ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಆಗಸ್ಟ್ 20, 2018

ಹಬ್ಬದ ಸಾಲು

ಶ್ರಾವಣ ಮಾಸವು
ಬಂದಿತು ಎಂದರೆ
ಬರುವುದು ಹಬ್ಬದ ಸಾಲು,
ಉಣುವುದು ಉಡುವುದು
ಸಂಭ್ರಮ ಪಡುವುದು
ಹರುಷವೆ ಎಲ್ಲರ ಪಾಲು
ಮೊದಲು ಬರುವದು
ನಾಗರ ಚವುತಿ
ಹಾವಿಗೆ ಹಾಲೆರೆಯುವರು,
ವಿಷ ಜಂತುವಿಗೂ
ಸಿಹಿ ನೀಡುತಲಿ
ಪ್ರಾಣಿ ಪ್ರೀತಿ ತೋರುವರು
ನಂತರ ಬರುವಳು
ವರ ಮಹಾಲಕುಮಿ
ಸಿರಿ ಸಂಪದದ ಅರಸಿ,
ರಕ್ಷಾ ಬಂಧನವು
ಅಣ್ಣ-ತಂಗಿಯರ
ಪೊರೆವುದು ಬಂಧನ ಬೆಸೆಸಿ.
ಇದೇ ಮಾಸದಲಿ
ಸ್ವಾತಂತ್ರ್ಯದ ದಿನ
ಭಾರತೀಯರ ಹಬ್ಬ,
ತ್ರಿವರ್ಣ ಧ್ವಜವು
ಬಾನಲಿ ಮೆರೆದಿದೆ
ಮೀರಿದೆ ಹರುಷವು ಅಬ್ಬ!
ಕೃಷ್ಣನ ಜನುಮ
ದಿನವು ಬರುವುದು
ಬಹುಳ ಅಷ್ಟಮಿ ದಿವಸ
ಗೀತೆಯ ಸಾರಿ
ಜೀವನ ಧನ್ಯತೆ
ಪಾಠವ ಹೇಳಿದ ಅರಸ.
ಹೀಗೆಯೆ ಶ್ರಾವಣ
ಮಾಸವು ಪೂರ್ತಿ
ಸಂಭ್ರಮ ಪಡುವ ಕಾಲ,
ಭಕುತಿ ಪ್ರೇಮಗಳ
ಭಾವೈಕ್ಯತೆಯನು
ಬೆಳೆಪುದೆ ಇದರ ಮೂಲ
-ಗುರುರಾಜ್ ಬೆಣಕಲ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು