fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಡಿಸೆಂಬರ್ 22, 2019

ಅಮ್ಮಾ ನೀನ್ನ ಕಂದನ ಮೇಲಿರುವ ಪ್ರೀತಿ

ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ 
ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ" 

ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ 
“ಮಳೆ ನಿಲ್ಲುವವರೆಗೆ ತಡೆದು 
ಬರಬಾರದಿತ್ತೇ ಕಮಂಗಿ" 

ಅಷ್ಟರಲ್ಲಿ ಗುಡುಗುಟ್ಟಿತು
ಅಪ್ಪನ ಘಡಸು ಧ್ವನಿ 
" ಶೀತಜ್ವರ ಬಂದರೆ ದುಡ್ದಿಡಬೇಕು 
ಹುಡುಗಾಟ ಬಿಡೋ ಶನಿ" 

ಮೃದು ಕೈಯಲಿ ತಲಿ ಒರೆಸುತ್ತಾ
ಅಮ್ಮ ದೂರಿದಳು ಮಮತೆಯಲಿ 
"ಹಾಳು ಮಳೆಯೇ ತಡಿಯಬಾರದಿತ್ತೇ 
ಮಗ ಕಾಲಿಡುವ ತನಕ ಮನೆಯಲಿ" 

ಅಮ್ಮನ ಪ್ರೀತಿಗೆ ಸಾಟಿ ಇಲ್ಲ. ಅದನ್ನೇ ನಿರೂಪಿಸುತ್ತಿದೆ ಈ ಕವಿತೆ 

ಇಂದ==> ಮಹದೇವ ಕುಲಕರ್ಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು