fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಸೆಪ್ಟೆಂಬರ್ 26, 2016

ಉಗ್ಘಡಿಸುವ ಗಬ್ಬಿದೇವಯ್ಯ


ಎರಡನರಿವಲ್ಲಿ ಭಂಡಾರಿ ಬಸವಣ್ಣ,
ಮೂರನರಿವಲ್ಲಿ ಚೆನ್ನಬಸವಣ್ಣ,
ಒಂದನರಿವಲ್ಲಿ ಪ್ರಭುದೇವರು.
ಇಂತೀ ಉಭಯದ ಸಂಗಂಗಳ ಮರೆದಲ್ಲಿ ನಿಜಗುಣ ನಿಜಸಂಗ.
ಇಂತೀ ಬಂಧಮೋಕ್ಷಕರ್ಮಂಗಳು
ಒಂದೂ ಇಲ್ಲದ ಮತ್ತೆ
ಬಾಗಿಲಿಂಗೆ ತಡಹಿಲ್ಲ.
ಎನ್ನ ಮಣಿಹ ಕೆಟ್ಟಿತ್ತುಕೂಡಲಸಂಗಮದೇವರಲ್ಲಿ ಬಸವಣ್ಣ
ಎನಗಾ ಮಣಿಹ ಬೇಡಾಯೆಂದ ಕಾರಣ.

ಶನಿವಾರ, ಸೆಪ್ಟೆಂಬರ್ 24, 2016

ನೆಪ

·   ನೆನಪಾಗದ್ದಕ್ಕೆ ನಾವು ಕೊಡುವ ಕಾರಣ
·   ಇದಕ್ಕಾಗಿ ತುಂಬ ಹುಡುಕಬೇಕಾಗಿಲ್ಲ
·   ರಜೆ ಚೀಟಿಯ ಪ್ರಮುಖ ವಸ್ತು
·   ತಪ್ಪು ಮಾಡಿ ತಪ್ಪಿಸಿಕೊಳ್ಳಲು ಇರುವ ಶಾರ್ಟ್ಕಟ್
·  ಸಮಯಕ್ಕೆ ಸರಿಯಾಗಿ ನೆಪ ಹುಡುಕಬಲ್ಲವನೇ ನಿಜವಾದ ಜಾಣನೆನಿಸುತ್ತಾನೆ
·    ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಕೊಡುವ ಜವಾಬು
·    ಲೇಟಾಗಿ ಬಂದ ಗಂಡನ ಪ್ರಲಾಪಗಳು
·    ಆಡಿದ ಸುಳ್ಳಿನ ಸುಳಿಯಲಿ, ಸಿಲುಕದಿರಲು ಬಳಸುವ ಆಧಾರ
·    ಸೋಮವಾರಕ್ಕೆ ಕೆಲಸವನ್ನು ಮುಂದೂಡಲು ಸೋಮಾರಿಕೊಡುವ ಕಾರಣ
·    ಇದು ಸುಳ್ಳೂ ಆಗಿರಬಹುದು, ಸತ್ಯವೂ ಆಗಿರಬಹುದು
· ನಮ್ಮ ಬುದ್ಧಿ ಅತ್ಯಂತ ಹೆಚ್ಚು ಕೆಲಸ ಮಾಡುವುದು ಇದನ್ನು ಹುಡುಕುವುದಕ್ಕಾಗಿಯೇ
-ವಿಶ್ವನಾಥ ಸುಂಕಸಾಳ

ಗುರುವಾರ, ಸೆಪ್ಟೆಂಬರ್ 22, 2016

ಗರ್ಭದಲಿ ನಾನೊಬ್ಬನೇ




ನವಮಾಸಗಳು ಅಮ್ಮನ ಗರ್ಭದಲಿ 
ಸುತ್ತಲೂ ರಕ್ತಮಾಂಸವು ಜಿನುಗುತಿರಲೂ 
ಉಂಡುಂಡು ಹೊಟ್ಟೆ ಉಬ್ಬರಿಸುವ ತನಕ.. 
ಆಗಾಗ ಅವಳ ಹೊಟ್ಟೆಗೆ ಒದೆಯುತ
ತೆವಳಾಡುತ ಯೋನಿಯಾಚೆಗಿನ ಬದುಕು ಗೊತ್ತಿಲ್ಲದ ಕತ್ತಲು..! 
ಬೀಜವಾಗಿ, ಕುಡಿಯಾಗಿ
ಚಿಗುರಾಗಿ ಬೆಳೆದು ಗರ್ಭದೊಳಗಿನ ಸ್ವರ್ಗವನು ಹಸನ ಮಾಡಿ
ಅಮ್ಮನಿಗೆ ಭಾರವಾಗಿ ಇಡೀ ಮನೆಯಲ್ಲಿ ನಾನೊಬ್ಬನೇ..! 
ಬುದ್ದಿಲದ್ದಿಗಳ ಹೇರಿಕೆ ಇಲ್ಲದ ಹಾಳೆಯಲಿ 
ಅಮ್ಮನು ಕೊಟ್ಟ ನಾಳದಲಿ ಬದುಕುತಾ
ಚಿಂತಿಸುತಾ.. ಸುಖವಾಗಿದ್ದೆ, ಹೆತ್ತವರ ಕನಸಾಗಿದ್ದೆ
ಎಲ್ಲರ ಪರಮಾತ್ಮನಾಗಿದ್ದೆ. 
ಅಂದು ಅಮ್ಮನ ಹೊಟ್ಟೆಯಲಿ ನಾನೊಬ್ಬನೇ..! 
ಅಸೂಹೆ ಪಟ್ಟಿರಬೇಕು ನನ್ನ ನಗುವಸುಖವ ನೋಡಿ. 
ಒಲ್ಲದ ಮನಸ್ಸಿನಲಿ ಹೊರಗೆಳೆದು ಹಾಕಿ, 
ಅಮ್ಮನ ಗರ್ಭವನು ಖಾಲಿಮಾಡಿ
ಕಾಣದ ಪ್ರಪಂಚದಲಿ ಒಲ್ಲದ ಮನಸ್ಸಿನಿಂದ ಕಣ್ಣುಬಿಟ್ಟು ನೋಡುತ್ತಿದ್ದೆ 
ಇಲ್ಲಿಯವರೆಗೆ ನಾನೆಲ್ಲಿದ್ದೆ ಅಂತ ಚಿಂತಿಸುತ್ತಿದ್ದೆ.


Posted By  ಶ್ರೀಧರ ಬನವಾಸಿ (ಫಕೀರ

ಮಂಗಳವಾರ, ಸೆಪ್ಟೆಂಬರ್ 20, 2016

ಬ್ಯಾ ಬ್ಯಾ ಕುರಿ ಮರಿ

ಬ್ಯಾ ಬ್ಯಾ ಕುರಿ ಮರಿ
ನಿನ್ ತವ ವುಲನ ಐತ?
ಇದೆ ಸಾರ್ ಇದೆ ಸಾರ್
ಮೂರ್ ಚೀಲದ್ ತುಂಬ
ಒಂದ್ ನಮ್ ದಣಿಗೋಳ್ಗೆ
ಒಂದ್ ಅವ್ರ್ ಎಂಡ್ರುಗೆ
ಮತ್ತೊಂದ್ ಈ ರಸ್ತೆ ಮೂಲೇಲಿರೊ
ಚಿಕ್ಕ್ ಮಗೀಗೆ

