fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಜೂನ್ 24, 2016

ಅಮೃತಾಂಜನ



·         ನಾನು ಚಿಕ್ಕವನಿರುವಾಗ ನನ್ನ ಅಜ್ಜಿ ತಲೆ ನೋವಿಗೆ ಇದನ್ನೇ ಹಚ್ಚುತ್ತಿದ್ದಳು
·         ಅಮೃತ ಮಥನದಲ್ಲಿ ಅಮೃತ ಸುರರ ಪಾಲಾಯಿತು, ವಿಷ ಅಸುರರ ಪಾಲಾಯಿತು, ಮನುಷ್ಯರಿಗಾಗಿ ಮತ್ತೆ ಮಥಿಸಿದಾಗ ಅಮೃತಾಂಜನ ಸೃಷ್ಟಿಯಾಯಿತು
·         ಎಲ್ಲಾ ವಿವಾಹಿತರೂ ಯಾವತ್ತೂ ಜೊತೆಗಿಟ್ಟುಕೊಳ್ಳಬೇಕಾದದ್ದು
·         ತಲೆ ನೋವಿನ ಜೊತೆಗೆ ತಲೆ ನೋವು ತರುವವರನ್ನೂ ಓಡಿಸುತ್ತೆ
·         ಇದರ ಘಮ್ಮನೆ ಪರಿಮಳವೇ ಹೇಳುತ್ತೆ ಇಲ್ಲೆಲ್ಲೋ ತಲೆನೋವಿದೆ ಎಂದು
·         ಗಂಡ ಹೆಂಡತಿ ಇಬ್ಬರ ನಡುವಿನ ಸ್ನೇಹಿತ
·         ತಲೆ ನೋವು ಬಂದಾಗ ಹಣೆಗೂ ಇದಕ್ಕೂ 'ಹಣಾಹಣಿ'
·         ಕೆಲವರಿಗೆ ಇದರ ವಾಸನೆಯಿಂದ ನಿದ್ದೆಯೇ ಬರದು, ಇನ್ನು ಕೆಲವರಿಗೆ ಇದಿಲ್ಲದಿದ್ದರೆ ನಿದ್ದೆಯೇ ಬರದು
·         ಜನಜಂಗುಳಿಯಲ್ಲಿ ನೆಲೆಸಿರುವವರಿಗೆ ಅಮೃತಾಂಜನವೇ ರಕ್ಷಕ
·         ಆಂಜನೇಯ ಹೊತ್ತು ತಂದ ಸಂಜೀವಿನಿ ಪರ್ವತದ ಮೂಲಿಕೆಗಳಿಂದ ತಯಾರಿಸಿದ್ದರಿಂದ ಇದಕ್ಕೆ ಹೆಸರು
·         ರಾಜಕಾರಣಿಗಳು ತಮ್ಮ ಭಾಷಣಕ್ಕೂ ಮುನ್ನ ಮಾಡಬಹುದಾದ ದೊಡ್ಡ ಉಪಕಾರವೆಂದರೆ ಕೇಳುಗರಿಗೆ ಮೊದಲು ಇದನ್ನು ವಿತರಿಸುವುದು
·         ನಿಮ್ಮ ಸ್ನೇಹಿತನ ಮದುವೆಯಲ್ಲಿ ಕೊಡಬಹುದಾದ ದೊಡ್ಡ ಉಡುಗೊರೆಯೆಂದರೆ ಅಮೃತಾಂಜನದ ದೊಡ್ಡ ಬಾಕ್ಸ್
·         ಮೃತನ ಬಳಿ ಹಚ್ಚಿಕೊಂಡು ಹೋದರೂ ಆತನ ನಾಸಿಕ ಅರಳುವುದು
-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು