ಭ್ರೂಣ ಹೊತ್ತಳು, ಜೀವಕೆ ಜನ್ಮವಿತ್ತಳು
ಬದುಕು ಕಟ್ಟುವ ಕಲೆಯ ತಿಳಿಸಿ ಕೊಟ್ಟಳು..
ತುತ್ತು ಕೊಟ್ಟಳು, ಸವಿಯ ಮುತ್ತು ಕೊಟ್ಟಳು
ನಮ್ಮಯ ಗಾಯಕ್ಕೆ ತಾ ಅತ್ತುಬಿಟ್ಟಳು..
ಪ್ರೀತಿ ಕೊಟ್ಟಳು, ನೀತಿ ಹೇಳಿ ಕೊಟ್ಟಳು
ನಮ್ಮ ಮನದ ಭೀತಿಯನ್ನೇ ದೂರವಿಟ್ಟಳು..
ಧೈರ್ಯ ಕೊಟ್ಟಳು, ಸಕಲ ಸ್ಥೈರ್ಯ ಇಟ್ಟಳು
ಮನದಿ ಕ್ರೌರ್ಯವನ್ನು ತಾನು ಸುಟ್ಟು ಬಿಟ್ಟಳು..
ಮಮತೆ ಇತ್ತಳು, ಶ್ರಮತೆ ಕಲಿಸಿ ಕೊಟ್ಟಳು
ಕರುಣೆಯೆಂಬ ಕವಿತೆಯನೇ ಬರೆದು ಕೊಟ್ಟಳು..
ಹೇಸರನಿಟ್ಟಳು, ಬಸಿರಲಿ ಉಸಿರನಿಟ್ಟಳು
ನಮ್ಮ ಏಳಿಗೆಗಾಗಿ ತನ್ನ ಕನಸ ಕಟ್ಟಿಟ್ಟಳು..
ಅನುಕ್ಷಣವೂ ನಮಗಾಗಿ ಅಮ್ಮ ಅತ್ತಳು ಸತ್ತಳು...
ಎಲ್ಲಾ ಅಮ್ಮಂದಿರಿಗೂ ನನ್ನ ನಮನಗಳು ❣
ಕೃಪೆ: ~ ಸಿದ್ದು ಗುಂಡ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.