fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಸೆಪ್ಟೆಂಬರ್ 14, 2016

ಚಂಪಕಧಾಮ ಸ್ವಾಮಿಯ ದೇವಾಲಯ ಬನ್ನೇರುಘಟ್ಟ

*ಟಿ.ಎಂ.ಸತೀಶ್
Champakadhama swamy temple, Bannerughatta, kannadaratna.com, ourtemples.in, karnataka temples,ಬೆಂಗಳೂರು ಮಹಾ ನಗರದಿಂದ 16 ಕಿಮೀ ದೂರದಲ್ಲಿರುವ ಪುರಾತನ ಗ್ರಾಮವೇ ಬನ್ನೇರುಘಟ್ಟ. 997 ಅಡಿ ಎತ್ತರವಾದ ಗಿರಿಶ್ರೇಣಿ, ದಟ್ಟವಾದ ಅರಣ್ಯವನ್ನು ಹೊಂದಿರುವ ಈ ಸ್ಥಳ ಆನೆಗಳ ಬೀಡಷ್ಟೇ ಅಲ್ಲ ಚಂಪಕಧಾಮಸ್ವಾಮಿಯ ನೆಲೆವೀಡೂ ಹೌದು.
ಬೆಂಗಳೂರಿಗೆ ಅನತಿ ದೂರದಲ್ಲೇ ಇಂದಿಗೂ 129 ಚದರ ಕಿಲೋ ಮೀಟರ್ ದಟ್ಟ ಕಾನನವಿದೆ, ಇದರಲ್ಲಿ 100ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದರೆ ಜನ ನಂಬುವುದಿಲ್ಲ. ಆದರಿದು ವಾಸ್ತವ. ಈ ಪ್ರಾಣಿಗಳನ್ನು ಕಾನನಗಳನ್ನು ಸಂರಕ್ಷಿಸಲು ಸರ್ಕಾರ ಇಲ್ಲಿ ವನ್ಯಜೀವಿ ಧಾಮವನ್ನು ನಿರ್ಮಿಸಿದ್ದು, ಈ ಪ್ರದೇಶವನ್ನು ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಿದೆ.
ಬನ್ನೇರುಘಟ್ಟ ಕಾನನಪ್ರದೇಶವಷ್ಟೇ ಅಲ್ಲ ಚಂಪಕಧಾಮ ಸ್ವಾಮಿಯ ನೆಲೆವೀಡೂ ಹೌದು. ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೋಗುವ ಮುನ್ನ ಬನ್ನೇರುಘಟ್ಟ ಗ್ರಾಮದಲ್ಲಿ ಚಂಪಕಧಾಮ ಸ್ವಾಮಿಯ ಭವ್ಯ ದೇವಾಲಯ ನಮ್ಮನ್ನು ಕೈಬೀಸಿ ಕರೆಯುತ್ತದೆ.
ಬೆಂಗಳೂರಿನಿಂದ ಬನ್ನೇರುಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಸಾಗಿದರೆ ದೇವಾಲಯದ ಮುಂದೆಯೇ ಹೋಗಿ ನಾವು ನಿಲ್ಲುತ್ತೇವೆ. ಎತ್ತರವಾದ ಗಿರಿಯ ಮೇಲೆ ಚಂಪಕಧಾಮ ದೇವಾಲಯವಿದೆ. ಅತ್ಯಂತ ಆಕರ್ಷಕವಾದ  ಮಹಾದ್ವಾರ ನಯನಮನೋಹರವಾಗಿದೆ.
ಬಹು ಹಿಂದೆಯೇ ಇಲ್ಲಿ ಜನವಸತಿ ಇತ್ತು, ದಾಮೋದರ ದೇವಾಲಯವಿತ್ತು ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ಈ ದೇವಾಲಯವನ್ನು ಹೊಯ್ಸಳರ ಸಾಮಂತನಾಗಿದ್ದ ಪೂರ್ವಾದಿರಾಯನೆಂಬ ತಮಿಳರಸ 1257ರಲ್ಲಿ ಕಟ್ಟಿಸಿದ ಎಂದು ಶಾಸನಗಳು ಸಾರುತ್ತವೆ.
ಮೆಟ್ಟಿಲುಗಳನ್ನೇರಿ ಮುಖ್ಯದ್ವಾರ ಪ್ರವೇಶಿಸಿ ಒಳಹೋದರೆ, ಬಂಡೆಯ ಮೇಲೆ ವಿಶಾಲವಾದ ಹಾಗೂ ಭವ್ಯವಾದ Champakadhama swamy temple, Bannerughatta, kannadaratna.com, ourtemples.in, karnataka temples,ದೇವಾಲಯವಿದೆ. ದೇವಾಲಯದ ಎದುರು ಧ್ವಜಸ್ತಂಭವಿದೆ. ಈ ಸ್ತಂಭದ ಬುಡದಲ್ಲಿ 12ನೇ ಶತಮಾನಕ್ಕೆ ಸೇರಿದ ತಮಿಳು ಶಾಸನವೂ ಇದೆ. ಗರ್ಭಗುಡಿಯಲ್ಲಿ ಲಕ್ಷ್ಮೀ ಹಾಗೂ ಭೂದೇವಿ ಸಹಿತ ಚಂಪಕಧಾಮ ಸ್ವಾಮಿಯ ಸುಂದರ ಮೂರ್ತಿಯಿದೆ. ದೇವಾಲಯದಲ್ಲಿ ಪುರಾತನ ಉತ್ಸವ ಮೂರ್ತಿ ಹಾಗೂ ಸುಂದರವಾದ ಗರುಡಗಂಭವೂ ಇದೆ.
ಹಿಂಬದಿಯಲ್ಲಿ ಇರುವ ಎತ್ತರ ಗಿರಿಯಲ್ಲಿ  ಲಕ್ಷ್ಮೀನರಸಿಂಹ, ಸಂಪಂಗಿರಾಮದೇವರ ದೇವಾಲಯವಿದೆ. ಪ್ರತಿವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಇಲ್ಲಿ 3 ದಿನಗಳ ಕಾಲ ರಥೋತ್ಸವ ಜರುಗುತ್ತದೆ. ಸಂಜೆಯ ವೇಳೆ ಈ ಗಿರಿಶಿಖರದ ಮೇಲೆ ನಿಂತು ಉತ್ತರದಿಕ್ಕಿಗೆ ಕಣ್ಣು ಹಾಯಿಸಿದರೆ ಬೆಂಗಳೂರಿನ ಝಗಮಗಿಸುವ ವಿದ್ಯುತ್ ದೀಪಗಳ ನೋಟ ಮನಸೆಳೆಯುತ್ತದೆ. ತುಸು ಮಬ್ಬು ಗತ್ತಲಿರುವಾಗ ದಕ್ಷಿಣದಿಕ್ಕಿಗೆ ಹಾಗೂ ಪೂರ್ವಕ್ಕೆ ನೋಡಿದರೆ ಹಚ್ಚ ಹಸುರಿನಿಂದ ಕೂಡಿದ ದಟ್ಟವಾದ ಕಾನನ ಕಣ್ಮನ ಸೆಳೆಯುತ್ತದೆ.

     ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು