ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಸೆಪ್ಟೆಂಬರ್ 24, 2018

ವ್ಯರ್ಥ

'ಅರ್ಥ'ಗಳಿಸಲಾಗದ ಯಾವುದೇ ಪ್ರಯತ್ನ ಅಥವಾ ಅರ್ಥವಿಲ್ಲದ ಯತ್ನ
ಕಲ್ಲೆಸೆದರೂ ಫಲ ಉದುರದೇ ಇರುವಂಥ ವಿಫಲ ಕಾರ್ಯ
ಮೂರ್ಖನಿಗೆ ಬುದ್ಧಿ ಹೇಳುವುದು ಮತ್ತು ಬುದ್ಧಿವಂತನಿಗೆ ಪಾಠ ಹೇಳೋದು
ಗಾಳಿಗೆ ಗುದ್ದುವುದು, ನೀರಿನಲ್ಲಿ ಬರೆಯುವುದು, ನಾರಿಯ ಬುದ್ಧಿಯನ್ನು ತಿದ್ದುವುದು
ಸತ್ಯವಂತಿಕೆ ಮತ್ತು ಪ್ರಾಮಾಣಿಕವಾಗಿ ಬದುಕುವ ಪ್ರಯತ್ನ
ಮನಮೋಹನ್ ಸಿಂಗ್ ಎದುರು ಮೈಕ್ ಹಿಡಿಯುವುದು
ದೇಶವನ್ನು ಉದ್ದರಿಸುವ ಕನಸು ಕಾಣುವುದು
ಸಿನಿಮಾ ನೋಡದ, ಬಂಕ್ ಹಾಕದ ಕಾಲೇಜು ಜೀವನ
ಲವ್ ಮಾಡದವನ ಬದುಕು
ಹಣವನ್ನು ಅಗತ್ಯಕ್ಕೆ ಖರ್ಚಿಸದೇ ಕೂಡಿಡುವಿಕೆ
ಹೆಂಡತಿಯ ದೃಷ್ಟಿಯಲ್ಲಿ ಒಳ್ಳೆಯವನೆಂದು ಹೇಳಿಸಿಕೊಳ್ಳಬೇಕೆಂದು ಇಚ್ಚಿಸುವುದು
ನಾಳೆಯಿಂದ ಕುಡಿತ ಬಿಡುತ್ತೇನೆ ಎನ್ನುವವನ ಮಾತನ್ನು ನಂಬುವುದು
ಹೆಂಡತಿಗೆ ಅವಳ ತಪ್ಪನ್ನು ಅರ್ಥ ಮಾಡಿಸಲು ಹೊರಡುವುದು

-ವಿಶ್ವನಾಥ ಸುಂಕಸಾಳ

ಶನಿವಾರ, ಸೆಪ್ಟೆಂಬರ್ 22, 2018

ನಮ್ಮನ್ನು ಹೆತ್ತವಳು (Our Mother)

ಹೆತ್ತವಳು ಅವಳೇ, ಹೊತ್ತವಳು ಅವಳೇ
ಹೊರೆಯಾಕೆ ಆಗುತಿ ಅವಳಿಗೆ?
ಬಡಿಯುವವಳು ಅವಳೇ, ಬಡಿಸುವವಳು ಅವಳೇ
ಬಾರ ಯಾಕ ಆಗುತಿ ಅವಳಿಗೆ?

ಬಣ್ಣದ ಆಟ ಅವಳಿಗೆ ಗೊತ್ತಿಲ್ಲ
ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ
ಹಸಿದಾಗ ಊಟ ಹೊಟ್ಟೆತುಂಬಾ ಬಡಿಸ್ತಾಳ
ನಡಿಯೋದು ಕಲಿಸಿ, ನಕ್ಕು ನಲಿತಾಳ

ಯಾರೇನೆ ಹೇಳಿದರು ನನ
ಮಗನೆ ಬಾರೀ ಅಂತಾಳ
ಕೊನೆಗೊಮ್ಮೆ ಉಸಿರು ನಿಂತರೂ
ನಿನ್ನ ಮನದಲ್ಲೆ ಉಳಿತಾಳ

ಗುರುವಾರ, ಸೆಪ್ಟೆಂಬರ್ 20, 2018

ಮಳೆ ಕಳೆ (Rain ... )

ಮಳೆ ಬಂತು
ಮಳೆ ಬಂತು
ನಮ್ಮ ನಾಡಿಗೆ 
ತರುಲತೆಗಳಿಗೆ ತುಂಬಿತು ನವಚೇತನ 
ನದಿನಾಲೆಗಳು ಕೂಡ 
ತುಂಬಿ ತುಳುಕಾಡಿದವು 
ಜನಮನಗಳಲ್ಲಿ ಕೂಡಾ 
ಹೊಸತನವು ತುಂಬಿತು 
ಬೋಳು ಬೋಳಾಗಿದ್ದ 
ಬರಡು ಭೂಮಿಗಳೆಲ್ಲಾ 
ಹಚ್ಚ ಹಸುರಿನ ಚಾದರವ 
ಹೊದ್ದು ಮಲಗಿದವು 
ದೇಗುಲಗಳಲ್ಲಿ ಗಂಟೆ 
ಮಾರ್ದನಿಯು ಮೂಡಿತು 
ಹರಕೆ ಪೂಜೆಗಳೆಲ್ಲಾ 
ಭಕ್ತಿಯಲಿ ನಡೆಯಿತು 

ಕೃಪೆ - ವಿ. ಸತ್ಯನಾರಾಯಣ ರಾವ್‌ 

1.. ಜಾಹೀರಾತು

2.ಜಾಹೀರಾತು