ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ
ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ"
ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ
“ಮಳೆ ನಿಲ್ಲುವವರೆಗೆ ತಡೆದು
ಬರಬಾರದಿತ್ತೇ ಕಮಂಗಿ"
ಅಷ್ಟರಲ್ಲಿ ಗುಡುಗುಟ್ಟಿತು
ಅಪ್ಪನ ಘಡಸು ಧ್ವನಿ
" ಶೀತಜ್ವರ ಬಂದರೆ ದುಡ್ದಿಡಬೇಕು
ಹುಡುಗಾಟ ಬಿಡೋ ಶನಿ"
ಮೃದು ಕೈಯಲಿ ತಲಿ ಒರೆಸುತ್ತಾ
ಅಮ್ಮ ದೂರಿದಳು ಮಮತೆಯಲಿ
"ಹಾಳು ಮಳೆಯೇ ತಡಿಯಬಾರದಿತ್ತೇ
ಮಗ ಕಾಲಿಡುವ ತನಕ ಮನೆಯಲಿ"
ಅಮ್ಮನ ಪ್ರೀತಿಗೆ ಸಾಟಿ ಇಲ್ಲ. ಅದನ್ನೇ ನಿರೂಪಿಸುತ್ತಿದೆ ಈ ಕವಿತೆ
ಇಂದ==> ಮಹದೇವ ಕುಲಕರ್ಣಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.