತ್ತಳು, ಶ್ರಮತೆ ಕಲಿಸಿ ಕೊಟ್ಟಳು
ಕರುಣೆಯೆಂಬ ಕವಿತೆಯನೇ ಬರೆದು ಕೊಟ್ಟಳು..

ಹೇಸರನಿಟ್ಟಳು, ಬಸಿರಲಿ ಉಸಿರನಿಟ್ಟಳು
ನಮ್ಮ ಏಳಿಗೆಗಾಗಿ ತನ್ನ ಕನಸ ಕಟ್ಟಿಟ್ಟಳು..

ಅನುಕ್ಷಣವೂ ನಮಗಾಗಿ ಅಮ್ಮ ಅತ್ತಳು ಸತ್ತಳು...

                   
  ಎಲ್ಲಾ ಅಮ್ಮಂದಿರಿಗೂ ನನ್ನ ನಮನಗಳು ❣
                                                                                                      ಕೃಪೆ:  ~ ಸಿದ್ದು ಗುಂಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು