fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಜನವರಿ 14, 2017

ಹರಿಹರ

*ಟಿ.ಎಂ.ಸತೀಶ್
ಹರಿಹರ, Harihara, kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳುದಾವಣಗೆರೆ ಜಿಲ್ಲೆಯಲ್ಲಿರುವ ಹರಿಹರ ಪ್ರಮುಖ ಪಟ್ಟಣ. ಹೆಸರೇ ಹೇಳುವಂತೆ ಇದು ಶಿವ ಹಾಗೂ ವಿಷ್ಣು ಕ್ಷೇತ್ರ. ಇಲ್ಲಿ ಶಿವ ಹಾಗೂ ವಿಷ್ಣು ಇಬ್ಬರೂ ಒಟ್ಟಿಗೇ ನೆಲೆಸಿದ್ದಾರೆ. ಈ ಪವಿತ್ರ ಭೂಮಿಯನ್ನು ಹರಹರಕ್ಷೇತ್ರವಾಗಿ ಮಾಡಿದ್ದಾರೆ.
ಬೆಂಗಳೂರಿಗೆ 227 ಕಿಲೋ ಮೀಟರ್ ದೂರದಲ್ಲಿರುವ ಈ ಪಟ್ಟಣದಲ್ಲಿ 1223ರಲ್ಲಿ ನಿರ್ಮಿಸಿದರೆನ್ನಲಾದ ಹೊಯ್ಸಳ ಶೈಲಿಯ ಅತ್ಯಂತ ಪ್ರಾಚೀನವಾದ ಹರಿಹರೇಶ್ವರ ಅಥವಾ ಶಂಕರನಾರಾಯಣ ದೇವಾಲಯವಿದೆ. ಈ ದೇವಾಲಯ ಸಹ ಮಿಕ್ಕೆಲ್ಲ ಹೊಯ್ಸಳ ದೇವಾಲಯಗಳಂತೆಯೇ ಪ್ರವೇಶದ್ವಾರ, ಮುಖಮಂಟಪ, ಗರುಡಗಂಬ, ಸುಕನಾಸಿ, ಭುವನೇಶ್ವರಿ, ಜಾಲಂದ್ರಗಳನ್ನು ಒಳಗೊಂಡಿದೆ.
ಗರ್ಭಗುಡಿಯಲ್ಲಿ ಹರಿಹರರ ಸುಂದರ ಮೂರ್ತಿಯಿದೆ. ಅರ್ಧ ಹರನ ರೂಪ, ಇನ್ನರ್ಧ ಹರಿಯ ರೂಪವಿರುವ ಈ ಸುಂದರ ಮೂರ್ತಿಯ ನಾಲ್ಕು ಕೈಗಳ ಪೈಕಿ ಎರಡರಲ್ಲಿ ತ್ರಿಶೂಲ ಹಾಗೂ ಚಕ್ರವಿದೆ.  ಇನ್ನೆರೆಡು ಕೈಗಳ ಪೈಕಿ ಒಂದರಲ್ಲಿ ಶಂಖು ಹಾಗೂ ಅಭಯ ಮುದ್ರೆಯಿದೆ. ದೇವಾಲಯದ ಭುವನೇಶ್ವರಿಗಳಲ್ಲಿನ ಕಲಾಶ್ರೀಮಂತಿಕೆ ಮನಸೆಳೆಯುತ್ತದೆ. ಗರ್ಭಗೃಹದ ಮುಂದಿನ ಹಜಾರದಲ್ಲಿರುವ ನುಣುಪಾದ ಕಂಬಗಳು ಮನಮೋಹಕವಾಗಿವೆ.
ದೇವಾಲಯದ ಭಿತ್ತಿಗಳ ಪಟ್ಟಿಕೆಗಳಲ್ಲಿ ಸೂಕ್ಷ್ಮ ಕಲಾಕೆತ್ತನೆಯಿದೆ. ದೇವಾಲಯ ಗೋಪುರಗಳ ಸಾಲು, ನೃತ್ಯಭಂಗಿಯಲ್ಲಿರುವ ಮದನಿಕೆಯರು, ಹೂಬಳ್ಳಿಗಳಿವೆ. ದೇವಾಲಯದ ಒಳಗೆ ನುಣುಪಾದ ಕಂಬಗಳಿವೆ. ಇಲ್ಲಿ ಹರಿಹರ ರೂಪದಲ್ಲಿ ಶಂಕರನಾರಾಣರು ಬಂದು ನೆಲೆಸಿದ್ದೇಕೆ ಎಂಬ ಬಗ್ಗೆ ಸ್ಥಳಪುರಾಣ ಹೀಗೆ ಸಾರುತ್ತದೆ.
ತುಂಗಭದ್ರಾ ನದಿ ದಂಡೆಯ ಮೇಲಿರುವ ಈ ಊರಿನಲ್ಲಿ ಹಿಂದೆ ಇಲ್ಲಿ ಗುಹಾಸುರನೆಂಬ ರಾಕ್ಷಸನಿದ್ದ. ಆತ ತನ್ನದೇ ಆದ ಸಾಮ್ರಾಜ್ಯ ಸ್ಥಾಪಿಸಿ ಈ ಪಟ್ಟಣವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದ. ಗುಹಾಸುರ ಬ್ರಹ್ಮನನ್ನು ಕುರಿತು ದೀರ್ಘ ತಪವನ್ನಾಚರಿಸಿ ತನಗೆ ಸಾವೇ ಬಾರದಂತೆ ವರ ನೀಡೆಂದು ಬೇಡಿದ. ನರರಿಗೆ ಅಮರತ್ವವು ಸಲ್ಲ. ಬೇರೇನಾದರೂ ವರ ಕೇಳಿಕೋ ಎಂದಾಗ, ಗುಹಾಸುರ ತನಗೆ ಪ್ರತ್ಯೇಕವಾಗಿ ಹರಿಯಿಂದಲಾಗಲೀ, ಹರನಿಂದಲಾಗಲೀ ಸಾವು ಬಾರದಂತೆ ವರ ನೀಡೆಂದ. ಬ್ರಹ್ಮ ತಥಾಸ್ತು ಎಂದ.
ಹರಿಹರ, Harihara, kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳುಹೀಗೆ ವರದ ಬಲದಿಂದ ಮದೋನ್ಮತ್ತನಾದ ಆ ಅಸುರ, ತನಗಿನ್ನು ಅಳಿವಿಲ್ಲವೆಂದು ನರರನ್ನೂ, ದೇವಾನು ದೇವತೆಗಳನ್ನೂ ಪರಿಪರಿಯಾಗಿ ಹಿಂಸಿಸತೊಡಗಿದ. ಗುಹಾಸುರನ ಉಪಟಳ ವಿಪರೀತವಾದಾಗ ಶಿಷ್ಟರಕ್ಷಣೆ ಹಾಗೂ ದುಷ್ಟ ಶಿಕ್ಷಣೆಗಾಗಿ  ಶಿವ ಮತ್ತು ವಿಷ್ಣು ಇಬ್ಬರೂ ಒಂದುಗೂಡಿ ಹರಿಹರ ರೂಪತಾಳಿ  ರಾಕ್ಷಸನನ್ನು ಕೊಂದು ಹಾಕಿದರು. ಗುಹಾಸುರ ಶಂಕರನಾರಾಯಣರಿಂದ ಸಾಯುವ ಮುನ್ನ  ಕ್ಷೇತ್ರಕ್ಕೆ ತನ್ನ ಹೆಸರನ್ನು ಇಡಬೇಕೆಂದು ಕೇಳಿಕೊಂಡದ್ದರಿಂದ ಇದಕ್ಕೆ ಗುಹಾರಣ್ಯಕ್ಷೇತ್ರ ವೆಂಬ ಹೆಸರು ಬಂದಿತ್ತು. ಆದರೆ, ಶಂಕರ ನಾರಾಯಣರು ಹರಿಹರರೂಪ ತಾಳಿದ ಈ ಕ್ಷೇತ್ರ  ಹರಿಹರವೆಂದೇ ಖ್ಯಾತವಾಗಿದೆ.
ಇಲ್ಲಿರುವ ದೇವಾಲಯದಲ್ಲಿ ಅನೇಕ ಶಾಸನಗಳೂ ದೊರೆತಿವೆ. ಈ ಪುಣ್ಯಕ್ಷೇತ್ರದಲ್ಲಿರುವ ದೇವಾಲಯಕ್ಕೆ ಚಾಳುಕ್ಯರು, ಹೊಯ್ಸಳರು, ವಿಜಯನಗರದ ರಾಜರು, ಸೇವುಣರು ಭಕ್ತಿಯಿಂದ ನಡೆದುಕೊಂಡು  ಧರ್ಮ ದತ್ತಿಗಳನ್ನು ಬಿಟ್ಟರೆಂದು ಶಾಸನಗಳು ಸಾರುತ್ತವೆ.
ಶಿವ -ವಿಷ್ಣುವಿನ ನಡುವೆ ಯಾವುದೇ ಭೇದವಿಲ್ಲ. ಶಂಕರ ನಾರಾಯಣರಿಬ್ಬರೂ ಒಬ್ಬರೇ ಎಂದು ಸಾರುತ್ತಿದೆ.  

     ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು