fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಫೆಬ್ರವರಿ 14, 2015

ಕೂಡಲ ಸಂಗಮ

koodalasangama, ಕೂಡಲ ಸಂಗಮ, ಕನ್ನಡರತ್ನ.ಕಾಂ, kannadaratna.com, ourtemples.in,       ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಪವಿತ್ರ ಪುಣ್ಯಸ್ಥಳ. ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕೂಡಿ ಸೇರುವ ಸ್ಥಳ ಕೂಡಲಸಂಗಮವೆಂದೇ ಕ್ಯಾತವಾಗಿದೆ. ಹುನಗುಂದಕ್ಕೆ 13 ಕಿಲೋ ಮೀಟರ್ ದೂರದಲ್ಲಿರುವ ಇಲ್ಲಿ ಚಾಳುಕ್ಯ ಶೈಲಿಯ ಸಂಗಮೇಶ್ವರ ದೇವಸ್ಥಾನವಿದೆ.
ಇಲ್ಲಿ ಮನಮೋಹಕವಾದ ಶಿವಲಿಂಗವಿದೆ. ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. 12ನೆಯ ಶತಮಾನದಲ್ಲಿ ಜಾತವೇದಮುನಿಗಳು ಇಲ್ಲಿ ವಿದ್ಯಾಕೇಂದ್ರ ಸ್ಥಾಪಿಸಿದ್ದರು. ಇಲ್ಲಿಯೇ ಬಸವೇಶ್ವರ, ಚೆನ್ನಬಸವಣ್ಣ, ಅಕ್ಕನಾಗಮ್ಮ ಮೊದಲಾದ ಮಹಾನ್ ವ್ಯಕ್ತಿಗಳ ಶಿಕ್ಷಣವಾಗಿದ್ದು ಎಂದು ಇತಿಹಾಸ ಸಾರುತ್ತದೆ.
        ವೀರಶೈವ ಮತೋದ್ಧಾರಕ ಭಕ್ತಿಭಂಡಾರಿ ಬಸವಣ್ಣನವರು ವಿದ್ಯಾಭ್ಯಾಸ ಮಾಡಿದ ಈ ಕ್ಷೇತ್ರದಲ್ಲಿ ಬಸವೇಶ್ವರರ ಆರಾಧ್ಯದೈವ ಸಂಗಮೇಶ್ವರ ದೇವಾಲಯವಿದೆ. ಬಸವಣ್ಣನವರು ತಮ್ಮ ವಚನಗಳೆಲ್ಲವನ್ನೂ ಈ koodalasangama, ಕೂಡಲ ಸಂಗಮ, ಕನ್ನಡರತ್ನ.ಕಾಂ, kannadaratna.com, ourtemples.in, ಕೂಡಲಸಂಗಮದೇವನಿಗೇ ಅಂಕಿತ ಮಾಡಿದ್ದಾರೆ. ಕಲ್ಯಾಣದಲ್ಲಿ ಬಿಜ್ಜಳನ  ಪ್ರಧಾನಿಯಾಗಿದ್ದ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಬಳಿಕ  ಸಂಗಮಕ್ಕೆ ಮರಳಿ ಇಲ್ಲಿಯೇ ಐಕ್ಯರಾದರೆಂದೂ ಇತಿಹಾಸ ತಿಳಿಸುತ್ತದೆ. ಇಲ್ಲಿ ಐಕ್ಯ ಮಂಟಪವೂ ಇದೆ. ಅಲ್ಲದೆ ಗುಮ್ಮಟಾಕಾರದ ಬೃಹತ್ ಸಭಾಭವನ, ಅಷ್ಟಕೋನಾಕಾರದ ಬಸವ ಅಂತಾರಾಷ್ಟ್ರೀಯ ಕೇಂದ್ರ, ಉತ್ಕೃಷ್ಟ ಗ್ರಂಥಾಲಯ ಮತ್ತು ಶರಣಲೋಕ ಆಧುನಿಕ ನಿರ್ಮಾಣವಾಗಿ ಸೇರಿವೆ.



ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು