ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶುಕ್ರವಾರ, ಜುಲೈ 28, 2017

ಪ್ರಾಣಿ ಲೋಕದ ವೈಚಿತ್ರ್ಯಗಳು 2

  • ೧.   ಇಲಿ, ನಕ್ಷತ್ರ ಮೀನುಗಳು ಹಾಗೂ ಹಲ್ಲಿಗಳ ಬಾಲಗಳು ತುಂಡಾದರೆ ಮತ್ತೆ ಬೆಳೆಯಬಲ್ಲವು.
  • ೨.   ಗೋಲ್ಡನ್ ಪಾಯ್ಸನ್ ಡಾರ್ಟ್ ಫ್ರಾಗ್ ಎಂಬ ಕಪ್ಪೆ ೧೫೦೦ ಜನರನ್ನು ತನ್ನ  ವಿಷದಿಂದ ಕೊಲ್ಲಬಲ್ಲದು.
  • ೩.   ಸ್ಟೆಗೋಸಾರಸ್ ಸು. ೯ ಮೀಟರ್ ಉದ್ದವಾಗಿರುವ ಸರೀಸೃಪ
  • ೪.   ಮೊಲಗಳಿಗೆ ಸಿಹಿ ಎಂದರೆ ಬಲುಪ್ರೀಯ.
  • ೫.   ಕೋಳಿಗಳ ಎಡಕಾಲಿನಲ್ಲಿ ಹೆಚ್ಚು ಮಾಂಸವಿರುತ್ತದೆ.ಕಾರಣ ಸ್ನಾಯುಗಳು ಹೆಚ್ಚಾಗಿರುತ್ತದೆ.
  • ೬.   ಅಕ್ವೇರಿಯಂಗಳಲ್ಲಿ ಇರುವ ಗೋಲ್ಡ್ ಫಿಶ್ ಒಳ್ಳೆಯ ಬೆಳಕಿಲ್ಲದೇ ಇದ್ದರೆ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ.
  • ೭.   ಇಲಿಯ ವೀರ್ಯಾಣುಗಳು ಆನೆಯ ವೀರ್ಯಾಣುವಿಗಿಂತ ಹೆಚ್ಚು.

ಬುಧವಾರ, ಜುಲೈ 26, 2017

ಏಕಾಂತರಾಮಿತಂದೆ

ಅಂಕಿತ ನಾಮಎನ್ನಯ್ಯ ಚೆನ್ನರಾಮ 

ಕಾಲ೧೧೬೦ 
ದೊರಕಿರುವ ವಚನಗಳು7 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿಪುರುಷೋತ್ತಮಭಟ್ಟಸೀತಮ್ಮ 
ಹುಟ್ಟಿದ ಸ್ಥಳಕಲ್ಬುರ್ಗಿ ಜಿಲ್ಲೆಯ ಅಳಂದ 
ಪರಿಚಯಕಾಲ ಸು. 1160. 

ಸ್ಥಳಕಲ್ಬುರ್ಗಿ ಜಿಲ್ಲೆಯ ಅಳಂದಹರಿಹರ ಈತನ ಬಗ್ಗೆ ರಗಳೆಯೊಂದನ್ನು ಬರೆದಿದ್ದಾನೆಅಬ್ಬಲೂರು ಶಾಸನದಲ್ಲಿ ಇವನ ಉಲ್ಲೇಖವಿದೆತಂದೆಪುರುಷೋತ್ತಮಭಟ್ಟತಾಯಿಸೀತಮ್ಮಪುಲಿಗೆರೆಯ ಸೋಮೇಶ್ವರನು ಈತನ ಕನಸಿನಲ್ಲಿ ಬಂದು ಪರಧರ್ಮಗಳನ್ನು ಜಯಿಸುವಂತೆ ಹೇಳಿದಹಾಗಾಗಿ ಇವನು ಅಬ್ಬಲೂರಿಗೆ ಬಂದು ಅಲ್ಲಿನ ಜೈನರೊಡನೆ ವಾದಮಾಡಿ ಅಲ್ಲಿನ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ತಲೆ ಕತ್ತರಿಸಿಕೊಂಡು ಮತ್ತೆ ದೇವರು ಅವನನ್ನು ಬದುಕಿಸಿದ ಪವಾಡ ನಡೆಯಿತುಬಸದಿಯಲ್ಲಿ ಸೋಮೇಶ್ವರಲಿಂಗ ಸ್ಥಾಪನೆ ಮಾಡಿದ ಎಂಬ ಕಥೆ ಶಾಸನದಲ್ಲಿ ಇದೆಈತನ ಪವಾಡವನ್ನು ಚಿತ್ರಿಸುವ ಶಿಲ್ಪಗಳು ಅಲ್ಲಿನ ದೇವಸ್ಥಾನದಲ್ಲಿವೆಇವನ 7 ವಚನಗಳು ದೊರೆತಿವೆಕಾಯ-ಜೀವ ಭೇದನಿತ್ಯಮುಕ್ತನ ಸ್ಥಿತಿಗಳನ್ನು ವರ್ಣಿಸಿದ್ದಾನೆ.


ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು,
ಪಿಸುಣತ್ವದಿಂದ ಗಸಣಿಗೊಂಡು,
ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ.
ತಿಲರಸ-ವಾರಿಯ ಭೇದದಂತೆಮಣಿಯೊಳಗಿದ್ದ ಸೂತ್ರದಂತೆ
ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ
ಗುರುಸ್ಥಲಸಂಬಂಧ,
ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.

ಸೋಮವಾರ, ಜುಲೈ 24, 2017

ಸ್ವಗತ


ಸುಗತ (ಬುದ್ಧ) ವೈರಾಗ್ಯದಿಂದ ಸಂಸಾರ ಬಿಟ್ಟು ಹೊಗುವಾಗ ಹೇಳಿದ ಸತ್ಯಗಳು
ಸೈಲೆಂಟ್ ಮೋಡ್ನಲ್ಲಿ ಹೇಳಿಕೊಂಡ ಮಾತುಗಳು
ಹೆಂಡತಿಯೆದುರಿಗೆ ಗಂಡ ಆಡಬಹುದಾದ ಮಾತುಗಳು
ಹೆಂಡತಿಯ ಗೊಣಗುವಿಕೆಗಳು
ಕೇಳಿಸಿಕೊಳ್ಳಬೇಕಾದವರಿಗೆ ಮಾತ್ರ ಕೇಳುವಂತೆ ನುಡಿಯುವ ಉಕ್ತಿಗಳು
ಮನೋಗತಗಳನ್ನೆಲ್ಲ ವ್ಯಕ್ತಪಡಿಸುವ ಸುರಕ್ಷಿತ ಮಾರ್ಗ
ಆವರಣದೊಳಗಿನ ಸಂಭಾಷಣೆ
ನಮ್ಮೆದುರಾಳಿ ಗೆದ್ದಾಗ ನಾವಾಡುವ ಟೀಕಾರೋಪಗಳು
ಇಷ್ಟವಿಲ್ಲದ ನೆಂಟರು ಬಂದಾಗ ನಾವಾಡುವ ಸ್ವಾಗತ ವಚನ
ಹೇಳಲು ಪೂರ್ತಿ ಧೈರ್ಯವಿಲ್ಲದ ಮಾತುಗಳು ಹೊರಬೀಳುವ ಮಾರ್ಗ
ರಾತ್ರಿ ನಿದ್ರೆಯಲ್ಲಾಡಿದ ಉವಾಚಗಳು
ನಿಮ್ಮೊಳಗಿನ ಧೈರ್ಯ ಸ್ಥಗಿತಗೊಂಡಾಗ ಮಾಡುವ ಭಾಷಣವೂ ಸ್ವಗತವೇ
ಪ್ರಿಯೆಯ ಸೌಂದರ್ಯದ ಬಗೆಗಿನ ನಿಜವಾದ ಅಭಿಪ್ರಾಯ
ನಿಮ್ಮ ಶಿಕ್ಷಕ ನಿಮ್ಮನ್ನು ಬೈದಾಗ ಮನಸ್ಸಿನಲ್ಲೇ ಬೈದುಕೊಂಡದ್ದು
ಸ್ವಂತ ಅಭಿಪ್ರಾಯಗಳಲ್ಲಿ ಹೆಚ್ಚಿನವು ಸ್ವಗತಗಳೇ
ನೀವು ಹೇಳಿದ್ದು ಬೇರೆಯವರಿಗೆ ಕೇಳದಿದ್ದರೆ ಅದು ಸ್ವಗತವೇ
ಶಪಿಸಿಕೊಳ್ಳುವಿಕೆಗೊಂದು ದಾರಿ
ಅರಣ್ಯ ರೋದನವೂ ಹೌದು, ವನಾಲಾಪವೂ ಹೌದು

-ವಿಶ್ವನಾಥ ಸುಂಕಸಾಳ

1.. ಜಾಹೀರಾತು

2.ಜಾಹೀರಾತು