-ಸುಚಿನ್

ಬುಧವಾರ, ಸೆಪ್ಟೆಂಬರ್ 14, 2016

ಚಂಪಕಧಾಮ ಸ್ವಾಮಿಯ ದೇವಾಲಯ ಬನ್ನೇರುಘಟ್ಟ

*ಟಿ.ಎಂ.ಸತೀಶ್
Champakadhama swamy temple, Bannerughatta, kannadaratna.com, ourtemples.in, karnataka temples,ಬೆಂಗಳೂರು ಮಹಾ ನಗರದಿಂದ 16 ಕಿಮೀ ದೂರದಲ್ಲಿರುವ ಪುರಾತನ ಗ್ರಾಮವೇ ಬನ್ನೇರುಘಟ್ಟ. 997 ಅಡಿ ಎತ್ತರವಾದ ಗಿರಿಶ್ರೇಣಿ, ದಟ್ಟವಾದ ಅರಣ್ಯವನ್ನು ಹೊಂದಿರುವ ಈ ಸ್ಥಳ ಆನೆಗಳ ಬೀಡಷ್ಟೇ ಅಲ್ಲ ಚಂಪಕಧಾಮಸ್ವಾಮಿಯ ನೆಲೆವೀಡೂ ಹೌದು.
ಬೆಂಗಳೂರಿಗೆ ಅನತಿ ದೂರದಲ್ಲೇ ಇಂದಿಗೂ 129 ಚದರ ಕಿಲೋ ಮೀಟರ್ ದಟ್ಟ ಕಾನನವಿದೆ, ಇದರಲ್ಲಿ 100ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದರೆ ಜನ ನಂಬುವುದಿಲ್ಲ. ಆದರಿದು ವಾಸ್ತವ. ಈ ಪ್ರಾಣಿಗಳನ್ನು ಕಾನನಗಳನ್ನು ಸಂರಕ್ಷಿಸಲು ಸರ್ಕಾರ ಇಲ್ಲಿ ವನ್ಯಜೀವಿ ಧಾಮವನ್ನು ನಿರ್ಮಿಸಿದ್ದು, ಈ ಪ್ರದೇಶವನ್ನು ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಿದೆ.
ಬನ್ನೇರುಘಟ್ಟ ಕಾನನಪ್ರದೇಶವಷ್ಟೇ ಅಲ್ಲ ಚಂಪಕಧಾಮ ಸ್ವಾಮಿಯ ನೆಲೆವೀಡೂ ಹೌದು. ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೋಗುವ ಮುನ್ನ ಬನ್ನೇರುಘಟ್ಟ ಗ್ರಾಮದಲ್ಲಿ ಚಂಪಕಧಾಮ ಸ್ವಾಮಿಯ ಭವ್ಯ ದೇವಾಲಯ ನಮ್ಮನ್ನು ಕೈಬೀಸಿ ಕರೆಯುತ್ತದೆ.
ಬೆಂಗಳೂರಿನಿಂದ ಬನ್ನೇರುಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಸಾಗಿದರೆ ದೇವಾಲಯದ ಮುಂದೆಯೇ ಹೋಗಿ ನಾವು ನಿಲ್ಲುತ್ತೇವೆ. ಎತ್ತರವಾದ ಗಿರಿಯ ಮೇಲೆ ಚಂಪಕಧಾಮ ದೇವಾಲಯವಿದೆ. ಅತ್ಯಂತ ಆಕರ್ಷಕವಾದ  ಮಹಾದ್ವಾರ ನಯನಮನೋಹರವಾಗಿದೆ.
ಬಹು ಹಿಂದೆಯೇ ಇಲ್ಲಿ ಜನವಸತಿ ಇತ್ತು, ದಾಮೋದರ ದೇವಾಲಯವಿತ್ತು ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ಈ ದೇವಾಲಯವನ್ನು ಹೊಯ್ಸಳರ ಸಾಮಂತನಾಗಿದ್ದ ಪೂರ್ವಾದಿರಾಯನೆಂಬ ತಮಿಳರಸ 1257ರಲ್ಲಿ ಕಟ್ಟಿಸಿದ ಎಂದು ಶಾಸನಗಳು ಸಾರುತ್ತವೆ.
ಮೆಟ್ಟಿಲುಗಳನ್ನೇರಿ ಮುಖ್ಯದ್ವಾರ ಪ್ರವೇಶಿಸಿ ಒಳಹೋದರೆ, ಬಂಡೆಯ ಮೇಲೆ ವಿಶಾಲವಾದ ಹಾಗೂ ಭವ್ಯವಾದ Champakadhama swamy temple, Bannerughatta, kannadaratna.com, ourtemples.in, karnataka temples,ದೇವಾಲಯವಿದೆ. ದೇವಾಲಯದ ಎದುರು ಧ್ವಜಸ್ತಂಭವಿದೆ. ಈ ಸ್ತಂಭದ ಬುಡದಲ್ಲಿ 12ನೇ ಶತಮಾನಕ್ಕೆ ಸೇರಿದ ತಮಿಳು ಶಾಸನವೂ ಇದೆ. ಗರ್ಭಗುಡಿಯಲ್ಲಿ ಲಕ್ಷ್ಮೀ ಹಾಗೂ ಭೂದೇವಿ ಸಹಿತ ಚಂಪಕಧಾಮ ಸ್ವಾಮಿಯ ಸುಂದರ ಮೂರ್ತಿಯಿದೆ. ದೇವಾಲಯದಲ್ಲಿ ಪುರಾತನ ಉತ್ಸವ ಮೂರ್ತಿ ಹಾಗೂ ಸುಂದರವಾದ ಗರುಡಗಂಭವೂ ಇದೆ.
ಹಿಂಬದಿಯಲ್ಲಿ ಇರುವ ಎತ್ತರ ಗಿರಿಯಲ್ಲಿ  ಲಕ್ಷ್ಮೀನರಸಿಂಹ, ಸಂಪಂಗಿರಾಮದೇವರ ದೇವಾಲಯವಿದೆ. ಪ್ರತಿವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಇಲ್ಲಿ 3 ದಿನಗಳ ಕಾಲ ರಥೋತ್ಸವ ಜರುಗುತ್ತದೆ. ಸಂಜೆಯ ವೇಳೆ ಈ ಗಿರಿಶಿಖರದ ಮೇಲೆ ನಿಂತು ಉತ್ತರದಿಕ್ಕಿಗೆ ಕಣ್ಣು ಹಾಯಿಸಿದರೆ ಬೆಂಗಳೂರಿನ ಝಗಮಗಿಸುವ ವಿದ್ಯುತ್ ದೀಪಗಳ ನೋಟ ಮನಸೆಳೆಯುತ್ತದೆ. ತುಸು ಮಬ್ಬು ಗತ್ತಲಿರುವಾಗ ದಕ್ಷಿಣದಿಕ್ಕಿಗೆ ಹಾಗೂ ಪೂರ್ವಕ್ಕೆ ನೋಡಿದರೆ ಹಚ್ಚ ಹಸುರಿನಿಂದ ಕೂಡಿದ ದಟ್ಟವಾದ ಕಾನನ ಕಣ್ಮನ ಸೆಳೆಯುತ್ತದೆ.

     ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಶನಿವಾರ, ಸೆಪ್ಟೆಂಬರ್ 10, 2016

ನುಡಿಮುತ್ತು - 38



 ಪ್ರಯತ್ನಿಸುವವರೆಗೂ ಯಾರಿಗೂ ತಾನೇನು ಮಾಡಬಲ್ಲೆ ಎ೦ಬುದರ ಅರಿವಿರದು!
ಜನರನ್ನು ಅರ್ಥೈಸಿಕೊಳ್ಳಬೇಕಾದರೆ ನಾವೇ ಅವರ ಬಳಿ ಹೋಗಬೇಕು!
ನಾಚಿಕೆ ಮತ್ತು ಭಯವಿಲ್ಲದೆ ಮನುಷ್ಯನ  ಅ೦ತರ೦ಗದಲ್ಲಿ ಕೆಟ್ಟ, ಒಳ್ಳೆಯ, ಸ೦ತೋಷದ ಹಾಗೂ ದು:ಖದ ಎಲ್ಲಾ ರೀತಿಯ ಯೋಚನೆಗಳೂ ಬರುತ್ತವೆ!ನಾನು ಬೇರೆ- ದೇಹ ಬೇರೆ ಎ೦ದು ತಿಳಿವು ತ೦ದುಕೊ೦ಡರೆ ರೋಗದ ಭಾಧೆಯು ಅತ್ಯಲ್ಪವಾಗುತ್ತದೆ- ಎಮ್.ವಿ.ಸೀತಾರಾಮಯ್ಯ
ಯಾವುಧೇ ಧನ ರಾಶಿಯೂ ಸ೦ತೋಷ ಎ೦ಬ ಧನರಾಶಿಯ ಮು೦ದೆ ಧೂಳಿನ ಸ್ಥಾನ- ಸ೦ತ ಕಬೀರರು
ಏಕಾ೦ಗಿತನವನ್ನೇ ಮೊದಲಿನಿ೦ದಲೂ ಅಪ್ಪಿಕೊ೦ಡಲ್ಲಿ ಎಷ್ಟೋ ಮಧುರ ಕ್ಷಣಗಳಿ೦ದ, ಜೀವನಾನುಭವಗಳಿ೦ದ ವ೦ಚಿತರಾಗುತ್ತೇವೆ!
ಎಲ್ಲವನ್ನೂ ಧೇವರೇ ನೋಡಿಕೊಳ್ಳುತ್ತಾನೆ೦ದು ಸುಮ್ಮನೇ ಕುಳಿತುಕೊಳ್ಳುವುದು ಮಹಾ ಮೂರ್ಖತನ!
ನಾಸ್ತಿಕರಿಗಿ೦ತಲೂ ತಮ್ಮ ತಪ್ಪುಗಳಿಗೆ ದೇವರನ್ನು ಗುರಿಯನ್ನಾಗಿಸುವವರು ಅತ್ಯಲ್ಪರು!
"ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ಸಹಾಯ ಎಂದಿಗೂ ದೊಡ್ಡದು."
"ಸಾಧನೆಗೆ ಗುರಿಗಿಂತ ಛಲವೇ ಮುಖ್ಯ"